ಈ ಗ್ರಾಮದಲ್ಲಿ ಮಹಿಳೆಯರು ವೈನ್​ ಶಾಪ್​ಗೆ ನುಗ್ಗಿ ಏನು ಮಾಡಿದರು ಗೊತ್ತಾ?

ಬೆಳಗಾವಿ: ಲಾಕ್​ಡೌನ್ 3 ಶುರುವಾಗುವುದಕ್ಕೂ ಮುನ್ನವೇ ಅಂದ್ರೆ ನಿನ್ನೆಯಿಂದ ರಾಜ್ಯದಲ್ಲಿ ಬರೀ ಕುಡುಕರದ್ದೇ ದರ್ಬಾರ್ ಆಗಿದೆ. ಯಾರೊಬ್ಬರೂ ಅವರ ವಿರುದ್ಧ ಸೊಲ್ಲು ಎತ್ತುತ್ತಿಲ್ಲ. ಅವರೂ ಅಷ್ಟೆ ರಾಜಾರೋಷವಾಗಿ ಎಣ್ಣೆ ಇಳಿಸುತ್ತಿದ್ದಾರೆ. ಆದ್ರೆ, ಇದೀಗ ಒಂದು ಕಡೆಯಾದರೂ ಇದಕ್ಕೆ ತಕ್ಕ ಶಾಸ್ತ್ರಿಯಾಗಿದೆ. ರಾಯಬಾಗ ತಾಲೂಕಿನ ನಂದಿಕುರಲಿ ಗ್ರಾಮದಲ್ಲಿ ಮಹಿಳಾ ಮಣಿಗಳು ವೈನ್ ಶಾಪ್ ಬಂದ್ ಮಾಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇಂದು ಲಕ್ಷ್ಮೀ ವೈನ್ ಶಾಪ್ ತೆರೆಯಲಾಗಿತ್ತು. ಕೆಲ ಮಹಿಳೆಯರು ವೈನ್ ಶಾಪ್​ಗೆ ನುಗ್ಗಿ ಮಾಲೀಕರಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. […]

ಈ ಗ್ರಾಮದಲ್ಲಿ ಮಹಿಳೆಯರು ವೈನ್​ ಶಾಪ್​ಗೆ ನುಗ್ಗಿ ಏನು ಮಾಡಿದರು ಗೊತ್ತಾ?
ಸಾಧು ಶ್ರೀನಾಥ್​

Updated on: May 04, 2020 | 2:22 PM

ಬೆಳಗಾವಿ: ಲಾಕ್​ಡೌನ್ 3 ಶುರುವಾಗುವುದಕ್ಕೂ ಮುನ್ನವೇ ಅಂದ್ರೆ ನಿನ್ನೆಯಿಂದ ರಾಜ್ಯದಲ್ಲಿ ಬರೀ ಕುಡುಕರದ್ದೇ ದರ್ಬಾರ್ ಆಗಿದೆ. ಯಾರೊಬ್ಬರೂ ಅವರ ವಿರುದ್ಧ ಸೊಲ್ಲು ಎತ್ತುತ್ತಿಲ್ಲ. ಅವರೂ ಅಷ್ಟೆ ರಾಜಾರೋಷವಾಗಿ ಎಣ್ಣೆ ಇಳಿಸುತ್ತಿದ್ದಾರೆ. ಆದ್ರೆ, ಇದೀಗ ಒಂದು ಕಡೆಯಾದರೂ ಇದಕ್ಕೆ ತಕ್ಕ ಶಾಸ್ತ್ರಿಯಾಗಿದೆ.

ರಾಯಬಾಗ ತಾಲೂಕಿನ ನಂದಿಕುರಲಿ ಗ್ರಾಮದಲ್ಲಿ ಮಹಿಳಾ ಮಣಿಗಳು ವೈನ್ ಶಾಪ್ ಬಂದ್ ಮಾಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇಂದು ಲಕ್ಷ್ಮೀ ವೈನ್ ಶಾಪ್ ತೆರೆಯಲಾಗಿತ್ತು. ಕೆಲ ಮಹಿಳೆಯರು ವೈನ್ ಶಾಪ್​ಗೆ ನುಗ್ಗಿ ಮಾಲೀಕರಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈನ್ ಶಾಪ್ ಬಂದ್ ಮಾಡಿಸಿದ ನಂತರ ಗ್ರಾಮದ ಮಹಿಳೆಯರು ಮನೆಗೆ ತೆರಳಿದರು. ಬೆಳಗ್ಗೆಯಿಂದ ಮದ್ಯಕ್ಕಾಗಿ ಕ್ಯೂನಲ್ಲಿ ನಿಂತುಕೊಂಡಿದ್ದ ಕುಡುಕರು ಮಹಿಳೆಯರಿಗೆ ಹಿಡಿಶಾಪ ಹಾಕುವಂತಾಯಿತು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us