Health Tips: ಸಕ್ಕರೆಯೇತರ ಸಿಹಿಕಾರಕ ಆಹಾರಕ್ರಮ ಆರೋಗ್ಯಕ್ಕೆ ಹಾನಿಕಾರಕ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೃತಕ ಸಿಹಿಕಾರಕಗಳು ಜನರಲ್ಲಿ ವಿವಿಧ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಅವುಗಳ ಸೇವನೆಯನ್ನು ತ್ಯಜಿಸುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

Health Tips: ಸಕ್ಕರೆಯೇತರ ಸಿಹಿಕಾರಕ ಆಹಾರಕ್ರಮ ಆರೋಗ್ಯಕ್ಕೆ ಹಾನಿಕಾರಕ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
| Edited By: ಅಕ್ಷಯ್​ ಪಲ್ಲಮಜಲು​​

Updated on: May 20, 2023 | 2:55 PM

ತೂಕವನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ, ಜನರು ಮಾಡುವ ಮೊದಲ ಬದಲಾವಣೆಯೆಂದರೆ ಸಕ್ಕರೆಯನ್ನು ತೊಡೆದುಹಾಕಲು ಪ್ರಯತ್ನಿಸುವುದು ಮತ್ತು ಶೀಘ್ರದಲ್ಲಿ ದೇಹ ತೂಕವನ್ನು ನಿಯಂತ್ರಿಸಲು ಸಕ್ಕರೆಯೇತರ ಸಿಹಿಕಾರಕಗಳನ್ನು ಬಳಕೆ ಮಾಡುವುದು. ಇದು ನಮ್ಮ ದೇಹದ ಪರವಾಗಿ ಧನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ಭಾವಿಸಿದ್ದೀರಾ, ನಿಮ್ಮ ಯೋಚನೆ ತಪ್ಪು. ವಿಶ್ವ ಆರೋಗ್ಯ ಸಂಸ್ಥೆಯ ಹೊಸ ವರದಿಯ ಪ್ರಕಾರ, ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆಯನ್ನು ತಡೆಯಲು ಸಹಾಯ ಮಾಡುವ ಸಕ್ಕರೆಯೇತರ ಸಿಹಿಕಾರಕಗಳು ಸಕ್ಕರೆಗಳಿಗಿಂತ ಭಿನ್ನವಾಗಿರುವುದಿಲ್ಲ. ತೂಕವನ್ನು ಕಳೆದುಕೊಳ್ಳಲು ಅಥವಾ ಕೆಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ನೀವು ಸಕ್ಕರೆಯೇತರ ಸಿಹಿಕಾರಕಗಳನ್ನು (NSS) ಬಳಸುತ್ತಿದ್ದರೆ, ಅದರಿಂದ ಆದಷ್ಟು ದೂರವಿರಿ. ವಿಶ್ವ ಆರೋಗ್ಯ ಸಂಸ್ಥೆ ಕೃತಕ ಸಿಹಿಕಾರಕಗಳ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದು ಸಕ್ಕರೆಯಿಲ್ಲದ ಕೃತಕ ಸಿಹಿಕಾರಕಗಳು ಒಳ್ಳೆಯದಕ್ಕಿಂದ ಹೆಚ್ಚು ಹಾನಿ ಮಾಡುತ್ತದೆ ಎಂದು ಕಂಡುಹಿಡಿದಿದೆ.

ವರ್ಷಗಳಿಂದ ಸಕ್ಕರೆಯೇತರ ಸಿಹಿಕಾರಕಗಳನ್ನು, ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿ ಮಾರಾಟ ಮಾಡಲಾಗುತ್ತಿದೆ. ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಿಸಲು ಅನೇಕ ಜನರು ಈ ಸಕ್ಕರೆಯೇತರ ಸಿಹಿಕಾರಕಗಳನ್ನು ಬಳಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಇದು ಆರೋಗ್ಯಕರ ಆಯ್ಕೆಯಲ್ಲ ಎಂದು ಹೇಳಿದೆ.

ಸಕ್ಕರೆಯೇತರ ಸಿಹಿಕಾರಕಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ:

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ, ಸಕ್ಕರೆಯೇತರ ಸಿಹಿಕಾರಕಗಳು ದೀರ್ಘಾವಧಿಯಲ್ಲಿ ವಯಸ್ಕರರು ಅಥವಾ ಮಕ್ಕಳಲ್ಲಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಬದಲಿಗೆ ಸಕ್ಕರೆಯೇತರ ಸಿಹಿಕಾರಕಗಳ ಬಳಕೆಯು ಟೈಪ್ 2 ಮಧುಮೇಹ, ಹೃದಯರಕ್ತನಾಳಗಳ ಕಾಯಿಲೆಗಳು ಮತ್ತು ವಯಸ್ಕರರಲ್ಲಿ ಸಾವಿನ ಅಪಾಯದಂತಹ ಹಾನಿಕಾರ ಪರಿಣಾಮಗಳನ್ನು ಉಂಟುಮಾಡಬಹುದು.

ವಿವಿಧ ವೀಕ್ಷಣಾ ಅಧ್ಯಯನಗಳಿಂದ ಪುರಾವೆಗಳನ್ನು ಉಲ್ಲೇಖಿಸಿ, 10 ವರ್ಷಗಳವರೆಗಿನ ಅನುಸರಣೆಯೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯೇತರ ಸಿಹಿಕಾರಕಗಳ ಸೇವನೆಯು ಭೌತಿಕ ದ್ರವ್ಯರಾಶಿ ಸೂಚಿಯೊಂದಿಗೆ ಸಂಬಂಧಿಸಿದೆ ಮತ್ತು ಇದು ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

ಸಕ್ಕರೆಗಳನ್ನು ಸಕ್ಕರೆಯೇತರ ಸಿಹಿಕಾರಕಗಳೊಂದಿಗೆ ಬದಲಿಸುವುದು ದೀರ್ಘಾವಧಿಯಲ್ಲಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಜನರು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಲು ಇತರ ಮಾರ್ಗಗಳನ್ನು ಪರಿಗಣಿಸಬೇಕು, ಉದಾಹರಣೆಗೆ ಹಣ್ಣುಗಳು ಅಥವಾ ಸಿಹಿಗೊಳಿಸದ ಆಹಾರ ಮತ್ತು ಪಾನೀಯಗಳಂತಹ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಗಳೊಂದಿಗೆ ಆಹಾರವನ್ನು ಸೇವಿಸಬೇಕು” ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ಹೇಳುತ್ತಾರೆ.

ಇದನ್ನೂ ಓದಿ:Health Tips : ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ

ಗಮನಿಸಬೇಕಾದ ಇತರ ತೊಡಕುಗಳು:

ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಸಕ್ಕರೆಯೇತರ ಸಿಹಿಕಾರಕಗಳ ಸೇವನೆಯಿಂದ ಹಲವಾರು ಸಾಂಕ್ರಾಮಿಕವಲ್ಲದ ಕಾಯಿಲೆಗಳಾದ ಹೃದ್ರೋಗಗಳು ಸಂಭವಿಸುತ್ತದೆ ಎಂದು ಹೇಳಿದೆ. ಟೈಪ್ 2 ಮಧುಮೇಹ, ಹೃದಯರಕ್ತನಾಳಗಳ ಕಾಯಿಲೆಗಳು ಮತ್ತು ವಯಸ್ಕರರಲ್ಲಿ ಸಾವಿನ ಅಪಾಯದಂತಹ ಹಾನಿಕಾರ ಪರಿಣಾಮಗಳನ್ನು ಉಂಟುಮಾಡಬಹುದು ಹಾಗೂ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಸಕ್ಕರೆಯೇತರ ಸಿಹಿಕಾರಕಗಳ ಸೇವನೆ ಅವಧಿಪೂರ್ವ ಜನನದ ಅಪಾಯವನ್ನು ಹೆಚ್ಚಿಸುತ್ತದೆ.

ಪರಿಹಾರಗಳು

ಆಹಾರದಲ್ಲಿ ಸಕ್ಕರೆ ಸೇವನೆಯನ್ನು ಬಿಡಲು ಸಕ್ಕರೆಯೇತರ ಸಿಹಿಕಾರಕಗಳನ್ನು ಬಳಸುವ ಬದಲು, ಕಾರ್ಯಸಾಧ್ಯವಾದ ಪರ್ಯಾಯಗಳು ಅಸ್ತಿತ್ವದಲ್ಲಿವೆಯೇ ಎಂದು ಅನ್ವೇಷಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಉಚಿತ ಸಕ್ಕರೆಯ ಸೇವನೆಯಲ್ಲಿ ಕಡಿತ ಸಾಧಿಸಲು ಸಕ್ಕರೆಯೇತರ ಸಿಹಿಕಾರಕಗಳ ಬಳಕೆಯು ಏಕೈಕ ಮಾರ್ಗವಲ್ಲ. ಹಣ್ಣುಗಳು ಮತ್ತು ಸಿಹಿಗೊಳಿಸದ ಆಹಾರಗಳು ಮತ್ತು ಪಾನೀಯಗಳಂತಹ ನೈಸರ್ಗಿಕವಾಗಿ ಸಿಗುವ ಸಕ್ಕರೆಗಳ ಪರ್ಯಾಯವನ್ನು ಸೇವಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್