AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೇ ನಿಲ್ದಾಣದ ಮೆಷಿನ್‌ ಮೇಲೆ ಹಿಂದಿ ಫಲಕ: Twitterನಲ್ಲಿ ಶುರುವಾಯ್ತು ಭಾಷಾ ಸಮರ

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ಕೈ ತೊಳೆಯುವ ಹಾಗೂ ಶೂ ಪಾಲಿಷ್ ಮೆಷಿನ್‌ಗಳನ್ನ ರೇಲ್ವೇ ಇಲಾಖೆಗೆ ಕೊಡುಗೆಯಾಗಿ ನೀಡಿತ್ತು. ಇದನ್ನ ನಗರದ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿತ್ತು. ಆದರೆ, ಮೆಷಿನ್‌ಗಳ ಮೇಲೆ ಹಿಂದಿ ಫಲಕವನ್ನ ಅಳವಡಿಸಿರುವುದು ಇದೀಗ ಟ್ವಿಟರ್​ನಲ್ಲಿ ಭಾರಿ ಸಮರಕ್ಕೆ ಅಣಿಮಾಡಿಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಫಲಕವನ್ನ ಯಾಕೆ ಅಳವಡಿಸಲಾಗಿದೆ ಎಂದು ಕೆಲವರು ರೈಲ್ವೇ ಇಲಾಖೆಗೆ ಪ್ರಶ್ನಿಸಿದ್ದಾರೆ. ಇದಕ್ಕೆ ರೇಲ್ವೇ ಇಲಾಖೆಯು ಈ ಮೇಷಿನ್​ ಭಾರತದಲ್ಲಿದೆ ಎಂದು ಉತ್ತರ ನೀಡಿದೆ. […]

ರೈಲ್ವೇ ನಿಲ್ದಾಣದ ಮೆಷಿನ್‌ ಮೇಲೆ ಹಿಂದಿ ಫಲಕ: Twitterನಲ್ಲಿ ಶುರುವಾಯ್ತು ಭಾಷಾ ಸಮರ
KUSHAL V
|

Updated on: Aug 10, 2020 | 1:45 PM

Share

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ಕೈ ತೊಳೆಯುವ ಹಾಗೂ ಶೂ ಪಾಲಿಷ್ ಮೆಷಿನ್‌ಗಳನ್ನ ರೇಲ್ವೇ ಇಲಾಖೆಗೆ ಕೊಡುಗೆಯಾಗಿ ನೀಡಿತ್ತು. ಇದನ್ನ ನಗರದ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿತ್ತು. ಆದರೆ, ಮೆಷಿನ್‌ಗಳ ಮೇಲೆ ಹಿಂದಿ ಫಲಕವನ್ನ ಅಳವಡಿಸಿರುವುದು ಇದೀಗ ಟ್ವಿಟರ್​ನಲ್ಲಿ ಭಾರಿ ಸಮರಕ್ಕೆ ಅಣಿಮಾಡಿಕೊಟ್ಟಿದೆ.

ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಫಲಕವನ್ನ ಯಾಕೆ ಅಳವಡಿಸಲಾಗಿದೆ ಎಂದು ಕೆಲವರು ರೈಲ್ವೇ ಇಲಾಖೆಗೆ ಪ್ರಶ್ನಿಸಿದ್ದಾರೆ. ಇದಕ್ಕೆ ರೇಲ್ವೇ ಇಲಾಖೆಯು ಈ ಮೇಷಿನ್​ ಭಾರತದಲ್ಲಿದೆ ಎಂದು ಉತ್ತರ ನೀಡಿದೆ. ಇಲಾಖೆಯ ಉತ್ತರಕ್ಕೆ ಆಕ್ರೋಶಗೊಂಡಿರುವ ಕೆಲವರು ನಾವು ಭಾರತೀಯರು. ಆದ್ರೆ ಹಿಂದಿ ನಮ್ಮ ಮಾತೃಭಾಷೆ ಅಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿರುವ ರೈಲ್ವೆ ಅಧಿಕಾರಿಗಳು ಮಹತ್ವದ ಮಾಹಿತಿಯನ್ನ ಸ್ಥಳೀಯ ಭಾಷೆಯಲ್ಲಿ ನೀಡುವ ಪ್ರಯತ್ನ ಮಾಡ್ತೇವೆ. ಆದರೆ, ಫಲಕದಲ್ಲೂ ಭಾಷೆ ವಿಷಯ ಎತ್ತುವುದು ಸರಿಯಲ್ಲ. ಈ ಮೆಷಿನ್​ನ ಕಂಪನಿಯೊಂದು ಕೊಡುಗೆಯಾಗಿ ನೀಡಿದ್ದಾರೆ. ಅವರ ಕಾರ್ಯವನ್ನ ಅಭಿನಂದಿಸುವ ಬದಲು ಪ್ರತಿ ಬಾರಿಯೂ ಹಿಂದಿ ವಿರೋಧಿ ನಿಲುವು ಪ್ರದರ್ಶನ ಮಾಡುವುದು ಸಮಂಜಸವಲ್ಲ ಎಂದು ಟ್ವೀಟ್​ ಮಾಡಿದೆ.

ರೈಲ್ವೇ ಇಲಾಖೆಯ ವಾದವನ್ನು ಒಪ್ಪದ ಕೆಲವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ