
ಧಾರವಾಡ: ಹೊರ ಜಿಲ್ಲೆಯಿಂದ SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಬಳಿ ಸ್ವ ವಾಗ್ದಾನ ಪತ್ರ ಬರೆಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಿರುವ ಘಟನೆ ಧಾರವಾಡದ ಬಾಸೆಲ್ ಮಿಷನ್ ಕೇಂದ್ರದಲ್ಲಿ ನಡೆದಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಮತಿಯಿಲ್ಲ ಎಂದು ಹೇಳಲಾಗಿತ್ತು. ಮುಖ್ಯಶಿಕ್ಷಕರಿಂದ ದೃಢೀಕರಣ ಪತ್ರ ತರುವಂತೆ ಕೇಂದ್ರದ ಸಿಬ್ಬಂದಿ ಸೂಚಿಸಿದ್ದರು. ಆದರೆ ಕೊನೆಗೆ ಅಧಿಕಾರಿಗಳು ವಿದ್ಯಾರ್ಥಿಗಳ ಬಳಿ ಸ್ವ ವಾಗ್ದಾನ ಪತ್ರ ಬರೆಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇಂದಿನ ಪರೀಕ್ಷೆಗೆ ಮಾತ್ರ ಈ ಅವಕಾಶ ನೀಡಲಾಗಿದ್ದು, ಮುಂದಿನ ಪರೀಕ್ಷೆಗೆ ದೃಢೀಕರಣ ಪತ್ರ ಅವಶ್ಯಕವಾಗಿ ತರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Published On - 11:01 am, Thu, 25 June 20