AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆ ತುಂಬಿತುಳುಕುತಿದೆ! ಯುವಕರ ಕೈಬೀಸಿ ಕರೀತಿದೆ

ಗದಗ: ಅದು ವಿಕ್ಟೋರಿಯಾ ರಾಣಿ ನಿರ್ಮಿಸಿದ ಬೃಹತ್ ಕೆರೆ. ಬರಗಾಲದ ಬವಣೆಗೆ ತನ್ನ ಅಂದ ಕಳೆದುಕೊಂಡು ಬರಿದಾಗಿತ್ತು. ಆದ್ರೆ ನಿರಂತರ ಮಳೆಗೆ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಕೆರೆ ಕೊಡಿ ಹರಿಯುವ ದೃಶ್ಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಝುಳು ಝುಳು ಅಂತ ಹರಿಯುತ್ತಿದೆ. ಕೆರೆ ತುಂಬಿದ ಹಿನ್ನೆಲೆಯಲ್ಲಿ ಯುವ ಪೀಳಿಗೆ ಕೆರೆಯಲ್ಲಿ ಈಜಿ ಎಂಜಾಯ್ ಮಾಡಲು ಬರುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ […]

ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆ ತುಂಬಿತುಳುಕುತಿದೆ! ಯುವಕರ ಕೈಬೀಸಿ ಕರೀತಿದೆ
ಆಯೇಷಾ ಬಾನು
| Edited By: |

Updated on:Nov 02, 2020 | 9:56 AM

Share

ಗದಗ: ಅದು ವಿಕ್ಟೋರಿಯಾ ರಾಣಿ ನಿರ್ಮಿಸಿದ ಬೃಹತ್ ಕೆರೆ. ಬರಗಾಲದ ಬವಣೆಗೆ ತನ್ನ ಅಂದ ಕಳೆದುಕೊಂಡು ಬರಿದಾಗಿತ್ತು. ಆದ್ರೆ ನಿರಂತರ ಮಳೆಗೆ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಕೆರೆ ಕೊಡಿ ಹರಿಯುವ ದೃಶ್ಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಝುಳು ಝುಳು ಅಂತ ಹರಿಯುತ್ತಿದೆ. ಕೆರೆ ತುಂಬಿದ ಹಿನ್ನೆಲೆಯಲ್ಲಿ ಯುವ ಪೀಳಿಗೆ ಕೆರೆಯಲ್ಲಿ ಈಜಿ ಎಂಜಾಯ್ ಮಾಡಲು ಬರುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆಯಿದು. ಸದಾ ಬರಗಾಲ ಹೊಡೆತಕ್ಕೆ ಸಿಲುಕಿದ ವಿಕ್ಟೋರಿಯಾ ರಾಣಿ ಕೆರೆ ತನ್ನ ಅಂದ ಕಳೆದುಕೊಂಡಿತ್ತು.

ಆದ್ರೆ ಸತತ ಎರಡು ವರ್ಷಗಳಲ್ಲಿ ನಿರಂತರ ಮಳೆಗೆ ತನ್ನ ಒಡಲು ತುಂಬಿಕೊಂಡು ನಳನಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅದರಲ್ಲೂ ಕೆರೆ ಭರ್ತಿಯಾಗಿ ಕೊಡಿ ಬಿದ್ದಿದ್ದು, ಇಲ್ಲಿಗೆ ಬಂದ ಯುವ ಪಡೆ ಕೆರೆಯಲ್ಲಿ ಈಜು ಹೊಡೆದು ಮಸ್ತ್ ಎಂಜಾಯ್ ಮಾಡ್ತಾಯಿದ್ದಾರೆ..

ತುಂಬಿದ ಕೆರೆಯಲ್ಲಿ ಯುವಕರದ್ದೇ ಕಾರುಬಾರು. ಮೇಲಿನಿಂದ ಕೆರೆಗ ಜಿಗಿದು ವಿವಿಧ ಭಂಗಿಯಲ್ಲಿ ಡೈ ಹೊಡೆಯುವ ಯುವಕರ ದಂಡು ಸಖತ್ ಮಸ್ತಿ ಮಾಡ್ತಿದ್ದಾರೆ. ಯುವಕರ ನೀರಾಟ ನೋಡೋಕೆ ಸಖತ್ ಖುಷಿ ನೀಡಿದ್ರೂ, ಭಯ ಕೂಡ ಆಗುತ್ತೆ. ಒಟ್ನಲ್ಲಿ ಸತತ ಮಳೆಯಿಂದ ವಿಕ್ಟೋರಿಯಾ ರಾಣಿ ಕೆರೆ ತುಂಬಿ ಹರಿಯುತ್ತಿದ್ದು, ಯುವಕರು ಈಜುತ್ತಾ ಮಸ್ತ್ ಮಾಜಾ ಮಾಡುತ್ತಿದ್ದಾರೆ.

Published On - 9:46 am, Mon, 2 November 20

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್