8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?

ಲೋಕಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?
ಗವಿಸಿದ್ದ ಮಠದ ಮಹದೇವ ಸ್ವಾಮೀಜಿ

Updated on: Nov 26, 2020 | 5:08 PM

ಕಲಬುರಗಿ: ಲೋಕ ಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಲೋಕ ಕಲ್ಯಾಣದ ಧ್ಯೇಯ ಹೊತ್ತ ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ ಮಹದೇವ ಸ್ವಾಮೀಜಿ ಕಳೆದ 8 ದಿನಗಳಿಂದ ಮೊಗಲಾ ಗ್ರಾಮದಲ್ಲಿ ಮರದ ಮೇಲೆ ಕುಳಿತು ವ್ರತ ಅನುಷ್ಠಾನ ಮಾಡ್ತಿದ್ದಾರೆ.

ಕಠೋರ ವ್ರತ ಪಾಲನೆ ಮಾಡುತ್ತಿರುವ 70 ವರ್ಷದ ಸ್ವಾಮೀಜಿ ಕಳೆದ 8 ದಿನದಿಂದ ಅನ್ನ ಮತ್ತು ನೀರು ಸೇವನೆ ಸಹ ತ್ಯಜಿಸಿದ್ದಾರೆ. ಮಲಮೂತ್ರ ವಿಸರ್ಜನೆ ಕೂಡಾ ಮಾಡದೆ ಮರದ ಮೇಲೆ ಕುಳಿತಿರೋ ಶ್ರೀಗಳ ವ್ರತ ನಾಳೆ 9ನೇ ದಿನಕ್ಕೆ ಕಾಲಿಡಲಿದ್ದು ಸಮಾಪ್ತಗೊಳ್ಳಲಿದೆ. ಹಾಗಾಗಿ, ಸ್ವಾಮೀಜಿಗಳ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದೆ.

Loading...
Unable to load recommendations.
Follow Us