AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಪಟದಲ್ಲಿ ಪ್ರಮಾದ, ಭಾರತದ ಕ್ಷಮೆ ಯಾಚಿಸಿದ ಟ್ವಿಟ್ಟರ್ | Twitter apologises for showing part of Ladakh in China

ಭಾರತದ ಲಡಾಖ್ ಪ್ರಾಂತ್ಯದ ಲೇಹ್ ಭಾಗವನ್ನು ಚೀನಾ ಭೂಪಟದಲ್ಲಿ ತೋರಿಸಿ ಭಾರಿ ಪ್ರಮಾದವೆಸಗಿದ್ದಕ್ಕೆ ಟ್ವಿಟ್ಟರ್ ಸಂಸ್ಥೆಯು ಲಿಖಿತರೂಪದಲ್ಲಿ ಕ್ಷಮಾಪಣೆ ಕೋರಿದೆ ಎಂದು, ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಿರುವ ಲೇಖಿ, ‘‘ಟ್ವಿಟ್ಟರ್ ಸಂಸ್ಥೆಯು ಕಳಿಸಿರುವ ಅಫಿಡವಿಟ್ ಇಂದು ನಮಗೆ ತಲುಪಿದೆ. ಲಡಾಕ್ ಪ್ರಾಂತ್ಯದ ಒಂದು ಪ್ರದೇಶವನ್ನು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಪ್ರಮಾದವನ್ನು ಅವರು ಅಂಗೀಕರಿಸಿದ್ದಾರೆ. ನವೆಂಬರ್ 30, 2020ರೊಳಗಾಗಿ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಆ ಸಂಸ್ಥೆಯ ಆಧಿಕಾರಿಗಳು […]

ಭೂಪಟದಲ್ಲಿ ಪ್ರಮಾದ, ಭಾರತದ ಕ್ಷಮೆ ಯಾಚಿಸಿದ ಟ್ವಿಟ್ಟರ್ | Twitter apologises for showing part of Ladakh in China
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2020 | 6:54 PM

ಭಾರತದ ಲಡಾಖ್ ಪ್ರಾಂತ್ಯದ ಲೇಹ್ ಭಾಗವನ್ನು ಚೀನಾ ಭೂಪಟದಲ್ಲಿ ತೋರಿಸಿ ಭಾರಿ ಪ್ರಮಾದವೆಸಗಿದ್ದಕ್ಕೆ ಟ್ವಿಟ್ಟರ್ ಸಂಸ್ಥೆಯು ಲಿಖಿತರೂಪದಲ್ಲಿ ಕ್ಷಮಾಪಣೆ ಕೋರಿದೆ ಎಂದು, ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಿರುವ ಲೇಖಿ, ‘‘ಟ್ವಿಟ್ಟರ್ ಸಂಸ್ಥೆಯು ಕಳಿಸಿರುವ ಅಫಿಡವಿಟ್ ಇಂದು ನಮಗೆ ತಲುಪಿದೆ. ಲಡಾಕ್ ಪ್ರಾಂತ್ಯದ ಒಂದು ಪ್ರದೇಶವನ್ನು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಪ್ರಮಾದವನ್ನು ಅವರು ಅಂಗೀಕರಿಸಿದ್ದಾರೆ. ನವೆಂಬರ್ 30, 2020ರೊಳಗಾಗಿ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಆ ಸಂಸ್ಥೆಯ ಆಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ,’’ ಎಂದಿದ್ದಾರೆ.

ಟ್ವಿಟ್ಟರ್ ಎಸಗಿದ ಪ್ರಮಾದದ ಬಗ್ಗೆ ಭಾರತ ಸರ್ಕಾರ ದಿಗ್ಭ್ರಮೆ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಸಬಹುದಾಗಿದೆ. ಐಟಿ ಕಾರ್ಯದರ್ಶಿ ಅಜಯ ಸಾಹ್ನಿ, ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಾಕ್ ಡೊರ್ಸಿ ಅವರಿಗೆ ಪತ್ರವೊಂದನ್ನು ಬರೆದು ಸ್ಪಷ್ಟೀಕರಣವನ್ನು ಕೇಳಿದ್ದರಲ್ಲದೆ ಅಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದರು.

ಭಾರತೀಯರ ಸೂಕ್ಷ್ಮ ಸಂವೇದನೆಗಳನ್ನು ಗೌರವಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದ ಭಾರತ ಸರ್ಕಾರ, ದೇಶದ ಅಖಂಡತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಯಾವುದೇ ಪ್ರಯತ್ನವನ್ನು ಸ್ವೀಕರಿಸಲಾಗದು ಮತ್ತು ಅದನ್ನು ಕಾನೂನುಬಾಹಿರ ಅಂತ ಪರಿಗಣಿಸಲಾಗುವುದೆಂದು ಎಚ್ಚರಿಸಿತ್ತು.

ಪ್ರಮಾದವಾಗಿರುವುದು ತಾಂತ್ರಿಕ ದೋಷವೆಂದು ಹೇಳಿರುವ ಸಂಸ್ಥೆಯ ಅಧಿಕಾರಿಗಳು ಅದನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ