AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವರ್ಷ ಆಲಿಯಾ ಭಟ್ ಜತೆ ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್

ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ. ಬಹು ನಿರೀಕ್ಷಿತ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

ಮುಂದಿನ ವರ್ಷ ಆಲಿಯಾ ಭಟ್ ಜತೆ  ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್
ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್
guruganesh bhat
|

Updated on: Dec 25, 2020 | 10:42 AM

Share

ಮುಂಬೈ: ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ.  ಬಿ ಟೌನ್​ನ ಕ್ಯೂಟ್  ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

‘ನನ್ನ ಜೀವನದ ಬಹುಮುಖ್ಯ ಸಂಗತಿಯೊಂದರ ಮುಂದೆ ಸದ್ಯದಲ್ಲೇ ಟಿಕ್ ಮಾರ್ಕ್ ಮಾಡಲಿದ್ದೇನೆ’ ಎಂದು ರಣಬೀರ್ ಸೂಚ್ಯವಾಗಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಕೊರೊನಾ ಸಾಂಕ್ರಾಮಿಕ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅಧಿಕೃತ ಜೋಡಿಯಾಗಿರುತ್ತಿದ್ದೆವು. ಆದರೂ ಕೊರೊನಾ ನಮ್ಮ ಬಾಂಧವ್ಯಕ್ಕೆ ತೀರಾ ಧಕ್ಕೆಯನ್ನೇನೂ ಮಾಡಿಲ್ಲ. ಅತಿ ಶೀಘ್ರದಲ್ಲೇ ನಾವಿಬ್ಬರೂ ದಂಪತಿಗಳಾಗಲಿದ್ದೇವೆ ಎಂದು ಅವರು ರಾಜೀವ್ ಮಸಂದ್ ಅವರ ಜೊತೆಗಿನ ಸಂದರ್ಶನದಲ್ಲಿ  ಹೇಳಿದ್ದಾರೆ.

ಸಂದರ್ಶನದಲ್ಲಿ ಆಲಿಯಾರನ್ನು ತಮ್ಮ ‘ಗರ್ಲ್ ಫ್ರೆಂಡ್’ ಎಂದು ಸಂಬೋಧಿಸಿರುವ ಅವರು, ಆಕೆ ಮಹತ್ವಾಕಾಂಕ್ಷಿ. ಲಾಕ್ ಡೌನ್ ನಲ್ಲಿ ಗಿಟಾರ್ ಕ್ಲಾಸ್ ನಿಂದ ಹಿಡಿದು ಸ್ಕ್ರೀನ್ ಪ್ಲೇ ಬರವಣಿಗೆಯವರೆಗೂ ಆಲಿಯಾ ಆನ್ ಲೈನ್ ಕ್ಲಾಸ್ ಗೆ ಹಾಜರಾಗಿದ್ದಾಳೆ. ಅವಳ ಸಾಧನೆ ಮುಂದೆ ನನ್ನದು ಕಳಪೆ ಪ್ರದರ್ಶನ ಎಂದು ತುಂಟ ಉತ್ತರ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಶುಭಸುದ್ದಿ  ಟ್ವಿಟ್ಟರ್ ನಲ್ಲಿ  ಟ್ರೆಂಡ್ ಆಗಿದೆ. ಈ ಜೋಡಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಪರದೆಯ ಮೇಲೂ ಜೊತೆಯಾಗಲಿದ್ದಾರೆ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ