AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ […]

ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!
KUSHAL V
|

Updated on:Nov 12, 2020 | 5:08 PM

Share

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ ಅದು ಷಾ ಜಸ್​ರಾಜ್ ಜೈನ್ ಅಂಗಡಿ. ಹೌದು, ಚಿಕ್ಕಪೇಟೆಯಲ್ಲಿರುವ ಈ ಪುಸ್ತಕದ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟ ಹೊಳೆಯಂತೆ ಹರಿದುಬರುತ್ತದೆ ಎಂಬುದು ವರ್ತಕರ ಅಚಲ ನಂಬಿಕೆ.

ಹಾಗಾಗಿ, ಇಲ್ಲಿ ಲೆಕ್ಕದ ಪುಸ್ತಕ ಖರೀದಿಗೆ ಜನಜಂಗುಳಿಯೇ ಕಂಡುಬಂತು. ಕಳೆದ 23 ವರ್ಷಗಳಿಂದ ಲೆಕ್ಕದ ಪುಸ್ತಕ ಮಾರಾಟ ಮಾಡುತ್ತಿರುವ ಷಾ ಜಸ್​ರಾಜ್ ಜೈನ್ ಅಂಗಡಿ ಎದುರು ಜನ ಪುಸ್ತಕ ಖರೀದಿಸಲು ಇಂದು ಬೆಳಗ್ಗೆಯಿಂದ ಸಾಲುಗಟ್ಟಿರುವುದು ಕಂಡುಬಂತು.

ಅಂದ ಹಾಗೆ, ಇಂದು ಸಂಜೆ 4.30 ರಿಂದ 7 ಗಂಟೆಯವರೆಗೆ ಬಹಳ ಒಳ್ಳೆಯ ಸಮಯವಂತೆ. ಹಾಗಾಗಿ, ಲೆಕ್ಕದ ಪುಸ್ತಕ ಖರೀದಿಗಿ ಜನ ಮುಗ್ಗಿಬಿದ್ದರು. ದೀಪಾವಳಿಯ ಲಕ್ಷ್ಮೀ ಪೂಜೆಗೆ ಇಲ್ಲಿ‌ ಖರೀದಿ ಮಾಡುವ ಲೆಕ್ಕದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ರೆ ಅದೃಷ್ಟ ಒಲಿಯುತ್ತಂತೆ. ಹೀಗಾಗಿ, ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿ ಲೆಕ್ಕದ ಪುಸ್ತಕ ಖರೀದಿ ಮಾಡಲು ವ್ಯಾಪಾರಿಗಳು ಬಂದಿದ್ದಾರೆ.

Published On - 5:04 pm, Thu, 12 November 20

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್