AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ | ನಿಂದಿಸಿದವರ ಮುಂದೆಯೇ ಸಾಮ್ರಾಟನಾಗಿ ಮೆರೆದ ಸಿರಾಜ್​ ಮಾನವೀಯ ಮುಖ

ಆಸಿಸ್​ ಪ್ರವಾಸದಲ್ಲಿ ಆತನಿಗೆ ಆದ ಮಾನಸಿಕ ಹಿಂಸೆ, ತಂದೆಯ ಅಗಲಿಕೆಯ ನೋವು, ಜನಾಂಗೀಯ ನಿಂದನೆಗಳ ನಡುವೆ ಆತ ತೋರಿದ ಮಾನವಿಯತೆಯ ಮುಖ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದೆ.

ವೈರಲ್ | ನಿಂದಿಸಿದವರ ಮುಂದೆಯೇ ಸಾಮ್ರಾಟನಾಗಿ ಮೆರೆದ ಸಿರಾಜ್​ ಮಾನವೀಯ ಮುಖ
ಪೆಟ್ಟು ತಿಂದ ಗ್ರೀನ್​ ನೆರವಿಗೆ ಬಂದ ಸಿರಾಜ್​
ಪೃಥ್ವಿಶಂಕರ
|

Updated on:Jan 21, 2021 | 5:08 PM

Share

ಮಹಮದ್​ ಸಿರಾಜ್​, ಹೈದ್ರಾಬಾದ್​ನ ಗಲ್ಲಿಯೊಂದರಲ್ಲಿ ಬಡತನಗಳ ನಡುವೆ ಅರಳಿದ ಪ್ರತಿಭೆ. ಸಿರಾಜ್​ ಆಸಿಸ್​ ಪ್ರವಾಸಕ್ಕೆ ತೆರಳುವವರೆಗೆ ಕ್ರಿಕೆಟ್​ ಪ್ರೇಮಿಗಳಲ್ಲಿ ಗುರುತಿಸಿಕೊಂಡಿದ್ದು ತೀರಾ ಕಡಿಮೆ. ಆದರೆ ಆಸಿಸ್​ ಪ್ರವಾಸದಲ್ಲಿ ಆತನಿಗೆ ಆದ ಮಾನಸಿಕ ಹಿಂಸೆ, ತಂದೆಯ ಅಗಲಿಕೆಯ ನೋವು, ಜನಾಂಗೀಯ ನಿಂದನೆಗಳ ನಡುವೆ ಆತ ತೋರಿದ ಮಾನವಿಯತೆಯ ಮುಖ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದೆ.

ಸಿಡ್ನಿಯಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದ ವೇಳೆ ಆಸಿಸ್​ ತಂಡದ ಸ್ಫಿನ್ನರ್​ ಕ್ಯಾಮರೂನ್ ಗ್ರೀನ್‌, ಕ್ರಿಸ್​​ನಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ಜಸ್ಪ್ರಿತ್​ ಬುಮ್ರಾಗೆ ಬೌಲಿಂಗ್​ ಮಾಡಿದರು. ಗ್ರೀನ್‌ ಎಸೆದ ಚೆಂಡನ್ನು ಬುಮ್ರಾ ರಬಸವಾಗಿ ಬಾರಿಸಿದರು. ಬುಮ್ರಾ ಬ್ಯಾಟ್​ನಿಂದ ಸಿಡಿದ ಚೆಂಡು ನೇರವಾಗಿ ಗ್ರೀನ್‌ ಕಡೆಗೆ ಹಾರಿಬಂತು. ರಬಸವಾಗಿ ಬಂದ ಚೆಂಡನ್ನು ಗ್ರೀನ್​ ಹಿಡಿಯಲು ಯತ್ನಿಸಿದರು. ಆ ಯತ್ನದಲ್ಲಿ ಗ್ರೀನ್​ ಕೈಗೆ ತಗುಲಿದ ಚೆಂಡು ಕೈತಪ್ಪಿ ಗ್ರೀನ್​ ತಲೆಗೆ ರಬಸವಾಗಿ ಬಡಿಯಿತು.

ಚೆಂಡು ತಲೆಗೆ ಬಡಿದ ಕೂಡಲೇ ಗ್ರೀನ್​ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ನಾನ್​ ಸ್ರ್ಟೈಕ್​ನಲ್ಲಿ ನಿಂತಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಹಮದ್​ ಸಿರಾಜ್​ ಕೂಡಲೇ ರನ್​ ಗಳಿಸುವುದನ್ನು ಬಿಟ್ಟು, ತಮ್ಮ ಕೈನಲ್ಲಿದ್ದ ಬ್ಯಾಟ್​ ಎಸೆದು ಗ್ರೀನ್​ ನೆರವಿಗೆ ದಾವಿಸಿದರು. ನೋವಿನಿಂದ ಓದ್ದಾಡುತ್ತಿದ್ದ ಗ್ರೀನ್​ನನ್ನು, ಸಿರಾಜ್ ಸಂತೈಸಿದರು. ಸಿರಾಜ್​ ಅವರ ಈ ಕ್ರೀಡಾ ಸ್ಫೂರ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

ಮೊಹಮದ್ ಸಿರಾಜ್​ರ ಮಾನವೀಯ ಮುಖವನ್ನು ಬಿಂಬಿಸುವ ವಿಡಿಯೊ ಹಂಚಿಕೊಂಡಿರುವ ಹಲವರು, ಜನಾಂಗೀಯ ನಿಂದನೆಯನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯನ್ನರು, ‘ಜನಾಂಗೀಯ ನಿಂದನೆ ಮಾಡಿರುವ ಕೆಲವೇ ದುಷ್ಟರು ಇಡೀ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುವುದಿಲ್ಲ. ನಾವು ಕ್ರಿಕೆಟ್ ಇಷ್ಟಪಡುತ್ತೇವೆ’ ಎಂದು ಹೇಳಿದ್ದಾರೆ.

ಇಲ್ಲಿದೆ ವಿಡಿಯೊ

India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ

Published On - 4:55 pm, Thu, 21 January 21

ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್