AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾದಿ ತಪ್ಪಿಸುತ್ತಿದೆ ಆನ್ ಲೈನ್ ಶಿಕ್ಷಣ: ಖಿನ್ನತೆಗೆ ಒಳಗಾಗುತ್ತಿದ್ದಾರೆ ವಿದ್ಯಾರ್ಥಿನಿಯರು..

ಬೆಂಗಳೂರು: ಕೊರೊನಾದಿಂದಾಗಿ ಮಕ್ಕಳು ಶಾಲೆಗೆ ಬರಲಾಗದು. ಆದರೆ ಅವರ ಭವಿಷ್ಯಕ್ಕೆ ಕುತ್ತಾಗಬಾರದೆಂದು ಆನ್​ಲೈನ್ ಕ್ಲಾಸ್​ಗಳನ್ನು ಆರಂಭಿಸಲಾಯಿತು. ಆದರೆ ಆನ್​ಲೈನ್ ಕ್ಲಾಸ್ ಸೃಷ್ಟಿಸಿರೋ ಅವಾಂತರಗಳು ಒಂದಲ್ಲಾ ಎರಡಲ್ಲಾ. ಬಡ ಪೋಷಕರಿಗೆ ಕಣ್ಣೀರು ಹಾಕಿಸುತ್ತಿದೆ. ಆನ್​ಲೈನ್ ಕ್ಲಾಸ್ ಅಂತ ಮೊಬೈಲ್ ಹಿಡಿದು ಕೂರುವ ಮಕ್ಕಳು ಮೊಬೈಲ್ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ. ಮಕ್ಕಳು ಮೊಬೈಲ್​ನಲ್ಲಿ ಏನ್​ ಮಾಡ್ತಾರೆ ಪೋಷಕರಿಗೆ ಗೊತ್ತೇ ಆಗ್ತಿಲ್ಲ. ಆನ್​ಲೈನ್ ಕ್ಲಾಸ್ ಅಂತಾ ನೆಗ್ಲೆಟ್ ಮಾಡಿದ್ರೆ ಪೋಷಕರ ಗಮನಕ್ಕೆ ಬರೋ ಅಷ್ಟರಲ್ಲಿ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರಂತೆ. ಪೋಷಕರಿಗೆ ಕಣ್ಣೀರು […]

ಹಾದಿ ತಪ್ಪಿಸುತ್ತಿದೆ ಆನ್ ಲೈನ್ ಶಿಕ್ಷಣ: ಖಿನ್ನತೆಗೆ ಒಳಗಾಗುತ್ತಿದ್ದಾರೆ ವಿದ್ಯಾರ್ಥಿನಿಯರು..
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Nov 01, 2020 | 12:24 PM

Share

ಬೆಂಗಳೂರು: ಕೊರೊನಾದಿಂದಾಗಿ ಮಕ್ಕಳು ಶಾಲೆಗೆ ಬರಲಾಗದು. ಆದರೆ ಅವರ ಭವಿಷ್ಯಕ್ಕೆ ಕುತ್ತಾಗಬಾರದೆಂದು ಆನ್​ಲೈನ್ ಕ್ಲಾಸ್​ಗಳನ್ನು ಆರಂಭಿಸಲಾಯಿತು. ಆದರೆ ಆನ್​ಲೈನ್ ಕ್ಲಾಸ್ ಸೃಷ್ಟಿಸಿರೋ ಅವಾಂತರಗಳು ಒಂದಲ್ಲಾ ಎರಡಲ್ಲಾ. ಬಡ ಪೋಷಕರಿಗೆ ಕಣ್ಣೀರು ಹಾಕಿಸುತ್ತಿದೆ.

ಆನ್​ಲೈನ್ ಕ್ಲಾಸ್ ಅಂತ ಮೊಬೈಲ್ ಹಿಡಿದು ಕೂರುವ ಮಕ್ಕಳು ಮೊಬೈಲ್ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ. ಮಕ್ಕಳು ಮೊಬೈಲ್​ನಲ್ಲಿ ಏನ್​ ಮಾಡ್ತಾರೆ ಪೋಷಕರಿಗೆ ಗೊತ್ತೇ ಆಗ್ತಿಲ್ಲ. ಆನ್​ಲೈನ್ ಕ್ಲಾಸ್ ಅಂತಾ ನೆಗ್ಲೆಟ್ ಮಾಡಿದ್ರೆ ಪೋಷಕರ ಗಮನಕ್ಕೆ ಬರೋ ಅಷ್ಟರಲ್ಲಿ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರಂತೆ.

ಪೋಷಕರಿಗೆ ಕಣ್ಣೀರು ತರಿಸುತ್ತಿದೆ ಆನ್​ಲೈನ್ ಕ್ಲಾಸ್! ಮಕ್ಕಳು ಶಾಲೆಗಾದ್ರೂ ಹೋಗ್ತಿಲ್ಲ. ಮನೆಯಲ್ಲೇ ಓದಕೊಳ್ಳೀ ಅಂತ ಟೀಚರ್ ಹೇಳಿದಂಗೆ ಆನ್​ಲೈನ್ ಶಿಕ್ಷಣ ಪಡೆಯಲಿ ಅಂತಾ ಪೋಷಕರು ಮಕ್ಕಳಿಗೆ ಮೊಬೈಲ್ ನೀಡಿದ್ದಾರೆ. ಆದರೆ ಮಕ್ಕಳು ಕ್ಲಾಸ್ ಇಲ್ಲದಾಗ ಬೇರೆ ಬೇರೆ ಚಟುವಟಿಕೆ, ಟಿವಿ ಶೋ, ಡ್ಯಾನ್ಸ್, ಕಾಮಿಡಿ ಶೋಗಳನ್ನು ನೋಡುತ್ತಿದ್ದಾರೆ. ಅದನ್ನ ನೋಡಿ ಡ್ಯಾನ್ಸ್, ಕಾಮಿಡಿ ಕಲಿಯಲು ಮುಂದಾಗಿದ್ದಾರಂತೆ. ಅಲ್ಲದೆ ತಮ್ಮ ಡ್ಯಾನ್ಸ್ ವಿಡಿಯೋ ಮಾಡಿ ಇನ್​ಸ್ಟಾ, FB ಗೆ ಹಾಕುತ್ತಿದ್ದಾರೆ. ಆದರೆ ಈ ವಿಡಿಯೋಗಳನ್ನ ಕಿಡಗೇಡಿಗಳ ಗುಂಪು ಡೌನ್​ಲೋಡ್ ಮಾಡಿ ಕೊಂಡು ಟ್ರೋಲ್ ಮಾಡಿ ಅಸಭ್ಯವಾಗಿ ಚಿತ್ರೀಕರಿಸಿ ಹರಿ ಬಿಟ್ಟಿದ್ದಾರೆ.

ಮಕ್ಕಳ ನಂಬರ್ ಕಲೆಕ್ಟ್ ಮಾಡಿ ಕಿಡಿಗೇಡಿಗಳು ಬ್ಲ್ಯಾಕ್​ಮೇಲ್ ಮಾಡ್ತಿದ್ದಾರೆ. ಇನ್ನೊಂದು ಶಾಕಿಂಗ್ ಅಂದ್ರೆ ಈ ದುಷ್ಕರ್ಮಿಗಳು ಲವ್ ಮಾಡು ಇಲ್ಲದಿದ್ರೆ ನಿಮ್ಮ ತಂದೆಗೆ ವಿಡಿಯೋ ಕಳಿಸ್ತೀವಿ ಅಂತಾ ಬೆದರಿಕೆ ಹಾಕ್ತಿದ್ದಾರೆ. ಹೇಳಿದ ಹಾಗೆ ಕೇಳದಿದ್ರೆ ಕಿಡ್ನ್ಯಾಪ್ ಮಾಡೋದಾಗಿಯೂ ಬೆದರಿಕೆ ಹಾಕ್ತಿದ್ದಾರೆ.

‘ಆನ್​ಲೈನ್’ನಿಂದ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳು: ಇದೇ ರೀತಿಯ ಸಮಸ್ಯೆಗೆ ಒಳಗಾಗಿ ಸಂಜಯನಗರ ವಿದ್ಯಾರ್ಥಿನಿ ಸುಮಾರು 1ವಾರದಿಂದ ಮಾನಸಿಕ ಸಮಸ್ಯೆ ಎದುರಿಸಿದ್ದಾರೆ. ರಾತ್ರಿ 2 ಗಂಟೆಗೆ ಮನೆಯಿಂದ ಹೊರಬರುವಂತೆ ಕಿಡಿಗೇಡಿಗಳು ಸತಾಯಿಸಿದ್ದಾರೆ. ಬರದೇ ಹೋದ್ರೆ ಕಿಡ್ನ್ಯಾಪ್ ಮಾಡೋದಾಗಿ ಭಯ ಹುಟ್ಟಿಸಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ಮನೆಯಿಂದ ಹೊರಬರುವಾಗ ಧೈರ್ಯ ಮಾಡಿ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾಳೆ. ಬಳಿಕ ಪೋಷಕರು ಕಿಡಿಗೇಡಿಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನೊಂದ ಪೋಷಕರು ಆನ್​ಲೈನ್ ಕ್ಲಾಸ್ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ