AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ

ನಿಮ್ಮ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ? ಆ ಪೈಕಿ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಎಷ್ಟು ತೆರಿಗೆ ಹೋಗುತ್ತದೆ, ದೇಶದ ರಾಜ್ಯಗಳ ಪೈಕಿ ಅತಿ ಹೆಚ್ಚಿನ ತೆರಿಗೆ ಹಾಕುತ್ತಿರುವುದು ಯಾವುದು ಇತ್ಯಾದಿ ವಿವರ ಇಲ್ಲಿದೆ.

Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Feb 23, 2021 | 2:35 PM

ಪೆಟ್ರೋಲ್-ಡೀಸೆಲ್ ದರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈಗಿನ ಸನ್ನಿವೇಶಕ್ಕೆ ಹೊಣೆ ಎಂಬುದು ನಿಮಗೆ ಗೊತ್ತಿದೆಯಾ? ಅದು ಹೇಗೆ ಅಂತೀರಾ? ಪೆಟ್ರೋಲ್ ಮೂಲ ಬೆಲೆ ಎಷ್ಟು, ಅದಕ್ಕೆ ಏನೆಲ್ಲಾ ತೆರಿಗೆ- ವೆಚ್ಚ ಬಿದ್ದ ಮೇಲೆ ಇಷ್ಟು ದೊಡ್ಡ ಮೊತ್ತ ಬೀಳುತ್ತದೆ ಎಂಬ ಲೆಕ್ಕಾಚಾರ ನಿಮ್ಮ ಮುಂದಿದೆ. ಓದಿ, ನೋಡಿ…

ಭಾರತದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ನಿತ್ಯವೂ ದರ ಪರಿಷ್ಕರಣೆ ಮಾಡುತ್ತವೆ. ಬೆಲೆ ನಿರ್ಧರಿಸುವ ವೇಳೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕಳೆದ ಹದಿನೈದು ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದ ಹಾಗೆ ಭಾರತವು ತನ್ನ ಅಗತ್ಯದ ಪೈಕಿ ಅತಿ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಪ್ರಮಾಣ ಬದಲಾಗುವುದರಿಂದ ಒಂದೊಂದು ರಾಜ್ಯದಲ್ಲಿ ಒಂದೊಂದು ದರ ಇರುತ್ತದೆ.

ನವದೆಹಲಿಯಲ್ಲಿ ಫೆಬ್ರವರಿ 22ನೇ ತಾರೀಕಿನ ಬೆಲೆ ಆಧರಿಸಿ ದರದ ವಿವರ ಹೀಗಿದೆ:

ಪೆಟ್ರೋಲ್ (ಪ್ರತಿ ಲೀಟರ್)

ಮೂಲ ಬೆಲೆ- ರೂ. 29.34

ಸಾಗಣೆ- 0.37 ಪೈಸೆ

ಡೀಲರ್ ಗಳಿಗೆ ಬೀಳುವ ದರ (ಅಬಕಾರಿ ಸುಂಕ ಮತ್ತು ವ್ಯಾಟ್ ಹೊರತುಪಡಿಸಿ) ರೂ. 29.71

ವ್ಯಾಟ್ (ಡೀಲರ್ ಕಮಿಷನ್ ಮೇಲಿನ ವ್ಯಾಟ್ ಕೂಡ ಸೇರಿ) ರೂ. 19.92

ಅಬಕಾರಿ ಸುಂಕ ರೂ. 32.98

ಡೀಲರ್ ಕಮಿಷನ್ (ಸರಾಸರಿ) ರೂ. 3.69

ಪೆಟ್ರೋಲ್ ಚಿಲ್ಲರೆ ಮಾರಾಟ ದರ ರೂ. 86.30

ದೇಶದ ಟಾಪ್ 10 ರಾಜ್ಯಗಳಲ್ಲಿನ ಪೆಟ್ರೋಲ್ ದರ ಮತ್ತು ತೆರಿಗೆ ಇತರ ವಿವರ

ಮುಂಬೈ, ಥಾಣೆ ಹಾಗೂ ನವೀ ಮುಂಬೈ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26.9

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 93.24

ಮಹಾರಾಷ್ಟ್ರ (ರಾಜ್ಯದ ಉಳಿದೆಡೆ)

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26.2

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 92.61

ಮಧ್ಯಪ್ರದೇಶ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 92.36

ಮಣಿಪುರ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 25

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.41

ಆಂಧ್ರಪ್ರದೇಶ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 25

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.38

ಒಡಿಶಾ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 20.6

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 87.03

ರಾಜಸ್ಥಾನ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 24.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.11

ತಮಿಳುನಾಡು

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 89.11

ತೆಲಂಗಾಣ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 89.10

ಕರ್ನಾಟಕ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.5

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 88.97

ಫೆ. 1ಕ್ಕೆ ಅನ್ವಯ ಆಗುವಂತೆ ಹೆಚ್ಚಿನ ತೆರಿಗೆ ಹಾಕಿದ್ದ ಟಾಪ್ 5 ರಾಜ್ಯಗಳು

ಮುಂಬೈ, ಥಾಣೆ- ರೂ. 26.86

ಮಹಾರಾಷ್ಟ್ರದ ಉಳಿದೆಡೆ- ರೂ. 26.22

ಮಧ್ಯಪ್ರದೇಶ- ರೂ. 25.96

ಆಂಧ್ರಪ್ರದೇಶ- ರೂ. 24.96

ರಾಜಸ್ಥಾನ- ರೂ. 24.68

ಇದನ್ನೂ ಓದಿ: Petrol Price Hike: ನವ ದಂಪತಿಗೆ ಪೆಟ್ರೋಲ್ ಗಿಫ್ಟ್ ನೀಡಿದ ಮಹಾನಗರ ಪಾಲಿಕೆ ಸದಸ್ಯೆ

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!