AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips: ಮಕ್ಕಳು ನಿಮ್ಮ ಮೇಲೆ ಕೈ ಮಾಡುತ್ತಾರಾ? ಈ ಕೆಟ್ಟ ಅಭ್ಯಾಸಕ್ಕೆ ಹೀಗೆ ಬ್ರೇಕ್ ಹಾಕಿ

ಮನೆಯಲ್ಲಿ ಮಕ್ಕಳಿದ್ದರೆ ಅದೇನೋ ಆನಂದ. ಮನದಲ್ಲಿ ಅದೆಷ್ಟೇ ದುಗುಡ, ನೋವು ಇದ್ದರೂ ಮಕ್ಕಳ ಜೊತೆ ಸಮಯ ಕಳೆದಾಗ ಎಲ್ಲವೂ ದೂರವಾಗುತ್ತದೆ. ಆದರೆ ಈಗಿನ ಕಾಲದ ಮಕ್ಕಳನ್ನು ಸಹಿಸಿಕೊಳ್ಳೋದೇ ಕಷ್ಟ. ಕುಳಿತಲ್ಲಿ ಕೂತ್ಕೋಳಲ್ಲ, ಹೇಳಿದ್ದನ್ನು ಕೇಳುವುದೇ ಇಲ್ಲ. ಕೆಲವೊಂದು ಮಕ್ಕಳು ದೊಡ್ಡವರು ಸಣ್ಣವರು ಎಂದು ನೋಡದೇನೇ ಹೊಡೆಯುತ್ತಾರೆ. ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸದೇ ಹೋದಲ್ಲಿ ಅದೇ ಅಭ್ಯಾಸವಾಗಿ ಬಿಡುತ್ತದೆ. ಹೀಗಾಗಿ ಮಕ್ಕಳು ದೊಡ್ಡವರ ಮೇಲೆ ನಿಲ್ಲಿಸುವುದು ಹೇಗೆ? ಈ ಕುರಿತಾದ ಮಾಹಿತಿ ಇಲ್ಲಿದೆ.

Parenting Tips: ಮಕ್ಕಳು ನಿಮ್ಮ ಮೇಲೆ ಕೈ ಮಾಡುತ್ತಾರಾ? ಈ ಕೆಟ್ಟ ಅಭ್ಯಾಸಕ್ಕೆ ಹೀಗೆ ಬ್ರೇಕ್ ಹಾಕಿ
ಸಾಯಿನಂದಾ
| Edited By: |

Updated on:Oct 10, 2024 | 5:25 PM

Share

ಮಕ್ಕಳೆಂದ ಮೇಲೆ ತುಂಟಾಟ ಸಹಜ, ಈ ಮಕ್ಕಳ ತುಂಟಾಟಗಳು ನಗು ತರಿಸಿದರೆ ಕೆಲವೊಮ್ಮೆ ಪಿತ್ತ ನೆತ್ತಿಗೇರುತ್ತದೆ. ಮಕ್ಕಳಂತೂ ಕುಳಿತಲ್ಲಿಯೇ ಕುಳಿತುಕೊಳ್ಳುವುದು ಕಡಿಮೆಯೇ. ಏನಾದರೊಂದು ತರಲೆ ತುಂಟಾಟಗಳನ್ನು ಮಾಡುತ್ತಾ ಹೆತ್ತವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಹೊರಗಡೆ ಹೋದಾಗ ತುಂಟಾಟವು ಅತಿರೇಕಕ್ಕೆ ಮಿತಿದರೆ ಒಂದೇಟು ಬೀಳುತ್ತದೆ. ಕೆಲವೊಮ್ಮೆ ಹೆತ್ತವರ ಮೇಲೆ ಕೈಯೆತ್ತುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ನಿಮ್ಮ ಮಗುವಿನಲ್ಲಿ ಹೊಡೆಯುವ ಅಭ್ಯಾಸವಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸಿ ಮಕ್ಕಳನ್ನು ಸರಿದಾರಿಗೆ ತರಬಹುದು.

  • ಶಾಂತವಾಗಿರುವುದನ್ನು ಕಲಿಯಿರಿ : ಒಂದು ವೇಳೆ ನಿಮ್ಮ ಮಗು ಕೈ ಎತ್ತಿದರೆ ಶಾಂತವಾಗಿಯೇ ಆ ಸಂದರ್ಭವನ್ನು ನಿಭಾಯಿಸುವುದನ್ನು ಕಲಿಯಿರಿ. ಕೋಪದಲ್ಲಿ ಮಗುವಿಗೆ ಹೊಡೆಯುವುದು ಸರಿಯಲ್ಲ. ನೀವು ಕೂಡ ಸಿಟ್ಟು ಮಾಡಿಕೊಂಡರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಮಗುವಿನೊಂದಿಗೆ ಶಾಂತವಾಗಿ ವರ್ತಿಸಿ ಮಗುವಿಗೆ ಮಾಡುತ್ತಿರುವುದು ತಪ್ಪು ಎಂದು ವಿವರಿಸಿ ಹೇಳುವುದನ್ನು ಕಲಿಯಿರಿ.
  • ಮಗುವಿಗೆ ನೀವೇ ಮಾದರಿ ವ್ಯಕ್ತಿಯಾಗಿರಿ: ಮಗುವು ಕಡಿಮೆ ವಯಸ್ಸಿನವರಾಗಿದ್ದರೆ ಮತ್ತು ನಿಮ್ಮನ್ನು ಹೊಡೆಯುತ್ತಿದ್ದರೆ, ಆ ಕ್ಷಣದಲ್ಲಿ ನೀವು ಕೂಡ ಕೂಗಾಡಿದರೆ ಕೋಪದಲ್ಲಿ ಕೈ ಎತ್ತಬೇಡಿ. ಇದರಿಂದ ಮಗುವು ಮತ್ತಷ್ಟು ಆಕ್ರಮಣಕಾರಿ ಸ್ವಭಾವವನ್ನು ತೋರಿಸಬಹುದು. ಸಾಧ್ಯವಾದಷ್ಟು ನೀವು ಮಾದರಿ ವ್ಯಕ್ತಿಯಾಗಿ ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ಬೆಳೆಸುವತ್ತ ಗಮನ ಕೊಡಿ.
  • ಮಕ್ಕಳ ಈ ಅಭ್ಯಾಸದ ಹಿಂದಿನ ಕಾರಣ ಅರ್ಥೈಸಿಕೊಳ್ಳಿ : ಮಕ್ಕಳು ದೊಡ್ಡವರ ಮೇಲೆ ಕೈ ಎತ್ತಿದರೆ ಆ ತಕ್ಷಣವೇ ಮಗುವಿನೊಂದಿಗೆ ಮಾತನಾಡಿದರೆ ಕಾರಣವನ್ನು ತಿಳಿಯುವುದು ಬಹಳ ಮುಖ್ಯ. ನಿಮ್ಮ ಮಗುವು ಯಾಕಾಗಿ ಇನ್ನೊಬ್ಬರ ಮೇಲೆ ಕೈ ಎತ್ತಿದ್ದಾರೆ ಎಂದು ಕಾರಣ ತಿಳಿದು ಆ ಬಳಿಕ ಮಗುವಿನೊಂದಿಗೆ ಪ್ರತಿಕ್ರಿಯಿಸುವುದು ಬಹಳ ಮುಖ್ಯ.
  • ಕೋಪವನ್ನು ವ್ಯಕ್ತಪಡಿಸಲು ಇದೊಂದೇ ಮಾರ್ಗವಲ್ಲ ಎಂದು ತಿಳಿ ಹೇಳಿ : ಕೆಲವು ಮಕ್ಕಳು ಸಿಟ್ಟು ಬಂದರೆ ಒಂದೊಂದು ರೀತಿಯಲ್ಲಿ ವರ್ತಿಸುತ್ತಾರೆ. ಕೆಲವು ಮಕ್ಕಳು ಕಿರುಚಾಡಿದರೆ, ಇನ್ನು ಕೆಲವು ಮಕ್ಕಳು ಕೋಪ ದಲ್ಲಿ ಕೈ ಎತ್ತುತ್ತಾರೆ. ಈ ವೇಳೆಯಲ್ಲಿ ಕೋಪವನ್ನು ತೋರಿಸಲು ಇತರ ಮಾರ್ಗಗಳಿದ್ದು, ಹೊಡೆಯುವ ಬದಲು ಪದಗಳನ್ನು ಬಳಸಲು ಹೇಳಿ. ಹೀಗೆ ಮಾಡುತ್ತಾ ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸಿ.
  • ಮಗುವಿಗೆ ಸಮಯ ನೀಡಿ : ನಿಮ್ಮ ಮಗುವಿಗೆ ಕೋಪ ಬಂದಾಗ ನೀವು ಕೂಡ ತಕ್ಷಣವೇ ಪ್ರತಿಕ್ರಿಯಿಸಬೇಡಿ. ಮಗುವು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಸಾಧ್ಯವಾದರೆ ತಾಳ್ಮೆಯಿಂದ ಮಾರ್ಗದರ್ಶನದೊಂದಿಗೆ ಮಗುವಿನ ಅಭ್ಯಾಸವನ್ನು ಸುಧಾರಿಸಿ. ಒಂದೇ ಬಾರಿಗೆ ಈ ನಡವಳಿಕೆಯನ್ನು ತಿದ್ದಲು ಸಾಧ್ಯವಿಲ್ಲ. ಹೀಗಾಗಿ ಕಾಲವಕಾಶ ನೀಡುವ ಮುಖೇತ ಮಗುವಿನ ಈ ವರ್ತನೆಯನ್ನು ಬದಲಾಯಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Thu, 10 October 24

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬರಬೇಕಿದ್ದ 'ಕೈ' ಶಾಸಕರ ಪ್ರವಾಸ ರದ್ದು
ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬರಬೇಕಿದ್ದ 'ಕೈ' ಶಾಸಕರ ಪ್ರವಾಸ ರದ್ದು
ಹೆಜ್ಜೇನು ದಾಳಿಗೆ ಶಾಲೆಯ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಹೆಜ್ಜೇನು ದಾಳಿಗೆ ಶಾಲೆಯ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಮೊದಲ ಬಾರಿ ಜಡ್ಜ್ ಪಾತ್ರದಲ್ಲಿ ನಟಿ ತಾರಾ, ಪಾತ್ರದ ಬಗ್ಗ ನಟಿ ಮಾತು
ಮೊದಲ ಬಾರಿ ಜಡ್ಜ್ ಪಾತ್ರದಲ್ಲಿ ನಟಿ ತಾರಾ, ಪಾತ್ರದ ಬಗ್ಗ ನಟಿ ಮಾತು
ಸಚಿವ ಸ್ಥಾನಕ್ಕಾಗಿ ಶಾಸಕರ ಲಾಬಿ: ಸಂಚಲನ ಮೂಡಿಸಿದ ಕೃಷ್ಣಭೈರೇಗೌಡ ನಡೆ
ಸಚಿವ ಸ್ಥಾನಕ್ಕಾಗಿ ಶಾಸಕರ ಲಾಬಿ: ಸಂಚಲನ ಮೂಡಿಸಿದ ಕೃಷ್ಣಭೈರೇಗೌಡ ನಡೆ
ಮಾಲೂರಿನಲ್ಲಿ 80 ಕೋಟಿ ರೂ. ಸರ್ಕಾರಿ ಭೂ ಹಗರಣ
ಮಾಲೂರಿನಲ್ಲಿ 80 ಕೋಟಿ ರೂ. ಸರ್ಕಾರಿ ಭೂ ಹಗರಣ
ಬೆಂಗಳೂರಿನಲ್ಲಿ ಮತ್ತೊಂದು ಅವೈಜ್ಞಾನಿಕ ಕಾಮಗಾರಿ
ಬೆಂಗಳೂರಿನಲ್ಲಿ ಮತ್ತೊಂದು ಅವೈಜ್ಞಾನಿಕ ಕಾಮಗಾರಿ
ನಲಪಾಡ್​ಗೆ ಮತ್ತೆ ಶಾಕ್: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್
ನಲಪಾಡ್​ಗೆ ಮತ್ತೆ ಶಾಕ್: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ