AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವರ್ಷ ಆಲಿಯಾ ಭಟ್ ಜತೆ ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್

ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ. ಬಹು ನಿರೀಕ್ಷಿತ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

ಮುಂದಿನ ವರ್ಷ ಆಲಿಯಾ ಭಟ್ ಜತೆ  ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್
ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್
guruganesh bhat
|

Updated on: Dec 25, 2020 | 10:42 AM

Share

ಮುಂಬೈ: ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ.  ಬಿ ಟೌನ್​ನ ಕ್ಯೂಟ್  ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

‘ನನ್ನ ಜೀವನದ ಬಹುಮುಖ್ಯ ಸಂಗತಿಯೊಂದರ ಮುಂದೆ ಸದ್ಯದಲ್ಲೇ ಟಿಕ್ ಮಾರ್ಕ್ ಮಾಡಲಿದ್ದೇನೆ’ ಎಂದು ರಣಬೀರ್ ಸೂಚ್ಯವಾಗಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಕೊರೊನಾ ಸಾಂಕ್ರಾಮಿಕ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅಧಿಕೃತ ಜೋಡಿಯಾಗಿರುತ್ತಿದ್ದೆವು. ಆದರೂ ಕೊರೊನಾ ನಮ್ಮ ಬಾಂಧವ್ಯಕ್ಕೆ ತೀರಾ ಧಕ್ಕೆಯನ್ನೇನೂ ಮಾಡಿಲ್ಲ. ಅತಿ ಶೀಘ್ರದಲ್ಲೇ ನಾವಿಬ್ಬರೂ ದಂಪತಿಗಳಾಗಲಿದ್ದೇವೆ ಎಂದು ಅವರು ರಾಜೀವ್ ಮಸಂದ್ ಅವರ ಜೊತೆಗಿನ ಸಂದರ್ಶನದಲ್ಲಿ  ಹೇಳಿದ್ದಾರೆ.

ಸಂದರ್ಶನದಲ್ಲಿ ಆಲಿಯಾರನ್ನು ತಮ್ಮ ‘ಗರ್ಲ್ ಫ್ರೆಂಡ್’ ಎಂದು ಸಂಬೋಧಿಸಿರುವ ಅವರು, ಆಕೆ ಮಹತ್ವಾಕಾಂಕ್ಷಿ. ಲಾಕ್ ಡೌನ್ ನಲ್ಲಿ ಗಿಟಾರ್ ಕ್ಲಾಸ್ ನಿಂದ ಹಿಡಿದು ಸ್ಕ್ರೀನ್ ಪ್ಲೇ ಬರವಣಿಗೆಯವರೆಗೂ ಆಲಿಯಾ ಆನ್ ಲೈನ್ ಕ್ಲಾಸ್ ಗೆ ಹಾಜರಾಗಿದ್ದಾಳೆ. ಅವಳ ಸಾಧನೆ ಮುಂದೆ ನನ್ನದು ಕಳಪೆ ಪ್ರದರ್ಶನ ಎಂದು ತುಂಟ ಉತ್ತರ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಶುಭಸುದ್ದಿ  ಟ್ವಿಟ್ಟರ್ ನಲ್ಲಿ  ಟ್ರೆಂಡ್ ಆಗಿದೆ. ಈ ಜೋಡಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಪರದೆಯ ಮೇಲೂ ಜೊತೆಯಾಗಲಿದ್ದಾರೆ.

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು