AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣಕ್ಕಾಗಿ ಮೊಬೈಲ್ ಕದ್ದ PUC ವಿದ್ಯಾರ್ಥಿನಿಗೆ, ಅದರ ಮಾಲೀಕ ಮಾಡಿದ್ದೇನು ಗೊತ್ತಾ?

ಇಂದೋರ್: 16 ವರ್ಷದ ಯುವತಿಯೊಬ್ಬಳು ತನ್ನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಶುಲ್ಕ ಪಾವತಿಸಲು, ತನ್ನ ತಾಯಿ ಕೆಲಸ ಮಾಡಲು ತೆರಳಿದ್ದ ಮನೆ ಯಜಮಾನನ ಫೋನ್ ಕದ್ದು ಅಡಮಾನ ಇಟ್ಟಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ. ಫೋನ್ ಕಾಣದಾದಾಗ ಗಾಬರಿಗೊಂಡ ಮನೆ ಯಜಮಾನ ಧೀರಜ್ ದುಬೆ ಈ ವಿಚಾರವಾಗಿ ದ್ವಾರಕಪುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಪ್ರಯೋಜನ ಆಗದ್ದನ್ನು ಕಂಡ ಫೋನ್ ಮಾಲಿಕ, ಫೋನ್ ಕಳ್ಳತನವಾದ ದಿನದಂದು ತನ್ನ ಮನೆಗೆ ಬಂದಿದ್ದ ಜನರ ಪಟ್ಟಿ ಮಾಡಿದ್ದಾನೆ. […]

ಶಿಕ್ಷಣಕ್ಕಾಗಿ ಮೊಬೈಲ್ ಕದ್ದ PUC ವಿದ್ಯಾರ್ಥಿನಿಗೆ, ಅದರ ಮಾಲೀಕ ಮಾಡಿದ್ದೇನು ಗೊತ್ತಾ?
ಸಾಧು ಶ್ರೀನಾಥ್​
|

Updated on: Aug 10, 2020 | 2:01 PM

Share

ಇಂದೋರ್: 16 ವರ್ಷದ ಯುವತಿಯೊಬ್ಬಳು ತನ್ನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಶುಲ್ಕ ಪಾವತಿಸಲು, ತನ್ನ ತಾಯಿ ಕೆಲಸ ಮಾಡಲು ತೆರಳಿದ್ದ ಮನೆ ಯಜಮಾನನ ಫೋನ್ ಕದ್ದು ಅಡಮಾನ ಇಟ್ಟಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.

ಫೋನ್ ಕಾಣದಾದಾಗ ಗಾಬರಿಗೊಂಡ ಮನೆ ಯಜಮಾನ ಧೀರಜ್ ದುಬೆ ಈ ವಿಚಾರವಾಗಿ ದ್ವಾರಕಪುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಪ್ರಯೋಜನ ಆಗದ್ದನ್ನು ಕಂಡ ಫೋನ್ ಮಾಲಿಕ, ಫೋನ್ ಕಳ್ಳತನವಾದ ದಿನದಂದು ತನ್ನ ಮನೆಗೆ ಬಂದಿದ್ದ ಜನರ ಪಟ್ಟಿ ಮಾಡಿದ್ದಾನೆ. ಆ ದಿನದಂದು ಮನೆ ಕೆಲಸ ಮಾಡಲು ಬಂದಿದ್ದ ಮಹಿಳೆಯ ಜೊತೆ ಇದ್ದ ಹುಡುಗಿ ತನ್ನ ಮೊಬೈಲನ್ನು ಸ್ವಿಚ್ ಆಫ್ ಮಾಡಿ ತೆಗೆದುಕೊಂಡು ಹೋಗಿರಬಹುದೆಂದು ಶಂಕಿಸಿದ್ದಾನೆ.

ಕೂಡಲೇ ಆ ಹುಡುಗಿಯನ್ನು ಪ್ರಶ್ನಿಸಿದಾಗ ಈ ವಿಚಾರ ನಿಜಾಂಶ ಬೆಳಕಿಗೆ ಬಂದಿದೆ. ಹುಡುಗಿ ತನ್ನ 12ನೇ ತರಗತಿಯ ಶಾಲಾ ಶುಲ್ಕವನ್ನು ಪಾವತಿ ಮಾಡಲು ಹಣವಿಲ್ಲದಿದ್ದರಿಂದ, ಮೊಬೈಲ್ ಕದ್ದು, ಅಡಮಾನ ಇಟ್ಟಿರುವುದಾಗಿ ಹೇಳಿದ್ದಾಳೆ.ಜೊತೆಗೆ ಅಡಮಾನವಿಟ್ಟು ಬಂದಿದ್ದ ಹಣದಲ್ಲಿ 1,600 ರೂಪಾಯಿಯನ್ನು ಶಾಲಾ ಶುಲ್ಕ ಕಟ್ಟಿರುವ ರಶೀದಿ ತೋರಿಸಿದ್ದಾಳೆ. ಹಾಗೂ ನಾನು ಕೆಲಸಕ್ಕೆ ಸೇರಿದ ನಂತರ ಅದನ್ನು ಬಿಡಿಸಿ ಕೊಡಲು ಯೋಚಿಸಿದ್ದಳು ಎಂದು ತಿಳಿಸಿದ್ದಾಳೆ.

ಈ ವಿಚಾರ ತಿಳಿದ ಫೋನ್ ಮಾಲಿಕ ಸ್ವಲ್ಪ ಸಮಯ ದಿಗ್ಬ್ರಾಂತನಾಗಿದ್ದಾನೆ. ನಂತರ ಹುಡುಗಿಯ ಶಾಲಾ ಶುಲ್ಕವನ್ನು ಪೂರ್ತಿಯಾಗಿ ಪಾವತಿಸುವ ಜೊತೆಗೆ, ಹುಡುಗಿಯ ಮೇಲೆ ದೂರು ನೀಡದಿರಲು ನಿಶ್ಚಯಿಸಿದ್ದಾನೆ. ನಂತರ ಈ ವಿಚಾರ ತಿಳಿದ ಸ್ವಲ್ಪ ಜನ, ಹುಡುಗಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದೂ ತಿಳಿದುಬಂದಿದೆ.

ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!
ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!
ಕೆಟ್ಟದ್ದು ಸಂಭವಿಸುವ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸುತ್ತೆ?
ಕೆಟ್ಟದ್ದು ಸಂಭವಿಸುವ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸುತ್ತೆ?
ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..