AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ […]

ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟವೋ ಅದೃಷ್ಟ!
KUSHAL V
|

Updated on:Nov 12, 2020 | 5:08 PM

Share

ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ. ಅಂತೆಯೇ, ಸಿಲಿಕಾನ್​ ಸಿಟಿಯ ವರ್ತಕರು ಅದರಲ್ಲೂ ನಗರದ ಹೃದಯಭಾಗದಲ್ಲಿರುವ ಚಿಕ್ಕಪೇಟೆಯ ವ್ಯಾಪಾರಿಗಳು ಲೆಕ್ಕದ ಪುಸ್ತಕ ಖರೀದಿಸಲು ಮುಗಿಬೀಳುವ ಏಕೈಕ ಪುಸ್ತಕ ಮಳಿಗೆ ಅಂದರೆ ಅದು ಷಾ ಜಸ್​ರಾಜ್ ಜೈನ್ ಅಂಗಡಿ. ಹೌದು, ಚಿಕ್ಕಪೇಟೆಯಲ್ಲಿರುವ ಈ ಪುಸ್ತಕದ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದ್ರೆ ಅದೃಷ್ಟ ಹೊಳೆಯಂತೆ ಹರಿದುಬರುತ್ತದೆ ಎಂಬುದು ವರ್ತಕರ ಅಚಲ ನಂಬಿಕೆ.

ಹಾಗಾಗಿ, ಇಲ್ಲಿ ಲೆಕ್ಕದ ಪುಸ್ತಕ ಖರೀದಿಗೆ ಜನಜಂಗುಳಿಯೇ ಕಂಡುಬಂತು. ಕಳೆದ 23 ವರ್ಷಗಳಿಂದ ಲೆಕ್ಕದ ಪುಸ್ತಕ ಮಾರಾಟ ಮಾಡುತ್ತಿರುವ ಷಾ ಜಸ್​ರಾಜ್ ಜೈನ್ ಅಂಗಡಿ ಎದುರು ಜನ ಪುಸ್ತಕ ಖರೀದಿಸಲು ಇಂದು ಬೆಳಗ್ಗೆಯಿಂದ ಸಾಲುಗಟ್ಟಿರುವುದು ಕಂಡುಬಂತು.

ಅಂದ ಹಾಗೆ, ಇಂದು ಸಂಜೆ 4.30 ರಿಂದ 7 ಗಂಟೆಯವರೆಗೆ ಬಹಳ ಒಳ್ಳೆಯ ಸಮಯವಂತೆ. ಹಾಗಾಗಿ, ಲೆಕ್ಕದ ಪುಸ್ತಕ ಖರೀದಿಗಿ ಜನ ಮುಗ್ಗಿಬಿದ್ದರು. ದೀಪಾವಳಿಯ ಲಕ್ಷ್ಮೀ ಪೂಜೆಗೆ ಇಲ್ಲಿ‌ ಖರೀದಿ ಮಾಡುವ ಲೆಕ್ಕದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ರೆ ಅದೃಷ್ಟ ಒಲಿಯುತ್ತಂತೆ. ಹೀಗಾಗಿ, ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿ ಲೆಕ್ಕದ ಪುಸ್ತಕ ಖರೀದಿ ಮಾಡಲು ವ್ಯಾಪಾರಿಗಳು ಬಂದಿದ್ದಾರೆ.

Published On - 5:04 pm, Thu, 12 November 20

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ