AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗುಂಬೆ ಬಳಿ ಅಡಕೆ ಕೊನೆ ತೆಗೆಯುವಾಗ ಕತ್ತಿ ಕೈ ಜಾರಿ ಯುವಕನ ದುರ್ಮರಣ

ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ. ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ […]

ಆಗುಂಬೆ ಬಳಿ ಅಡಕೆ ಕೊನೆ ತೆಗೆಯುವಾಗ ಕತ್ತಿ ಕೈ ಜಾರಿ ಯುವಕನ ದುರ್ಮರಣ
KUSHAL V
|

Updated on: Nov 20, 2020 | 6:52 PM

Share

ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ.

ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ ತೆಗೆಯುತ್ತಿದ್ದಾಗ ದೋಟಿ ಕೈ ಜಾರಿ, ಅದರ ತುದಿಗೆ ಕಟ್ಟಿದ್ದ ಕತ್ತಿ ಅಡಕೆ ಕೊನೆಯೊಂದಿಗೆ ರಭಸವಾಗಿ ಬಂದು ಅಪ್ಪಳಿಸಿದ ಪರಿಣಾಮ ಕುತ್ತಿಗೆಯಿಂದ ತೊಡೆಯ ಭಾಗದವರೆಗೆ ದೇಹ ಸೀಳಿಕೊಂಡು ಹೋಗಿದೆ. ಕತ್ತಿ ಹರಿತವಾಗಿದ್ದ ಕಾರಣ ಆಳವಾದ ಗಾಯಗಳಾಗಿ ಅನುಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮನೆಗೆ ಆಧಾರವಾಗಬೇಕಾಗಿದ್ದ ಮಗನ ಸಾವಿನಿಂದ ತಂದೆ ಸುಧಾಕರ್, ತಾಯಿ ಸವಿತಾ ಹಾಗೂ ಅನುಷ್​ನ ಮೂವರು ಅಕ್ಕಂದಿರು ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ತೀರ್ಥಹಳ್ಳಿ ಶಾಸಕ ಹಾಗೂ ಅಡಕೆ ಟಾಸ್ಕ್​ಫೋರ್ಸ್​ ಅಧ್ಯಕ್ಷ ಆರಗ ಜ್ಞಾನೇಂದ್ರ ಘಟನೆ ಸಂಭವಿಸಿದ ತಕ್ಷಣ ನನಗೆ ಮಾಹಿತಿ ಲಭ್ಯವಾಗಿದೆ. ಚಿಕ್ಕ ವಯಸ್ಸಿನ ಹುಡುಗ ಹೀಗೆ ಜೀವ ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ. ಮ್ಯಾಮ್​ಕೋಸ್​ನಲ್ಲಿ ಅವರ ಶೇರ್ ಇಲ್ಲದ ಕಾರಣ ತಕ್ಷಣ ಪರಿಹಾರ ಬಿಡುಗಡೆ ಮಾಡುವುದು ಸಾಧ್ಯವಾಗಿಲ್ಲ. ಅದೇನೇ ಅಡೆತಡೆ ಇದ್ದರೂ ಮ್ಯಾಮ್​ಕೋಸ್ ಹಾಗೂ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ ಎಂದು  ಹೇಳಿದರು.

Follow Us
KUSHAL V
KUSHAL V
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!