AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗೂ ಸ್ಥಾನ

ಭಾರತದ ತಿಂಡಿಗಳು ಇಡೀ ವಿಶ್ವದ ಎಲ್ಲ ದೇಶಗಳಲ್ಲೂ ಪ್ರಸಿದ್ಧಿ ಪಡೆಯುತ್ತಿವೆ. ದೋಸೆ, ಇಡ್ಲಿ, ರೋಟಿ ಮುಂತಾದ ತಿಂಡಿಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ. ಇದೀಗ ಆ ಪಟ್ಟಿಗೆ ಭಾರತದ ಚೀಸ್ ತಿಂಡಿಗಳು ಕೂಡ ಸೇರಿವೆ. ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗಳು ಕೂಡ ಸ್ಥಾನ ಪಡೆದಿವೆ.

ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗೂ ಸ್ಥಾನ
ರಸಗುಲ್ಲImage Credit source: iStock
ಸುಷ್ಮಾ ಚಕ್ರೆ
|

Updated on: Nov 28, 2023 | 2:05 PM

Share

ಚೀಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಎಲ್ಲೋ ಅಪರೂಪಕ್ಕೆ ಕೆಲವರು ಚೀಸ್ ಇಷ್ಟಪಡದವರು ಸಿಗಬಹುದು ಅಷ್ಟೆ. ಚೀಸ್ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಟೇಸ್ಟ್‌ಅಟ್ಲಾಸ್, ಅನುಭವಿ ಟ್ರಾವೆಲ್ ಆನ್‌ಲೈನ್ ಮಾರ್ಗದರ್ಶಿ ‘ಚೀಸ್‌ನಿಂದ ಮಾಡುವ 100 ಅತ್ಯುತ್ತಮ ಭಕ್ಷ್ಯಗಳು’ ಎಂಬ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಅಗ್ರ ಸ್ಥಾನವನ್ನು ಪೋಲೆಂಡ್‌ನ ಪಿರೋಗಿ ಪಡೆದಿದೆ. ಈ ಪಟ್ಟಿಯಲ್ಲಿ ಭಾರತೀಯ ಚೀಸ್ ತಿಂಡಿಗಳಿಗೂ ಸ್ಥಾನ ಸಿಕ್ಕಿದೆ.

ಭಾರತದಲ್ಲಿ ಜನಪ್ರಿಯ ಸಿಹಿತಿಂಡಿಯಾಗಿರುವ ರಸಗುಲ್ಲ 95ನೇ ಸ್ಥಾನ ಪಡೆದಿದೆ. ಮಲೈ ಕೋಫ್ತಾ 68ನೇ ಸ್ಥಾನ ಪಡೆದುಕೊಂಡಿದೆ. ಶಾಹಿ ಪನೀರ್ 39ನೇ ಸ್ಥಾನ ಹಾಗೂ ವಿಂದಾಲೂನ ಪನೀರ್ 30ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೆದುಳಿನ ಆರೋಗ್ಯಕ್ಕೆ ಚೀಸ್ ತಿನ್ನಿ; ತಜ್ಞರು ಹೇಳೋದೇನು?

ಈ ಪಟ್ಟಿ ಪ್ರಕಟವಾದ ಬಳಿಕ ಸಿಹಿ ತಿನಿಸಾದ ರಸಗುಲ್ಲಾ ನಮ್ಮದೆಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವೆ ಸ್ವಲ್ಪ ಹಗ್ಗ ಜಗ್ಗಾಟ ನಡೆದಿದೆ. ಇಬ್ಬರೂ ಅದನ್ನು ತಮ್ಮ ಡೆಸರ್ಟ್ ತಿನಿಸು ಎಂದು ಹೇಳಿಕೊಳ್ಳುತ್ತಿದ್ದಾರೆ. ಶಾಹಿ ಪನೀರ್ ಭಾರತದ ಮೊಘಲ್ ಪಾಕಪದ್ಧತಿಯ ತಿನಿಸಾಗಿದ್ದು, ಪನೀರ್ ಚೀಸ್, ಈರುಳ್ಳಿ, ಬಾದಾಮಿ ಪೇಸ್ಟ್ ಮತ್ತು ಕಟುವಾದ ಟೊಮ್ಯಾಟೊ ಕ್ರೀಮ್ ಸಾಸ್‌ನಿಂದ ಇದನ್ನು ಮಾಡಲಾಗುತ್ತದೆ. ಸಾಗ್ ಪನೀರ್ ಪಂಜಾಬ್‌ ತಿನಿಸಾಗಿದೆ. ವಿಂದಾಲೂ ಇಂಗ್ಲೆಂಡ್‌ನಲ್ಲಿ ಹುಟ್ಟಿ ಭಾರತದ ಗೋವಾ ಮತ್ತು ಕೊಂಕಣ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಇದು ಮಾಂಸಾಹಾರಿ ತಿನಿಸಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ