AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ತಯಾರಾಯ್ತು ಬಸ್ ಸ್ಟಾಪ್ ಗ್ರಂಥಾಲಯ

ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವಕರೆಲ್ಲ ಸೇರಿ ನಿರ್ಮಿಸಿರುವ ಬಸ್ ಸ್ಟಾಪ್ ಗ್ರಂಥಾಲಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಿದ್ದರೇ ಹೇಗಿದೆ ಆ ಬಸ್​ ಸ್ಟಾಪ್​ ಇಲ್ಲಿದೆ ನೋಡಿ.

ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ತಯಾರಾಯ್ತು ಬಸ್ ಸ್ಟಾಪ್ ಗ್ರಂಥಾಲಯ
ಹೋಸ್ಕೆರಿ ಗ್ರಾಮದ ಬಸ್​ ನಿಲ್ದಾಣ
ವಿವೇಕ ಬಿರಾದಾರ
|

Updated on: Jun 04, 2023 | 10:46 PM

Share

ಉತ್ತರ ಕನ್ನಡ: ಮೊಬೈಲ್ ಪೋನ್, ಇಂಟರ್ನೆಟ್ ಬಂದಾಗಿನಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅದರಲ್ಲೂ ಯುವ ಸಮೂಹವಂತೂ ಮೊಬೈಲ್ (Mobile) ಬಿಟ್ಟು ಒಂದು ಕ್ಷಣ ಇರೋದಿಲ್ಲ ಅಂತಾರೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಯುವಕರೇ ಸೇರಿ ಬಸ್ ನಿಲ್ದಾಣವನ್ನೇ (Bus Stop) ಗ್ರಂಥಾಲಯ (Library) ಮಾಡಿದ್ದಾರೆ. ಬಗೆ ಬಗೆಯ ಪುಸ್ತಕಗಳನ್ನ (Books) ಇಟ್ಟು ಓದುಗರಿಗೆ ಜ್ಞಾನ ಹಂಚುತ್ತಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೋಸ್ಕೆರಿ ಗ್ರಾಮದಲ್ಲಿ ಈ ರೀತಿಯ ವಿನೂತನ ಗ್ರಂಥಾಲಯವನ್ನ ಕಾಣಬಹುದು. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಹೋಸ್ಕೆರಿ ಬಸ್ ನಿಲ್ದಾಣದಲ್ಲಿ ಈ ಗ್ರಂಥಾಲಯವನ್ನ ತೆರೆಯಲಾಗಿದೆ. ಬಸ್ ನಿಲ್ದಾಣಕ್ಕೆ ಬಂದವರು ಬಸ್‌ಗಾಗಿ ಕಾಯುತ್ತಾ ಸುಮ್ಮನೆ ಕಾಲಹರಣ ಮಾಡುತ್ತಾರೆ. ಇದನ್ನು ಗಮನಿಸಿದ ಯುವಕರು ನಿಲ್ದಾಣದಲ್ಲಿ ಭಾರತದ ಇತಿಹಾಸ, ಸ್ವಾಮಿ ವಿವೇಕಾನಂದರ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ದಿನಪತ್ರಿಕೆಗಳನ್ನ ಇಟ್ಟು ಓದಲು ಹಚ್ಚುತ್ತಿದ್ದಾರೆ.

ಇನ್ನು ಕಾಲಹರಣ ಮಾಡುವವರು ಪುಸ್ತಕಗಳನ್ನ ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಯುವಕರ ಈ ವಿಶಿಷ್ಟ ಯೋಚನೆ ಯಶಸ್ವಿಯಾಗಿದ್ದು, ಇದೀಗ ಗ್ರಾಮಸ್ಥರು ದಿನಕ್ಕೊಂದರಂತೆ ವಿಶೇಷ ಮಾಹಿತಿಯುಳ್ಳ ಪುಸ್ತಕಗಳನ್ನು ಕೊಡುಗೆಯಾಗಿ ಬಸ್ ಸ್ಟಾಪ್ ಗ್ರಂಥಾಲಯಕ್ಕೆ ನೀಡುತ್ತಿದ್ದಾರೆ.

ಇನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದವರು ಹೋಸ್ಕೆರಿ ಗ್ರಾಮದಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈ ರೀತಿಯ ಯೋಚನೆ ಬಂದಿದ್ದು ನಿಜಕ್ಕೂ ವಿನೂತನವೇ ಸರಿ. ಇನ್ನೂ ಬಸ್‌ಗಾಗಿ ಕಾಯುವ ಯುವಕ ಯುವತಿಯರಿಗೆ ಮಾತ್ರವಲ್ಲದೇ ಊರಿನ ಹಿರಿಯ ನಾಗರಿಕರಿಗೂ ಬಸ್ ಸ್ಟಾಪ್ ಗ್ರಂಥಾಲಯದಿಂದ ಸಾಕಷ್ಟು ಉಪಯೋಗವಾಗಿದೆ.

ವಾಯುವಿಹಾರಕ್ಕೆ ಬರುವವರಿಗೆ, ಕಟ್ಟೆ ಪಂಚಾಯತಿ ಮಾಡುವವರು ಸಹ, ಈ ಗ್ರಾಂಥಾಲಯಕ್ಕೆ ಬಂದು ಕೆಲ ಸಮಯ ಪುಸ್ತಕಗಳನ್ನ, ದಿನಪತ್ರಿಕೆಗಳನ್ನ ಓದುತ್ತಿದ್ದಾರೆ‌‌. ಜೊತೆಗೆ ದಿನನಿತ್ಯ ಬಳಕೆಯಾಗುತ್ತಿರುವ ಈ ಗ್ರಂಥಾಲಯಕ್ಕೆ ಊರಿನ ಜನರೆ ಮಾಲೀಕರಾಗಿದ್ದು, ಅವರೇ ಬಸ್ ನಿಲ್ದಾಣವನ್ನ ಸ್ವಚ್ಛಗೊಳಿಸಿಕೊಂಡು ಬಳಕೆ ಮಾಡುತ್ತಿದ್ದಾರೆ. ಇನ್ನು ಈ ಗ್ರಂಥಾಲಯಕ್ಕೆ ಹಲವು ಮಹತ್ವದ ಮಾಹಿಯುಳ್ಳ ಪುಸ್ತಕಗಳ ಅವಶ್ಯಕತೆ ಇದೆ ಎನ್ನುತ್ತಾರೆ ಊರಿನ ಗ್ರಾಮಸ್ಥರು.

ಒಟ್ಟಿನಲ್ಲಿ ಪಟ್ಟಣಗಳಲ್ಲಿ, ನಗರಗಳಲ್ಲಿ ಕಾಣುತ್ತಿದ್ದ ಗ್ರಂಥಾಲಯ, ಬಸ್ ನಿಲ್ದಾಣದಲ್ಲಿ ಕಂಡಿದ್ದು ನಿಜಕ್ಕೂ ಖುಷಿ ಸಂಗತಿ. ಇನ್ನಮೇಲಾದರೂ ಯುವ ಸಮೂಹ ಮೊಬೈಲ್ ಇಂಟರ್ನೆಟ್‌ನ್ನ ಮಿತ ಬಳಕೆ ಮಾಡಿ ಹೆಚ್ಚು ಪುಸ್ತಕಗಳನ್ನ ಓದುವ ಹವ್ಯಾಸ ಬೆಳಿಸಿಕೊಂಡರೆ ಆರೋಗ್ಯಕ್ಕೂ, ಜ್ಞಾನ ವೃದ್ಧಿಗೂ ಸಹಕಾರವಾಗುತ್ತದೆ.

ವಿನಾಯಕ ಬಡಿಗೇರೆ ಟಿವಿ9 ಉತ್ತರ ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ