AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗುಂಬೆ ಬಳಿ ಅಡಕೆ ಕೊನೆ ತೆಗೆಯುವಾಗ ಕತ್ತಿ ಕೈ ಜಾರಿ ಯುವಕನ ದುರ್ಮರಣ

ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ. ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ […]

ಆಗುಂಬೆ ಬಳಿ ಅಡಕೆ ಕೊನೆ ತೆಗೆಯುವಾಗ ಕತ್ತಿ ಕೈ ಜಾರಿ ಯುವಕನ ದುರ್ಮರಣ
Follow us
KUSHAL V
|

Updated on: Nov 20, 2020 | 6:52 PM

ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ.

ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ ತೆಗೆಯುತ್ತಿದ್ದಾಗ ದೋಟಿ ಕೈ ಜಾರಿ, ಅದರ ತುದಿಗೆ ಕಟ್ಟಿದ್ದ ಕತ್ತಿ ಅಡಕೆ ಕೊನೆಯೊಂದಿಗೆ ರಭಸವಾಗಿ ಬಂದು ಅಪ್ಪಳಿಸಿದ ಪರಿಣಾಮ ಕುತ್ತಿಗೆಯಿಂದ ತೊಡೆಯ ಭಾಗದವರೆಗೆ ದೇಹ ಸೀಳಿಕೊಂಡು ಹೋಗಿದೆ. ಕತ್ತಿ ಹರಿತವಾಗಿದ್ದ ಕಾರಣ ಆಳವಾದ ಗಾಯಗಳಾಗಿ ಅನುಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮನೆಗೆ ಆಧಾರವಾಗಬೇಕಾಗಿದ್ದ ಮಗನ ಸಾವಿನಿಂದ ತಂದೆ ಸುಧಾಕರ್, ತಾಯಿ ಸವಿತಾ ಹಾಗೂ ಅನುಷ್​ನ ಮೂವರು ಅಕ್ಕಂದಿರು ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ತೀರ್ಥಹಳ್ಳಿ ಶಾಸಕ ಹಾಗೂ ಅಡಕೆ ಟಾಸ್ಕ್​ಫೋರ್ಸ್​ ಅಧ್ಯಕ್ಷ ಆರಗ ಜ್ಞಾನೇಂದ್ರ ಘಟನೆ ಸಂಭವಿಸಿದ ತಕ್ಷಣ ನನಗೆ ಮಾಹಿತಿ ಲಭ್ಯವಾಗಿದೆ. ಚಿಕ್ಕ ವಯಸ್ಸಿನ ಹುಡುಗ ಹೀಗೆ ಜೀವ ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ. ಮ್ಯಾಮ್​ಕೋಸ್​ನಲ್ಲಿ ಅವರ ಶೇರ್ ಇಲ್ಲದ ಕಾರಣ ತಕ್ಷಣ ಪರಿಹಾರ ಬಿಡುಗಡೆ ಮಾಡುವುದು ಸಾಧ್ಯವಾಗಿಲ್ಲ. ಅದೇನೇ ಅಡೆತಡೆ ಇದ್ದರೂ ಮ್ಯಾಮ್​ಕೋಸ್ ಹಾಗೂ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ ಎಂದು  ಹೇಳಿದರು.

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ