ಮೌಢ್ಯ ಸಂಪ್ರದಾಯ: ಕಾಡುಪ್ರಾಣಿಗೆ ಚಿತ್ರಹಿಂಸೆ, ಹೆಚ್‌ಡಿ.ಕೋಟೆಯಲೊಂದು ವಿಚಿತ್ರ ಆಚರಣೆ

ಮೈಸೂರು: ಸಂಪ್ರದಾಯದ ಹೆಸರಿನಲ್ಲಿ ನರಿಯನ್ನು ಕಟ್ಟಿಹಾಕಿ ನಾಯಿಗಳಿಂದ ಕಚ್ಚಿಸಿ‌ ಹಿಂಸೆ ಮಾಡುವಂತ ವಿಚಿತ್ರ ಆಚರಣೆಯೊಂದು ಹೆಚ್‌ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಕಂಡು ಬಂದಿದೆ. ಇಲ್ಲಿ ದೇವರ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಹುಲಿಕುರೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಈ ವಿಚಿತ್ರ ಆಚರಣೆ ಜನವರಿ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನರಿ-ನಾಯಿಗಳ ಕಾಳಗದಿಂದ ಒಳಿತಾಗುತ್ತೆ ಎಂಬುವುದು ಇಲ್ಲಿನ ನಂಬಿಕೆ. ಜಾತ್ರಾ ಮಹೋತ್ಸವಕ್ಕಾಗಿಯೇ ಕಾಡಿನಿಂದ ನರಿ ಹಿಡಿದು ತಂದು ಗ್ರಾಮಸ್ಥರು ಮೋಜಿನಾಟ ಆಡ್ತಾರೆ. ನರಿ ಬಾಯಿ […]

ಮೌಢ್ಯ ಸಂಪ್ರದಾಯ: ಕಾಡುಪ್ರಾಣಿಗೆ ಚಿತ್ರಹಿಂಸೆ, ಹೆಚ್‌ಡಿ.ಕೋಟೆಯಲೊಂದು ವಿಚಿತ್ರ ಆಚರಣೆ
ಸಾಧು ಶ್ರೀನಾಥ್​

Updated on: Jan 31, 2020 | 12:02 PM

ಮೈಸೂರು: ಸಂಪ್ರದಾಯದ ಹೆಸರಿನಲ್ಲಿ ನರಿಯನ್ನು ಕಟ್ಟಿಹಾಕಿ ನಾಯಿಗಳಿಂದ ಕಚ್ಚಿಸಿ‌ ಹಿಂಸೆ ಮಾಡುವಂತ ವಿಚಿತ್ರ ಆಚರಣೆಯೊಂದು ಹೆಚ್‌ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಕಂಡು ಬಂದಿದೆ. ಇಲ್ಲಿ ದೇವರ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ.

ಹುಲಿಕುರೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಈ ವಿಚಿತ್ರ ಆಚರಣೆ ಜನವರಿ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನರಿ-ನಾಯಿಗಳ ಕಾಳಗದಿಂದ ಒಳಿತಾಗುತ್ತೆ ಎಂಬುವುದು ಇಲ್ಲಿನ ನಂಬಿಕೆ. ಜಾತ್ರಾ ಮಹೋತ್ಸವಕ್ಕಾಗಿಯೇ ಕಾಡಿನಿಂದ ನರಿ ಹಿಡಿದು ತಂದು ಗ್ರಾಮಸ್ಥರು ಮೋಜಿನಾಟ ಆಡ್ತಾರೆ. ನರಿ ಬಾಯಿ ಕಟ್ಟಿ ನಾಯಿಗಳಿಂದ ದಾಳಿ ಮಾಡಿಸ್ತಾರೆ. ಹುಲಿಕುರೆ ಹಾಗೂ ಹೆಬ್ಬಲಗುಪ್ಪೆ ಗ್ರಾಮದ ಅಕ್ಕಪಕ್ಕ ಗ್ರಾಮಗಳಲ್ಲಿ ತಲ ತಲಾಂತರದಿಂದಲೂ ಈ ಮೂಢನಂಬಿಕೆ ಜಾರಿಯಲ್ಲಿದೆ ಹಾಗೂ ಆಚರಣೆಯಲ್ಲಿದೆ.

Published On - 11:11 am, Fri, 31 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us