ಹೇಳೋರು ಕೇಳೋರು ಇಲ್ವೇ? ಐತಿಹಾಸಿಕ ಕೋಟೆ ಕಲ್ಲು ಕೆಡವಿ ಅನಧಿಕೃತ ಶೆಡ್ ನಿರ್ಮಾಣ!

ಮಂಡ್ಯ: ಟಿಪ್ಪು ಸುಲ್ತಾನ್ ನಿರ್ಮಿಸಿದ್ದ ಕೋಟೆ ಕಂದಕಗಳಿಗೆ ಕಂಟಕ ಉಂಟಾಗಿದೆ. ಪ್ರಭಾವಿಗಳಿಂದ ಕೋಟೆಯ ಕಂದಕದಲ್ಲಿ ಅನಧಿಕೃತ ಶೆಡ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥ ದೇಗುಲದ ಬಳಿಯ ಕೋಟೆಯೊಳಗಿನ ಕಂದಕದಲ್ಲಿ ಪ್ರಭಾವಿಗಳಿಂದ ಅನಧಿಕೃತ ಶೆಡ್ ನಿರ್ಮಾಣ ಮಾಡಲಾಗಿದೆ. ಅದನ್ನು ಪಿಂಡ ಪ್ರದಾನ ಪೂಜೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಪೂಜೆಗೆ ಕುಟೀರಗಳನ್ನು ಬಾಡಿಗೆ ನೀಡಿ ಹಣ ಮಾಡುವ ದಂಧೆ ಮಾಡುತ್ತಿದ್ದಾರೆ. ಐತಿಹಾಸಿಕ ಕೋಟೆ ಕಲ್ಲುಗಳನ್ನು ಕೆಡವಿ ಅನಧಿಕೃತ ಶೆಡ್ ನಿರ್ಮಾಣ ಮಾಡ್ತಿದ್ರು ಪ್ರಾಚ್ಯ ವಸ್ತು ಇಲಾಖೆ ಕಣ್ಮುಚ್ಚಿ ಕುಳಿತಿದೆ. ಟಿಪ್ಪುವಿನ […]

ಹೇಳೋರು ಕೇಳೋರು ಇಲ್ವೇ? ಐತಿಹಾಸಿಕ ಕೋಟೆ ಕಲ್ಲು ಕೆಡವಿ ಅನಧಿಕೃತ ಶೆಡ್ ನಿರ್ಮಾಣ!
Edited By:

Updated on: Aug 28, 2020 | 2:04 PM

ಮಂಡ್ಯ: ಟಿಪ್ಪು ಸುಲ್ತಾನ್ ನಿರ್ಮಿಸಿದ್ದ ಕೋಟೆ ಕಂದಕಗಳಿಗೆ ಕಂಟಕ ಉಂಟಾಗಿದೆ. ಪ್ರಭಾವಿಗಳಿಂದ ಕೋಟೆಯ ಕಂದಕದಲ್ಲಿ ಅನಧಿಕೃತ ಶೆಡ್‌ಗಳ ನಿರ್ಮಾಣ ಮಾಡಲಾಗುತ್ತಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥ ದೇಗುಲದ ಬಳಿಯ ಕೋಟೆಯೊಳಗಿನ ಕಂದಕದಲ್ಲಿ ಪ್ರಭಾವಿಗಳಿಂದ ಅನಧಿಕೃತ ಶೆಡ್ ನಿರ್ಮಾಣ ಮಾಡಲಾಗಿದೆ. ಅದನ್ನು ಪಿಂಡ ಪ್ರದಾನ ಪೂಜೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಪೂಜೆಗೆ ಕುಟೀರಗಳನ್ನು ಬಾಡಿಗೆ ನೀಡಿ ಹಣ ಮಾಡುವ ದಂಧೆ ಮಾಡುತ್ತಿದ್ದಾರೆ.

ಐತಿಹಾಸಿಕ ಕೋಟೆ ಕಲ್ಲುಗಳನ್ನು ಕೆಡವಿ ಅನಧಿಕೃತ ಶೆಡ್ ನಿರ್ಮಾಣ ಮಾಡ್ತಿದ್ರು ಪ್ರಾಚ್ಯ ವಸ್ತು ಇಲಾಖೆ ಕಣ್ಮುಚ್ಚಿ ಕುಳಿತಿದೆ. ಟಿಪ್ಪುವಿನ ಕೋಟೆ ಸ್ಮಾರಕಗಳು ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಅಧೀನಕ್ಕೆ ಒಳಪಡುತ್ತವೆ. ಆದರೆ ಅಲ್ಲಿನ ಅಧಿಕಾರಿಗಳು ಶ್ರೀರಂಗಪಟ್ಟಣದಲ್ಲಿ ಇಂತಹ ಕೃತ್ಯ ನಡೆದರೂ ಸುಮ್ಮನಿದ್ದಾರೆ. ಅಲ್ಲದೆ ಕಂದಾಯ ಇಲಾಖೆ ಕೋಟೆಯೊಳಗಿನ ಕಂದಕದ ಜಾಗಕ್ಕೂ RTC ಕೊಟ್ಟಿದೆ.

ಪ್ರಾಚ್ಯವಸ್ತು ಸ್ಮಾರಕದ ಬಳಿ ಯಾವುದೇ ಕಾಮಗಾರಿ, ಕಟ್ಟಡಕ್ಕೂ ಅನುಮತಿ ಇಲ್ಲದಿದ್ರು ಅನಧಿಕೃತ ಶೆಡ್ ನಿರ್ಮಾಣ ಮಾಡಲಾಗಿದ್ದು ಸಮಸ್ಯೆ ತಿಳಿದ ಮೇಲೆ ಸ್ಥಳಕ್ಕೆ ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.