ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಹಾಗೂ ಅಭಿವೃದ್ಧಿ ಹೊಂದುವುದು ಒಳ್ಳೆಯದೇ ಆದರೂ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಆತನ ಕೆಲವು ಚಟುವಟಿಕೆಗಳು ಪರಿಸರ ಸ್ನೇಹಿ ಆಗುವ ಬದಲು, ಪರಿಸರ ಮಾರಕವಾಗುತ್ತಿದೆ. ಕಾಡು ನಾಶವು ಪ್ರಕ್ರತಿಯಲ್ಲಿ ಉಷ್ಣಾಂಶ ಬರಲು ಕಾರಣವಾಗಿದೆ. ಇದರ ಪರಿಣಾಮವಾಗಿ ಹಿಮ ಪ್ರದೇಶಗಳು ಕರಗಿ ಜಲಪ್ರವಾಹವಾಗುತ್ತಿದೆ. ಅದಲ್ಲದೇ, ಭೂಕಂಪ, ಜಲಪ್ರವಾಹಗಳು, ಅತಿವೃಷ್ಟಿಗಳ ಎಚ್ಚರಿಕೆಯ ಗಂಟೆ ಮೊಳಗುತ್ತಿದ್ದರೂ ಆತನ ಸ್ವಾರ್ಥತನ ಮಾತ್ರ ನಿಂತಿಲ್ಲ. ಹೀಗಾಗಿ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 13 ರಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಸದ್ದುದ್ದೇಶದಿಂದ 1989 ರಲ್ಲಿ, ಯುನೈಟೆಡ್ ನೇಷನ್ಸ್ ಪ್ರತಿ ವರ್ಷ ಅಕ್ಟೋಬರ್ ಎರಡನೇ ಬುಧವಾರದಂದು ಈ ದಿನವನ್ನು ಆಚರಿಸಲು ಘೋಷಿಸಿತು. ಆದರೆ 2009, ಡಿಸೆಂಬರ್ 21 ರಂದು ವಿಶ್ವಸಂಸ್ಥೆಯು ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 13 ರಂದು ಆಚರಿಸಲು ಘೋಷಿಸಿತು. ವಿಪತ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಪ್ರತಿ ವರ್ಷ ಅಕ್ಟೋಬರ್ 13 ರಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಮನುಷ್ಯನು ಸ್ವಾರ್ಥದಿಂದ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಕೃತಿಯು ಮುನಿಸಿಕೊಂಡಿದೆ. ಹೀಗಾಗಿ ವಿಪತ್ತನ್ನು ಕಡಿಮೆ ಮಾಡಲು ಮತ್ತು ಆದರಿಂದ ಎದುರಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಪ್ರಕೃತಿ ವಿಕೋಪಗಳ ಅಪಾಯವನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸಲು ಅಭಿಯಾನಗಳು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಮಕ್ಕಳು ನಿಮ್ಮ ಮೇಲೆ ಕೈ ಮಾಡುತ್ತಾರಾ? ಈ ಕೆಟ್ಟ ಅಭ್ಯಾಸಕ್ಕೆ ಹೀಗೆ ಬ್ರೇಕ್ ಹಾಕಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ