AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು ಇಲ್ಲಿವೆ

ಸುಲಭವಾದ ಹಾಗೂ ಆರೋಗ್ಯಕರ ವಿಧಾನಗಳೊಂದಿಗೆ ಸಾಮಾನ್ಯ ನೀರಿನ ರುಚಿಯನ್ನು ಉತ್ತಮಗೊಳಿಸಿ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸಲು ಇಷ್ಟಪಡದವರಾಗಿದ್ದರೆ, ಈ ಕೆಳಗಿನ ಟಿಪ್ಸ್​​ ಫಾಲೋ ಮಾಡಿ.

ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು ಇಲ್ಲಿವೆ
ಕುಡಿಯುವ ನೀರಿನ ರುಚಿಯನ್ನು ಉತ್ತಮಗೊಳಿಸಲು ಆರೋಗ್ಯಕರ ಮಾರ್ಗಗಳು Image Credit source: The Kitchen Magpie
ಅಕ್ಷತಾ ವರ್ಕಾಡಿ
|

Updated on: May 20, 2023 | 3:16 PM

Share

ಬೇಸಿಯ ಸುಡುಬಿಸಿಲಿಗೆ ನೀರು ಎಷ್ಟು ಕುಡಿದರೂ ಕಡಿಮೆ. ಆದರೆ ನೀವು ಬರೀ ನೀರು ಕುಡಿಯುವ ಬದಲಾಗಿ ಅದಕ್ಕೆ ಆರೋಗ್ಯಕರವಾಗಿ ಒಂದಿಷ್ಟು ರುಚಿಯನ್ನು ಸೇರಿಸಿ. ಸುಲಭವಾದ ಹಾಗೂ ಆರೋಗ್ಯಕರ ವಿಧಾನಗಳೊಂದಿಗೆ ಸಾಮಾನ್ಯ ನೀರಿನ ರುಚಿಯನ್ನು ಉತ್ತಮಗೊಳಿಸಿ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸಲು ಇಷ್ಟಪಡದವರಾಗಿದ್ದರೆ, ಈ ಕೆಳಗಿನ ಟಿಪ್ಸ್​​ ಫಾಲೋ ಮಾಡಿ.

ನೀರಿನ ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ?

ತಾಜಾ ಹಣ್ಣುಗಳು:

ತಾಜಾ ಹಣ್ಣುಗಳು ನಿಮ್ಮ ದೇಹವನ್ನು ಪೋಷಿಸಲು ಉತ್ತಮ ಮಾರ್ಗವಾಗಿದೆ. ನಿಂಬೆಹಣ್ಣು, ಕಿತ್ತಳೆಗಳಂತಹ ಸಿಟ್ರಸ್ ಹಣ್ಣುಗಳ ರಸವನ್ನು ನೀರಿನೊಂದಿಗೆ ಸೇರಿಸುವುದರಿಂದ ನೀರಿನ ರುಚಿಯನ್ನು ಹೆಚ್ಚಿಸಬಹುದು. ಇದಲ್ಲದೇ ಸೌತೆಕಾಯಿ ಮತ್ತು ತಾಜಾ ಪುದೀನಾ ಸಹ ರಿಫ್ರೆಶ್ ಸುವಾಸನೆಗಳಾಗಿವೆ. ನೀವು ಅವುಗಳನ್ನು ಕತ್ತರಿಸಿ ನೀರಿಗೆ ಸೇರಿಸಬಹುದು. ಇದು ನಿಮ್ಮನ್ನು ತೇವಾಂಶದಿಂದಿರಿಸುವುದು ಮಾತ್ರವಲ್ಲದೆ ನೀರಿಗೆ ಪರಿಮಳವನ್ನು ನೀಡುತ್ತದೆ.

ಬೆರ್ರಿ ಹಣ್ಣು:

ಸಾಮಾನ್ಯವಾದ ಬೆರ್ರಿ ಹಣ್ಣಿಗಿಂತ ಫ್ರಿಡ್ಜ್‌ನ ಐಸ್ ಟ್ರೇಗೆ ಸಣ್ಣ ಬೆರ್ರಿ ಹಣ್ಣುಗಳನ್ನು ಸೇರಿಸಿ ಮತ್ತು ಅಂಚಿನಲ್ಲಿ ನೀರು ತುಂಬಿಸಿ ನಂತರ ಅವುಗಳನ್ನು ಫ್ರೀಜ್ ಮಾಡಿ. ಈ ಫ್ರೀಜ್​​ ಮಾಡಿದ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ

ಸ್ಲೈಸ್ ಮಾಡಿದ ನಿಂಬೆ:

ನಿಂಬೆ ಯಾವಾಗಲೂ ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ನೀವು ನಿಂಬೆಹಣ್ಣನ್ನು ಚಿಕ್ಕದಾಗಿ ಸ್ಲೈಸ್ ಮಾಡಿ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಇದು ನೀರಿನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಬೇಸಿಗೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.

ತರಕಾರಿ ಸಿಪ್ಪೆ:

ಸೌತೆಕಾಯಿಯಂತಹ ತರಕಾರಿಗಳನ್ನು ಸಿಪ್ಪೆ ತೆಗೆಯುವಾಗ ಸಿಪ್ಪೆಗಳನ್ನು ಏಕೆ ಎಸೆಯಬೇಕು ? ತರಕಾರಿಯ ಸಿಪ್ಪೆಯನ್ನು ನೀರಿನೊಂದಿಗೆ ಸೇರಿಸಿ ಮತ್ತು ಫ್ರಿಜ್‌ನಲ್ಲಿ 2 ರಿಂದ 3 ದಿನಗಳವರೆಗೆ ಇಡಿ. ನಂತರ ನೀವು ಅದನ್ನು ಸೋಸಬಹುದು ಮತ್ತು ನಂತರ ಸಿಪ್ಪೆಯನ್ನು ಎಸೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!