AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿ ಶಾಸ್ತ್ರಿ ಹೇಳಿದ ಗುಟ್ಟನ್ನು ಕೊನೆಗೂ ಬಿಟ್ಟುಕೊಡಲೇ ಇಲ್ಲ ಠಾಕೂರ್​: 3 ನೇ ಟೆಸ್ಟ್​ ಡ್ರಾ ಆಗಲು ಕಾರಣವಾಗಿದ್ದು ಇದೇನಾ?

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಹಂತಕ್ಕೆ ಬಂದಿತ್ತು. ಈ ವೇಳೆ ವಿಹಾರಿ ಹಾಗೂ ಅಶ್ವಿನ್​ ಅದ್ಭುತವಾಗಿ ಆಟವಾಡುತ್ತಿದ್ದರು. ಆಗ ರವಿ ಶಾಸ್ತ್ರಿ ಹೇಳಿದ ಸಂದೇಶ ಇವರನ್ನು ತಲುಪಲೇ ಇಲ್ಲ.

ರವಿ ಶಾಸ್ತ್ರಿ ಹೇಳಿದ ಗುಟ್ಟನ್ನು ಕೊನೆಗೂ ಬಿಟ್ಟುಕೊಡಲೇ ಇಲ್ಲ ಠಾಕೂರ್​: 3 ನೇ ಟೆಸ್ಟ್​ ಡ್ರಾ ಆಗಲು ಕಾರಣವಾಗಿದ್ದು ಇದೇನಾ?
ರವಿ ಶಾಸ್ತ್ರಿ ಮತ್ತು ಆರ್​ ಅಶ್ವಿನ್
ರಾಜೇಶ್ ದುಗ್ಗುಮನೆ
|

Updated on:Jan 23, 2021 | 6:51 PM

Share

ಮೂರನೇ ಟೆಸ್ಟ್​​​ನ ಮೂರನೇ ಸೆಷನ್ ಅಂದ್ರೆ ಅದು ಟೀ ಟೈಂ​. ಟೀಂ ಇಂಡಿಯಾ ಸೋಲುವ ಹಂತಕ್ಕೆ ತಲುಪಿತ್ತು. ಆದರೆ, ಆರ್​. ಅಶ್ವಿನ್​ ಹಾಗೂ ಹನುಮ ವಿಹಾರಿ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ವಿಶೇಷ ಎಂದರೆ, ಮೂರನೇ ಟೆಸ್ಟ್​ ಅಂತಿಮ ಘಟ್ಟದಲ್ಲಿ ಟೀಂ ಇಂಡಿಯಾ ಕೋಚ್​ ರವಿ ಶಾಸ್ತ್ರಿ ನೀಡಿದ ಸಂದೇಶವೊಂದು ಬ್ಯಾಟಿಂಗ್​ ಮಾಡುತ್ತಿರುವವರಿಗೆ ಸಿಗಲೇ ಇಲ್ಲ! ಅಷ್ಟಕ್ಕೂ ಏನು ಆ ಸಂದೇಶ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಹಂತಕ್ಕೆ ಬಂದಿತ್ತು. ಈ ವೇಳೆ ವಿಹಾರಿ ಹಾಗೂ ಅಶ್ವಿನ್​ ಅದ್ಭುತವಾಗಿ ಆಟವಾಡುತ್ತಿದ್ದರು. ಈ ವೇಳೆ ಶಾರ್ದೂಲ್​ ಠಾಕೂರ್​ ಅವರನ್ನು ಕರೆದ ರವಿ ಶಾಸ್ತ್ರಿ, ನಾನೊಂದು ತಂತ್ರ ಹೇಳಿಕೊಡುತ್ತೇನೆ. ಇದನ್ನು ಅವರ ಬಳಿ ಹೇಳಿ ಬಾ ಎಂದಿದ್ದರು. ಠಾಕೂರ್​ ಏನು ಆ ತಂತ್ರ ಎಂದು ಮರು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರಿಸಿದ್ದ ರವಿ ಶಾಸ್ತ್ರಿ, ಆರ್​. ಅಶ್ವಿನ್​ ಅತ್ಯುತ್ತಮ ಬ್ಯಾಟ್ಸ್​​ಮನ್​. ಸ್ಪಿನ್ನರ್​ಗಳನ್ನು ಅಶ್ವಿನ್​ ಚೆನ್ನಾಗಿ ಫೇಸ್​ ಮಾಡುತ್ತಾರೆ. ಹೀಗಾಗಿ, ಲೈನ್​ ಬೌಲಿಂಗ್​ಅನ್ನು ಅಶ್ವಿನ್​ ಫೇಸ್​ ಮಾಡಬೇಕು. ಸ್ಟಾರ್ಕ್​ ಹಾಗೂ ಪಾಟ್ ಕುಮ್ಮಿಸ್​ ಬೌಲಿಂಗ್​ ವೇಳೆ ವಿಹಾರಿ ಬ್ಯಾಟ್​ ಮಾಡಬೇಕು. ಇದನ್ನು ಚಾಚೂ ತಪ್ಪದಂತೆ ಅವರು ಪಾಲಿಸುವಂತಾಗಬೇಕು. ಈ ಸಂದೇಶವನ್ನು ಅವರ ಬಳಿ ಹೇಳಿ ಬಾ ಎಂದು ಠಾಕೂರ್​ಗೆ ಸೂಚಿಸಿದ್ದರು.

ಅಶ್ವಿನ್​ ಹಾಗೂ ವಿಹಾರಿಗೆ ನೀರು ಕೊಡಲು ಹೋದಾಗ ಠಾಕೂರ್​ ಗೊಂದಲದ ಗೂಡಾದರು. ಅವರದೇ ಥಿಯರಿಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಒಂದೊಮ್ಮೆ ನಾನು ಇದನ್ನು ಹೇಳಿದರೆ ಇವರು ಗೊಂದಲ ಮಾಡಿಕೊಂಡು ಔಟ್​ ಆದರೆ ಎನ್ನುವ ಭಯ ಕಾಡಿತ್ತು. ಹೀಗಾಗಿ, ಅವರು ತುಂಬಾನೇ ಹೇಳಿದ್ದಾರೆ. ಆದರೆ, ಏನು ಹೇಳಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದಿದ್ದರು ಶಾರ್ದೂಲ್​. ಇದಕ್ಕೆ ಉತ್ತರಿಸಿದ ಅಶ್ವಿನ್​ ಇದನ್ನು ಹೇಳೋಕೆ ಅಲ್ಲಿಂದ ಇಲ್ಲಿವರೆಗೂ ಬಂದೆಯಾ ಎಂದು ಪ್ರಶ್ನಿಸಿದ್ದರು. ಆಗ ಶಾರ್ದೂಲ್​,  ನೀವು ಉತ್ತಮವಾಗಿ ಆಡುತ್ತಿದ್ದೀರಿ. ಇದನ್ನೇ ಮುಂದುವರಿಸಲು ರವಿ ಶಾಸ್ತ್ರಿ ಸೂಚಿಸಿದ್ದಾರೆ ಎಂದಿದ್ದರು. ಈ ಮೂಲಕ ರವಿ ಶಾಸ್ತ್ರಿ ಹೇಳಿದ ಸಂದೇಶವನ್ನು ಕೊನೆಗೂ ಠಾಕೂರ್​ ಹೇಳಲೇ ಇಲ್ಲ. ಈ ವಿಚಾರವನ್ನು ಅಶ್ವಿನ್​ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ನನ್ನ ದಾಖಲೆಯನ್ನು ಸರಿಗಟ್ಟುವ ಅವಕಾಶ ರವಿಚಂದ್ರನ್ ಅಶ್ವಿನ್​ಗಿದೆ: ಮುರಳೀಧರನ್

Published On - 6:46 pm, Sat, 23 January 21

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ