ಯೋಗೀಶ್ ಗೌಡ ಹತ್ಯೆ ಪ್ರಕರಣ: ಚಂದ್ರಶೇಖರ ಇಂಡಿ ಶಕುನಿ ಎಂದ ಬಸವರಾಜ ಮುತ್ತಗಿ
ನಾನು ಮತ್ತು ವಿನಯ್ ಕುಲಕರ್ಣಿ ಒಟ್ಟಾಗಿ ಊಟ ಮಾಡಿದ್ದೇವೆ. ಅವರು ಊಟದಲ್ಲಿ ವಿಷವನ್ನು ಹಾಕಿದ್ದರೂ ನಾನು ತಿನ್ನುತ್ತಿದ್ದೆ ಎಂದು ತಮ್ಮ ಮತ್ತು ವಿನಯ್ ಕುಲಕರ್ಣಿ ನಡುವಿನ ಸಂಬಂಧದ ಬಗ್ಗೆ ವಿವರಣೆ ನೀಡಿದ್ದಾರೆ.

ಧಾರವಾಡ: ವಿನಯ್ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ ವಿರುದ್ಧ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಕಿಡಿಕಾರಿದ್ದಾರೆ. ಚಂದ್ರಶೇಖರ ಇಂಡಿ ಶಕುನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮತ್ತು ವಿನಯ್ ಕುಲಕರ್ಣಿ ಒಟ್ಟಾಗಿ ಊಟ ಮಾಡಿದ್ದೇವೆ. ಅವರು ಊಟದಲ್ಲಿ ವಿಷವನ್ನು ಹಾಕಿದ್ದರೂ ನಾನು ತಿನ್ನುತ್ತಿದ್ದೆ ಎಂದು ತಮ್ಮ ಮತ್ತು ವಿನಯ್ ಕುಲಕರ್ಣಿ ನಡುವಿನ ಸಂಬಂಧದ ಬಗ್ಗೆ ವಿವರಣೆ ನೀಡಿದ್ದಾರೆ.
ಅಂದಿನ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBI ತನಿಖೆ ನಡೆಯುತ್ತಿದೆ. ಪ್ರಕರಣದ ಆರೋಪಿಯಾದ ಬಸವರಾಜ ಮುತ್ತಗಿ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಇಂದು ವಿಚಾರಣೆ ನಡೆದಿದೆ.
ನಾವು ಭಾವನೆಗಳ ಜೊತೆ ಜೀವನ ಮಾಡುವಂತಹವರು. ಆದ್ರೆ ಚಂದ್ರಶೇಖರ ಇಂಡಿ ಮಹಾಭಾರತದ ಶಕುನಿ ಇದ್ದಂತೆ. ಅವರ ಬಗ್ಗೆ ಇದಕ್ಕಿಂತ ಹೆಚ್ಚಾಗಿ ನಾನು ಏನೂ ಹೇಳುವುದಿಲ್ಲ ಎಂದು ಇಂಡಿ ವಿರುದ್ಧ ಗರಂ ಆಗಿದ್ದಾರೆ. ನನ್ನ ಕೊಲೆಗೆ ಸುಪಾರಿ ನೀಡಿರುವ ವಿಷಯವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಸಾಕ್ಷಿ ಮುಚ್ಚಿ ಹಾಕುವುದಕ್ಕೆ ಮುತ್ತಗಿಯ ಕೊಲೆಗೆ ಸ್ಕೆಚ್ ನಡೆಸಲಾಗಿತ್ತು ಎಂಬ ಮಾಹಿತಿ ಈ ಹಿಂದೆ ತಿಳಿದುಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ, ಯೋಗೀಶ್ ಗೌಡ ಹತ್ಯೆಯ ಸುಪಾರಿ ಬಗ್ಗೆ ಮಾಹಿತಿ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿ, ಮುತ್ತಗಿ ಹತ್ಯೆಯಾದ್ರೆ ಕೇಸ್ ಮುಚ್ಚಿಹಾಕಬಹುದೆಂಬ ಪ್ಲಾನ್ ನಡೆದಿತ್ತು ಎಂದು ಹೇಳಲಾಗಿದೆ.
ಯೋಗೀಶ್ ಹತ್ಯೆ: ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಟಿಂಗರಿಕರ್ ಪಾತ್ರವೇನು? ರೋಚಕ ಕತೆ ಇಲ್ಲಿದೆ
Published On - 7:04 pm, Wed, 16 December 20