ಸಿ.ಟಿ.ರವಿ ಪ್ರಕಾರ ಕಾಗೆ ಯಾರು, ಕೋಗಿಲೆ ಯಾರು? ಮುಟ್ಟಿನೋಡಿಕೊಳ್ಳುತ್ತಿರುವ ಬಿಜೆಪಿಗರು!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಮುಹೂರ್ತ ನಿಗದಿಯಾಗಿದ್ದು, ಯಾರುಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಬಿಜೆಪಿ ವಲಯದಲ್ಲಿದೆ. ಮತ್ತೆ ಕೆಲವರಿಗೆ ಖಾತೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ವಸಂತ ಕಾಲದಲ್ಲೇ ಕಾಗೆನಾ? ಕೋಗಿಲೆನಾ ಅಂಥ ತಿಳಿಯೋದು ಎಂದು ಸಂಸ್ಕೃತದ ಶ್ಲೋಕ ಹೇಳಿ ಟಾಂಗ್ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿಯೇ ತತ್ವನಿಷ್ಠೆ ಪರೀಕ್ಷೆ ಆಗೋದು. ಈ ಹಿಂದೆಯೇ ನಾನು ತತ್ವ ಪರೀಕ್ಷೆ ಎದುರಿಸಿದ್ದೇನೆ, ಈಗಲೂ […]

ಸಿ.ಟಿ.ರವಿ ಪ್ರಕಾರ ಕಾಗೆ ಯಾರು, ಕೋಗಿಲೆ ಯಾರು? ಮುಟ್ಟಿನೋಡಿಕೊಳ್ಳುತ್ತಿರುವ ಬಿಜೆಪಿಗರು!
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

Updated on: Feb 04, 2020 | 2:18 PM

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಮುಹೂರ್ತ ನಿಗದಿಯಾಗಿದ್ದು, ಯಾರುಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಬಿಜೆಪಿ ವಲಯದಲ್ಲಿದೆ. ಮತ್ತೆ ಕೆಲವರಿಗೆ ಖಾತೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ವಸಂತ ಕಾಲದಲ್ಲೇ ಕಾಗೆನಾ? ಕೋಗಿಲೆನಾ ಅಂಥ ತಿಳಿಯೋದು ಎಂದು ಸಂಸ್ಕೃತದ ಶ್ಲೋಕ ಹೇಳಿ ಟಾಂಗ್ ನೀಡಿದ್ದಾರೆ.

ಇಂತಹ ಸಂದರ್ಭಗಳಲ್ಲಿಯೇ ತತ್ವನಿಷ್ಠೆ ಪರೀಕ್ಷೆ ಆಗೋದು. ಈ ಹಿಂದೆಯೇ ನಾನು ತತ್ವ ಪರೀಕ್ಷೆ ಎದುರಿಸಿದ್ದೇನೆ, ಈಗಲೂ ಎದುರಿಸುತ್ತಿದ್ದೇನೆ. ಆದ್ರೆ ನಾನು ತ್ಯಾಗಿ ಅಲ್ಲ. ನನ್ನದು ತ್ಯಾಗ, ಬಲಿದಾನ ರಾಜಕಾರಣ ಅಲ್ಲ, ಪರಮಸ್ವಾರ್ಥ ರಾಜಕಾರಣವೂ ಅಲ್ಲ ಎಂದು ಸಿ.ಟಿ.ರವಿ ಮಾರ್ಮಿಕವಾಗಿ ನುಡಿದಿದ್ದಾರೆ.

ಈಗಿರುವ ಖಾತೆ ಬದಲಾದ್ರೆ ಆ ಖಾತೆಗೆ ಹೋಗಿ ಕೆಲಸ ಮಾಡ್ತೀನಿ. ಖಾತೆ ಬದಲಾವಣೆ ರಿಲೇ ಬ್ಯಾಟನ್ ಇದ್ದಂಗೆ. ಯಾವ ಬ್ಯಾಟನ್ ಕೊಡ್ತಾರೋ ಅದನ್ನ ಹಿಡಿದುಕೊಂಡು ಹೋಗ್ತೀನಿ. ಅದು ಪ್ರವಾಸೋದ್ಯಮ ಆಗಿರಬಹುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗಿರಬಹುದು, ಮತ್ತೊಂದೂ ಆಗಿರಬಹುದು ಎಂದರು.

Published On - 2:17 pm, Tue, 4 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us