AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ವಕೀಲನಿಗೆ ಪಜೀತಿ ತಂದಿಟ್ಟ ಹೇರ್ ಡೈ; ಕೆನ್ನೆಮೇಲೆ ಇಳಿದು ಬಂತು ಡೈ-ಮಿಶ್ರಿತ ಬೆವರು | Dark streaks on Trump Lawyer’s Face during a press conference

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ ಇಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಿಸಬೇಕಾಯಿತು. ಅದಕ್ಕೆ ಕಾರಣ ಅವರ ತಲೆಯ ಬೆವರಿನೊಂದಿಗೆ ಬೆರೆತ ಹೇರ್ ಡೈ ಮುಖದ ಮೇಲೆ ಇಳಿದು ಸೃಷ್ಟಿಸಿದ ಅವಾಂತರ! ಇಂದು ಡೊನಾಲ್ಡ್ ಟ್ರಂಪ್ ಅವರ ಕಾನೂನು ಸಲಹೆಗಾರರ ತಂಡ ಸುದ್ದಿಗೋಷ್ಠಿಯೊದನ್ನು ಕರೆದಿತ್ತು. ಸದರಿ ಗೋಷ್ಠಿಯಲ್ಲಿ ಮಾತನಾಡಿದ ವಕೀಲ ರೂಡಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಮತ್ತು ಎಣಿಕೆಯಲ್ಲಿ ವಂಚನೆ […]

ಟ್ರಂಪ್ ವಕೀಲನಿಗೆ ಪಜೀತಿ ತಂದಿಟ್ಟ ಹೇರ್ ಡೈ; ಕೆನ್ನೆಮೇಲೆ ಇಳಿದು ಬಂತು ಡೈ-ಮಿಶ್ರಿತ ಬೆವರು | Dark streaks on Trump Lawyer’s Face during a press conference
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 20, 2020 | 7:20 PM

Share

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ ಇಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಿಸಬೇಕಾಯಿತು. ಅದಕ್ಕೆ ಕಾರಣ ಅವರ ತಲೆಯ ಬೆವರಿನೊಂದಿಗೆ ಬೆರೆತ ಹೇರ್ ಡೈ ಮುಖದ ಮೇಲೆ ಇಳಿದು ಸೃಷ್ಟಿಸಿದ ಅವಾಂತರ!

ಇಂದು ಡೊನಾಲ್ಡ್ ಟ್ರಂಪ್ ಅವರ ಕಾನೂನು ಸಲಹೆಗಾರರ ತಂಡ ಸುದ್ದಿಗೋಷ್ಠಿಯೊದನ್ನು ಕರೆದಿತ್ತು. ಸದರಿ ಗೋಷ್ಠಿಯಲ್ಲಿ ಮಾತನಾಡಿದ ವಕೀಲ ರೂಡಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಮತ್ತು ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಿದ್ದರು. ಆದರೆ ಸ್ವಲ್ಪ ಸಮಯದ ನಂತರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡವರ ಗಮನವೆಲ್ಲ ವಕೀಲರ ಮಾತಿನ ಬದಲು ಕೆನ್ನೆಯ ಮೇಲೆಯೇ ನೆಟ್ಟುಬಿಟ್ಟಿತ್ತು. ಯಾಕೆ ಗೊತ್ತಾ?

ರೂಡಿ, ಪ್ರೆಸ್ ಕಾನ್ಫರೆನ್ಸ್​ಗೆ ಆಗಮಿಸುವ ಸ್ವಲ್ಪ ಮೊದಲು ಅದಾಗಲೇ ಬೋಳಾಗುತ್ತಿರುವ ತಮ್ಮ ತಲೆಗೆ ಹೇರ್ ಡೈ ಮಾಡಿಸಿಕೊಂಡಿದ್ದರೆಂದು ಕಾಣುತ್ತದೆ. ಗೋಷ್ಠಿ ನಡೆಯುತ್ತಿದ್ದಾಗ ಅವರು ಅದ್ಯಾವ ಒತ್ತಡದಲ್ಲಿದ್ದರೋ? ತಲೆಯ ಮೇಲೆ ಜಿನುಗುತ್ತಿದ್ದ ಬೆವರು ಕಪ್ಪು ಹೇರ್ ಡೈನೊಂದಿಗೆ ಬೆರೆತು ಕೆನ್ನೆಗಳ ಮೇಲೆ ಇಳಿದು ಅವರ ಬೆಳ್ಳಗಿನ ಮುಖವನ್ನು ಕಪ್ಪು ಮಾಡಲಾರಂಭಿಸಿತ್ತು. ಅದನ್ನು ರೂಡಿ ಕೂಡಲೇ ಗಮನಿಸಿದರಾದರೂ ಪ್ರೆಸ್ಸರನ್ನು ಅರ್ಧಕ್ಕೆ ನಿಲ್ಲಿಸ ಹೋಗುವಂತಿರಲಿಲ್ಲವಲ್ಲ?

ತಮ್ಮ ಹ್ಯಾಂಕೀಯಿಂದ ಅವರು ಪದೇಪದೆ ಮುಖ ಒರೆಸಿಕೊಳ್ಳುತ್ತಿದ್ದಿದ್ದು ವೈರಲ್ ಅಗಿಬಿಟ್ಟಿದೆ ಮತ್ತು ಬಗೆಬಗೆಯ ಮೀಮ್ಸ್​ಗಳೂ ಸಹ ಸೃಷ್ಟಿಯಾಗಿವೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ