AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳಿಗೆ ಅಪಾರ ಸಾಲ ನೀಡಿ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ ಈ ಹಣಕಾಸು ಸಂಸ್ಥೆಗಳ ಇಂದಿನ ಪರಿಸ್ಥಿತಿ. ಈ ಹಣಕಾಸು ಸಂಸ್ಥೆಗಳು ಒಗ್ಗೂಡಿ, ಬಿಡುಗಡೆ ಮಾಡಿರುವ ವರದಿಯ ಪ್ರಕಾರ RCom ಸಮೂಹ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಬೇಕಿದೆ.

ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..
ಅಂಬಾನಿ ನೇತೃತ್ವದ Reliance Communications ಸಾರ್ವಜನಿಕ ಬ್ಯಾಂಕುಗಳಿಗೆ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಲು ಪರದಾಡುತ್ತಿದೆ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on: Jan 01, 2021 | 11:29 AM

ಇತ್ತೀಚೆಗೆ ಏಷ್ಯಾದ ಅತ್ಯಧಿಕ ಧನಿಕ ಪಟ್ಟದಿಂದ ಕೆಳಗಿಳಿದ ರಿಲಯನ್ಸ್​ ಕಂಪನಿಯ ಸಾಮ್ರಾಟ ಮುಕೇಶ್ ಅಂಬಾನಿ ಅವರ ಸೋದರ ದಿವಾಳಿಯೆದ್ದು ಯಾವುದೋ ಕಾಲವಾಗಿದೆ. ಅಪ್ಪ ಧೀರೂ ಭಾಯಿ ಅಂಬಾನಿ ಚಾಣಾಕ್ಯತನ ರೂಢಿಸಿಕೊಳ್ಳದ ಅನಿಲ್ ಅಂಬಾನಿ ಸಹಜವಾಗಿಯೇ ತನ್ನ ಅಣ್ಣನಂತೆ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ತತ್ಫಲವಾಗಿ ಈಗ ಅನಿಲ್ ಅಂಬಾನಿ ನೇತೃತ್ವದ Reliance Communications ಸಾರ್ವಜನಿಕ ಬ್ಯಾಂಕುಗಳಿಗೆ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಲು ಪರದಾಡುವಂತಾಗಿದೆ. ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಪೈಸೆ ಪೈಸೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ನಿಜಕ್ಕೂ ಲುಕ್ಸಾನು ಅನುಭವಿಸುತ್ತಿರುವುದು ಈ ಹಣಕಾಸು ಸಂಸ್ಥೆಗಳೇ ಎಂಬುದು ದಿಟ.

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳಿಗೆ ಅಪಾರ ಸಾಲ ನೀಡಿ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ ಈ ಹಣಕಾಸು ಸಂಸ್ಥೆಗಳ ಇಂದಿನ ಪರಿಸ್ಥಿತಿ. ಈ ಹಣಕಾಸು ಸಂಸ್ಥೆಗಳು ಒಗ್ಗೂಡಿ, ಬಿಡುಗಡೆ ಮಾಡಿರುವ ವರದಿಯ ಪ್ರಕಾರ RCom ಸಮೂಹ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಬೇಕಿದೆ.

ಈ ಹಣಕಾಸು ಸಂಸ್ಥೆಗಳು ಈಗ ನ್ಯಾಷನಲ್ ಕಂಪನಿ ಲಾ ಟ್ರೈಬ್ಯುನಲ್ (NCLT) ಎದುರು ತಮ್ಮ ಅಹವಾಲನ್ನು ಸಲ್ಲಿಸಿದ್ದು, Reliance Telecom ವತಿಯಿಂದ 49,000 ಕೋಟಿ ರೂ ಮತ್ತು Reliance Infratel ವತಿಯಿಂದ 12,000 ಕೋಟಿ ರೂ ಸಾಲ ಮರುಪಾವತಿಯಾಗಬೇಕಿದೆ. ಇದು ವಂಚನೆಯ ಪ್ರಕರಣ ಎಂದು ಅಲವತ್ತುಕೊಂಡಿವೆ.

ಆದರೆ Rcom ಹೇಳುವುದೇ ಬೇರೆ. ಅದರ ವಾದವೇ ಬೇರೆಯಾಗಿದೆ. NCLT ನ್ಯಾಯಾಧಿಕರಣದ ಎದುರು ತಮ್ಮ ವಿರುದ್ಧ ಹಣಕಾಸು ಸಂಸ್ಥೆಗಳು ಸಲ್ಲಿಸಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ತಾನು ಅಷ್ಟೊಂದು ದೊಡ್ಡ ಮೊತ್ತದ ಸಾಲ ಕಟ್ಟುವ ಜರೂರತ್ತು ಇಲ್ಲ. ಅಷ್ಟೊಂದು ಭಾರೀ ಪ್ರಮಾಣದಲ್ಲಿ ತಾನು ಸಾಲ ಮರುಪಾವತಿಸುವ ಅವಶ್ಯಕತೆಯಿಲ್ಲ. ತಾನು ಯಾವುದೇ ವಂಚನೆ ಎಸಗಿಲ್ಲ. ಕೇವಲ 26 ಸಾವಿರ ಕೋಟಿ ರೂ ಮರುಪಾವತಿ ಮಾಡಬೇಕಿದೆ ಅಷ್ಟೇ ಎಂದು ವಾದಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ದೆಹಲಿ ಹೈಕೋರ್ಟ್​ ಸಹ Rcom ವಾದಕ್ಕೆ ಮನ್ನಣೆ ನೀಡಿದೆ. ಸದ್ಯಕ್ಕೆ Rcom ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಸೂಚಿಸಿದೆ. ಇದರ ಮಧ್ಯೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳ ಜೊತೆ Rcom ಮಾತುಕತೆ ನಡೆಸುತ್ತಿದ್ದು, ತಾನು ಪಡೆದಿರುವ ಸಾಲದ ಮೇಲಿನ ಶೇ. 70 ರಷ್ಟು ಮೊತ್ತವನ್ನಷ್ಟೇ ಮರುಪಾವತಿಸಬೇಕಿದೆ ಎಂದು ಹೇಳುತ್ತಾ ಬಂದಿದೆ. ಅಂತಿಮವಾಗಿ.. ದಿವಾಳಿಯೆದ್ದ ಅನಿಲ್ ಅಂಬಾನಿ ನೇತೃತ್ವದ Rcom ಸಮೂಹದಿಂದ ಎಷ್ಟರ ಮಟ್ಟಿಗೆ ಸಾಲ ಮರುಪಾವತಿಯಾಗಲಿದೆ ಎಂಬುದಷ್ಟೇ ಜನರ ಸದ್ಯದ ಕುತೂಹಲವಾಗಿದೆ.

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ