ಶಾಲೆ ಕೊಠಡಿಗಳು ಸ್ವಚ್ಛಗೊಳಿಸಿ ಮಕ್ಕಳ ಸ್ವಾಗತಕ್ಕೆ ಸಜ್ಜಾದ ಶಿಕ್ಷಕರು..

ವಿದ್ಯಾಗಮ ಶಾಲಾ ಪ್ರಾರಂಭೋತ್ಸವಕ್ಕೆ ಸ್ವಾಗತ ಅಂತಾ ಬ್ಯಾನರ್ ಹಾಕಿ ಮಕ್ಕಳ ಬರುವಿಕೆಗೆ ಕಾತೂರರಾಗಿರುವ ಶಿಕ್ಷಕರು ಪ್ರತಿಯೊಂದು ಕ್ಲಾಸ್ ರೂಮ್ ಗಳಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ.

ಶಾಲೆ ಕೊಠಡಿಗಳು ಸ್ವಚ್ಛಗೊಳಿಸಿ ಮಕ್ಕಳ ಸ್ವಾಗತಕ್ಕೆ ಸಜ್ಜಾದ ಶಿಕ್ಷಕರು..
ಸ್ವಚ್ಛಗೊಂಡ ತರಗತಿ
sandhya thejappa Edited By: ಸಾಧು ಶ್ರೀನಾಥ್​

Updated on: Dec 31, 2020 | 5:06 PM

ಗದಗ: ನಾಳೆಯಿಂದ ಶಾಲಾ ಕಾಲೇಜು ಆರಂಭವಾಗುವ ಹಿನ್ನೆಲೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ಮಕ್ಕಳ ಸ್ವಾಗತಕ್ಕೆ ಶಿಕ್ಷಕರು ಸಜ್ಜಾಗಿದ್ದಾರೆ.

ವಿದ್ಯಾಗಮ ಶಾಲಾ ಪ್ರಾರಂಭೋತ್ಸವಕ್ಕೆ ಸ್ವಾಗತ ಅಂತಾ ಬ್ಯಾನರ್ ಹಾಕಿ ಮಕ್ಕಳ ಬರುವಿಕೆಗೆ ಕಾತೂರರಾಗಿರುವ ಶಿಕ್ಷಕರು ಪ್ರತಿಯೊಂದು ಕ್ಲಾಸ್ ರೂಮ್ ಗಳಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೇ ಮಕ್ಕಳಿಗೆ ಯಾವುದೇ ಸಮಸ್ಯೆಗಳು ಆಗಬಾರದೆಂಬ ಮುನ್ನೆಚ್ಚರಿಕೆಯಿಂದ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಶಿಕ್ಷಕರು ಪಾಠ ಹೇಳಲು ಸಿದ್ಧರಾಗಿದ್ದಾರೆ.

ಇನ್ನು ನಾಳೆಯಿಂದ ಶಾಲೆಗೆ ಬರುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್​ಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಶಾಲೆಗಳಿಗೆ ಡಿಡಿಪಿಐ ಬಸಲಿಂಗಪ್ಪ ಭೇಟಿ ನೀಡಿ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಕೋವಿಡ್ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿದ್ಯಾಗಮ ಪುನರಾರಂಭ: ಓಕಳಿ ವಠಾರ ಶಾಲೆಯಲ್ಲಿ ತಯಾರಿ ಹೇಗಿದೆ ಗೊತ್ತಾ?

sandhya thejappa
Follow Us