ಸುಪಾರಿ ಕೇಸ್: ರೌಡಿಶೀಟರುಗಳ ವಿಚಾರಣೆ, ಗಡಿ ಪಾರಿಗೆ SP ಚನ್ನಣ್ಣವರ್ ಸೂಚನೆ ಸಾಧ್ಯತೆ
ನೆಲಮಂಗಲ:ಕಾಂಗ್ರೆಸ್ ಮುಖಂಡನ ಹತ್ಯೆಗೆ 60 ಲಕ್ಷ ಸುಪಾರಿ ಪ್ರಕರಣಕ್ಕೆ ಸಂಬಂದಿಸಿದ್ದಂತೆ ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಹಲವು ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನನ್ನ ಹತ್ಯೆಗೆ 60ಲಕ್ಷ ಸುಪಾರಿ ನೀಡಿದ್ದಾರೆ ಎಂದು ಗೋಪಾಲಪುರ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಡೇರಹಳ್ಳಿ ಜಯರಾಮಯ್ಯ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣವರ್ ಸೂಚನೆ ಮೇರೆಗೆ ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ಗಳಾದ ಬೆತ್ತನಗೆರೆ ಮಂಜ, ಮುನಿರಾಜು, ಹುಸ್ಕೂರು ಶಿವನನ್ನು ಮಾದನಾಯಕನಹಳ್ಳಿ […]

ನೆಲಮಂಗಲ:ಕಾಂಗ್ರೆಸ್ ಮುಖಂಡನ ಹತ್ಯೆಗೆ 60 ಲಕ್ಷ ಸುಪಾರಿ ಪ್ರಕರಣಕ್ಕೆ ಸಂಬಂದಿಸಿದ್ದಂತೆ ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಹಲವು ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನನ್ನ ಹತ್ಯೆಗೆ 60ಲಕ್ಷ ಸುಪಾರಿ ನೀಡಿದ್ದಾರೆ ಎಂದು ಗೋಪಾಲಪುರ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಡೇರಹಳ್ಳಿ ಜಯರಾಮಯ್ಯ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.
ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣವರ್ ಸೂಚನೆ ಮೇರೆಗೆ ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ಗಳಾದ ಬೆತ್ತನಗೆರೆ ಮಂಜ, ಮುನಿರಾಜು, ಹುಸ್ಕೂರು ಶಿವನನ್ನು ಮಾದನಾಯಕನಹಳ್ಳಿ ಪೋಲಿಸರು ವಿಚಾರಣೆ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಿರುವ ಪೊಲೀಸರು ಜಯರಾಮಯ್ಯನ ಹತ್ಯೆಗೆ ಸಂಚು ರೂಪಿಸಿದ್ದ ರೌಡಿಶೀಟರ್ಗಳನ್ನು ಗಡಿ ಪಾರು ಮಾಡುವ ಸಾಧ್ಯತೆಗಳಿವೆ.
ನನ್ನ ಕೊಲೆಗೆ 60 ಲಕ್ಷ ಸುಪಾರಿ: SR ವಿಶ್ವನಾಥ್ ವಿರುದ್ಧ ವಡೇರಹಳ್ಳಿ ಜಯರಾಮ್ ಆರೋಪ
Published On - 10:56 am, Wed, 2 September 20