AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಚಯವೇ ಇರದ ಕಾರ್ತಿಕ್ ತ್ಯಾಗಿಯ ಹೆಸರೀಗ ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಯ ನಾಲಿಗೆ ಮೇಲಿದೆ!

ಐಪಿಎ​​ಲ್​ ಟೂರ್ನಿಯಲ್ಲಿ ಬುಮ್ರಾ ಮತ್ತು ತ್ಯಾಗಿ ಬೇರೆ ಬೇರೆ ತಂಡಕ್ಕೆ ಆಡುತ್ತಾರೆ. ಆದರೆ ಕಳೆದ ವರ್ಷ ಟೀಮ್ ಇಂಡಿಯ ಅಸ್ಟ್ರೇಲಿಯ ಪ್ರವಾಸ ತೆರಳಿದ್ದಾಗ ಅವರಿಬ್ಬರು ಒಂದೇ ಡ್ರೆಸಿಂಗ್ ರೂಮನ್ನು ಶೇರ್ ಮಾಡಿಕೊಂಡಿದ್ದರು.

ಪರಿಚಯವೇ ಇರದ ಕಾರ್ತಿಕ್ ತ್ಯಾಗಿಯ ಹೆಸರೀಗ ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಯ ನಾಲಿಗೆ ಮೇಲಿದೆ!
kartik tyagi
TV9 Web
| Updated By: Vinay Bhat|

Updated on:Sep 23, 2021 | 6:47 AM

Share

ಮಂಗಳವಾರದವರೆಗೆ ಕೆಲವರಿಗಷ್ಟೇ ಗೊತ್ತಿದ್ದ ರಾಜಸ್ತಾನ ರಾಯಲ್ಸ್ ತಂಡದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಬುಧವಾರ ಬೆಳಗಾಗುವ ಹೊತ್ತಿಗೆ ಎಲ್ಲರ ಮನೆಮಾತಾಗಿದ್ದರು! ಪಂಜಾಬ್ ಕಿಂಗ್ಸ್ ವಿರುದ್ಧ ಕಾರ್ತಿಕ್ ಎಸೆದ ಆ ಕೊನೆಯ ಓವರ್​ ಅವರನ್ನು ರಾತ್ರೋರಾತ್ರಿ ಹೀರೋ ಮಾಡಿದೆ. ಯಾಕಾಗಬಾರದು? ಇಪ್ಪತ್ತರ ಪ್ರಾಯದ ಯುವ ಬೌಲರ್​ಗೆ ಟೀಮಿನ ಕ್ಯಾಪ್ಟನ್ ಕೊನೆಯ ಓವರ್​​ನಲ್ಲಿ 4 ರನ್​ಗಳನ್ನು ಡಿಫೆಂಡ್​ ಮಾಡುವಂತೆ ಹೇಳಿ ಅವನೆಡೆ ಚೆಂಡೆಸೆದಾಗ ಕ್ಯಾಪ್ಟನ್ ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಯುವ ಪ್ರತಿಭೆ ಉಳಿಸಿಕೊಂಡಿದ್ದು ಶ್ಲಾಘನೀಯವಲ್ಲದೆ ಮತ್ತೇನು? ಆ ಓವರ್​​ನಲ್ಲಿ ಅವರು ಕೇವಲ 2 ರನ್ ನೀಡಿ, 2 ವಿಕೆಟ್​ ಪಡೆದು ತಮ್ಮ ಟೀಮಿಗೆ 2 ರನ್​ಗಳ ರೋಮಾಂಚಕ ಗೆಲುವು ದೊರಕಿಸಿದರು.

ಮೈನವಿರೇಳಿಸಿದ ಮಂಗಳವಾರದ ಪಂದ್ಯದ ನಂತರ ಹಾಲಿ ಮತ್ತು ಮಾಜಿ ಆಟಗಾರರು ತ್ಯಾಗಿಯನ್ನು ಪ್ರಶಂಸಿಸಿ ಮಾತಾಡುತ್ತಿದ್ದಾರೆ. ಇಂಗ್ಲೆಂಡ್ ಮಾಜಿ ಆಟಗಾರ ಗ್ರೇಮ್ ಸ್ವ್ಯಾನ್ ಅವರು, ‘ನಾನು ಇದುವರೆಗೆ ನೋಡಿರುವ ಅತ್ಯುತ್ತಮ ಕೊನೆಯ ಓವರ್,’ ಅಂತ ಹೇಳಿದರೆ, ಭಾರತ ಹಾಗೂ ಆರ್​ ಸಿ ಬಿ ಟೀಮಿನ ಮಾಜಿ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್, ‘ಮಂಗಳವಾರ ರಾತ್ರಿ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ​​ ಏನು ನಡೆಯಿತು ಅಂತ ಹೇಳಲು ನನ್ನಲ್ಲಿ ಶಬ್ದಗಳಿಲ್ಲ,’ ಎಂದರು.​

ಆದರೆ ತ್ಯಾಗಿಗೆ ಅತಿದೊಡ್ಡ ಕಾಂಪ್ಲಿಮೆಂಟ್​ ಸಿಕ್ಕಿದ್ದು ಪ್ರಾಯಶಃ ಜಸ್ಪ್ರೀತ್ ಬುಮ್ರಾ ಅವರಿಂದ, ತ್ಯಾಗಿಯನ್ನು ಅಭಿನಂದಿಸುವ ಟ್ವೀಟ್​ಪೋಸ್ಟ್​ ಮಾಡಿದ್ದಾರೆ. ‘ಅದೆಂಥ ಓವರ್ ಕಾರ್ತಿಕ್ ತ್ಯಾಗಿ! ಅಂಥ ಒತ್ತಡದಲ್ಲಿ ಸಮಚಿತ್ತವನ್ನು ಕಾಯ್ದುಕೊಂಡು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದು. ಗ್ರೇಟ್​ ಸ್ಟಫ್​, ನಂಬಲಸದಳವಾದದ್ದು!’ ಎಂದು ಬುಮ್ರಾ ಟ್ವೀಟ್​ ಮಾಡಿದ್ದಾರೆ.

https://twitter.com/Jaspritbumrah93/status/1440381187059453952?s=20

ಬುಮ್ರಾ ಅವರ ಟ್ವೀಟ್​ಗೆ ನೀಡಿರುವ ಉತ್ತರದ ಮೂಲಕವೂ ತ್ಯಾಗಿ ಎಲ್ಲರ ಮನ ಗೆದ್ದಿದ್ದಾರೆ. ‘ನನ್ನ ಹೀರೋ ಅವರಿಂದ ಹಾಗೆ ಪ್ರಶಂಸೆಗೊಳಗಾಗುವುದು ಅನಿರ್ವಚನೀಯ ಅನುಭವ,’ ಎಂದು ತ್ಯಾಗಿ ಟ್ವೀಟ್​ ಮಾಡಿದ್ದಾರೆ.

https://twitter.com/tyagiktk/status/1440426120864677890?s=20

ಐಪಿಎ​​ಲ್​ ಟೂರ್ನಿಯಲ್ಲಿ ಬುಮ್ರಾ ಮತ್ತು ತ್ಯಾಗಿ ಬೇರೆ ಬೇರೆ ತಂಡಕ್ಕೆ ಆಡುತ್ತಾರೆ. ಆದರೆ ಕಳೆದ ವರ್ಷ ಟೀಮ್ ಇಂಡಿಯ ಅಸ್ಟ್ರೇಲಿಯ ಪ್ರವಾಸ ತೆರಳಿದ್ದಾಗ ಅವರಿಬ್ಬರು ಒಂದೇ ಡ್ರೆಸಿಂಗ್ ರೂಮನ್ನು ಶೇರ್ ಮಾಡಿಕೊಂಡಿದ್ದರು. ನೆಟ್ ಬೌಲರ್ ಆಗಿ ತ್ಯಾಗಿಯನ್ನು ​ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಪ್ರಾಯಶಃ ಅದೇ ಪ್ರವಾಸದಲ್ಲಿ ತ್ಯಾಗಿ ಅವರು ಬುಮ್ರಾ ಅವರ ಬೌಲಿಂಗ್ ಕಲೆಯನ್ನು ಕರಗತ ಮಾಡಿಕೊಂಡಿರಬೇಕು ಅಂತ ಹೇಳಲಾಗುತ್ತಿದೆ.

ಆ ಸರಣಿಯಲ್ಲಿ ಭಾರತದ ಹಲವಾರು ಅಟಗಾರರು ಗಾಯಗೊಂಡಿದ್ದರಿಂದ ರಿಸರ್ವ್ಸ್​ನಲ್ಲಿದ್ದ ಆಟಗಾರರಿಗೆಲ್ಲ ಟೆಸ್ಟ್​​ಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತಾದರೂ ತ್ಯಾಗಿ ಮಾತ್ರ ಅದು ಗಿಟ್ಟಿರಲಿಲ್ಲ. ಅದರೆ ಸರಣಿಯಲ್ಲಿ ಭಾರತ ಸ್ಮರಣಿಯ ಗೆಲುವು ಸಾಧಿಸಿದ ಬಳಿಕ ಸ್ಟ್ಯಾಂಡ್​-ಇನ್ ಕ್ಯಾಪ್ಟನ್​ ಆಗಿದ್ದ ಅಜಿಂಕ್ಯಾ ರಹಾನೆ ಒಬ್ಬ ನೆಟ್ ಬೌಲರ್ ಆಗಿ ತ್ಯಾಗಿ ಟೀಮಿಗೆ ನೀಡಿದ ಕಾಣಿಕೆಯನ್ನು ಉಲ್ಲೇಖಿಸುತ್ತಾ, ‘ಕಾರ್ತಿಕ್, ನಿಮ್ಮ ಕಾಂಟ್ರಿಬ್ಯೂಷನ್ ಅಮೋಘವಾದದ್ದು,’ ಎಂದು ಹೇಳಿದ್ದರು. ಅದು ಕಾರ್ತಿಕ್ ಪಾಲಿಗೆ ದೊಡ್ಡ ಗೌರವವಾಗಿತ್ತು.

‘ನಾನು ಎಷ್ಟು ಓವರ್​​ಗಳನ್ನು ಬೌಲ್​ ಮಾಡಿದೆನೆಂಬ ಲೆಕ್ಕ ಇಟ್ಟಿರುವುದಿಲ್ಲ. ಆದರೆ ಕ್ಯಾಪ್ಟನ್​ ಹೇಳಿದ ಮಾತುಗಳು ಸದಾ ನೆನಪಿನಲ್ಲುಳಿಯುತ್ತವೆ. ನೆಟ್ಸ್​ ನಲ್ಲಿ ಮಾತ್ರ ಶ್ರಮಪಡುವ ತ್ಯಾಗಿಯಂಥ ಒಬ್ಬ ಬೌಲರ್​ ಗೆ ಅದಕ್ಕಿಂತ ದೊಡ್ಡ ಕಾಂಪ್ಲಿಮೆಂಟ್​ ಮತ್ತೊಂದಿಲ್ಲ,’ ಎಂದು ಬುಮ್ರಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ:  IPL 2021: ಟಿ. ನಟರಾಜನ್​ಗೆ ಕೊರೊನಾ ಪಾಸಿಟಿವ್! ಸೋಂಕಿತನ ಸಂಪರ್ಕದಲ್ಲಿದ್ದ 6 ಸದಸ್ಯರ ವಿವರ ಇಲ್ಲಿದೆ

Published On - 6:43 am, Thu, 23 September 21

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ