AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಸೊಸೆಯ ಮೇಲೆ ಹೊಟ್ಟೆಕಿಚ್ಚು ಪಡುವ ಅತ್ತೆಯನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಯಾವ ಮನೆಯಲ್ಲಿ ಅತ್ತೆ ಸೊಸೆಯಂದಿರ ಜಗಳಗಳು ಇಲ್ಲ ಹೇಳಿ. ತಾಯಿ ಮಗಳಂತೆ ಇರುವ ಅತ್ತೆ ಸೊಸೆಯರನ್ನು ಕಾಣುವುದು ಬಹಳ ಅಪರೂಪ. ಆದರೆ ಕೆಲವು ಅತ್ತೆಯಂದಿರು ಸೊಸೆಯನ್ನು ದ್ವೇಷಿಸುತ್ತಾರೆ, ಅಸೂಯೆಪಡುತ್ತಾರೆ. ಅತ್ತೆಯು ಈ ರೀತಿಯಾಡುತ್ತಿದ್ದರೆ ಸೊಸೆಯ ಜೊತೆಗಿನ ಸಂಬಂಧವು ಹಾಳಾಗುತ್ತದೆ. ಈ ವೇಳೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವ ಅತ್ತೆಯನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ಸೊಸೆಯು ಅರಿತಿರಬೇಕು.

Relationship Tips : ಸೊಸೆಯ ಮೇಲೆ ಹೊಟ್ಟೆಕಿಚ್ಚು ಪಡುವ ಅತ್ತೆಯನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Sep 19, 2024 | 3:53 PM

Share

ಅತ್ತೆ ಮತ್ತು ಸೊಸೆ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಹೌದು, ಮದುವೆಯಾದ ಹೊಸದರಲ್ಲಿ ಅತ್ತೆಯು ಸೊಸೆಯನ್ನು ಮಗಳಂತೆ ನೋಡಿಕೊಳ್ಳಬಹುದು. ಆದರೆ ದಿನ ಕಳೆದಂತೆ ಮನೆಗೆ ಬಂದ ಹೆಣ್ಣು ಮಗಳು ನನ್ನಿಂದ ತನ್ನ ಮಗನನ್ನು ದೂರ ಮಾಡುತ್ತಿದ್ದಾಳೆ ಎನ್ನುವ ಅಭದ್ರತೆಯ ಭಾವವೊಂದು ಕಾಡಬಹುದು. ಇದೇ ಕಾರಣಕ್ಕೆ ಸೊಸೆಯನ್ನು ಕಂಡರೆ ಅತ್ತೆಯು ದ್ವೇಷಿಸಲು ಪ್ರಾರಂಭಿಸಬಹುದು. ಈ ವರ್ತನೆಯು ಅತ್ತೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬರಲು ಕಾರಣವಾಗುತ್ತದೆ. ಇಂತಹ ಅತ್ತೆಯನ್ನು ಹೊಂದಿರುವ ಸೊಸೆಯಂದಿರು ಈ ಕೆಲವು ಸಲಹೆಗಳನ್ನು ಪಾಲಿಸಿ ನಿಭಾಯಿಸಿಕೊಂಡು ಹೋಗಬಹುದು.

  • ಸಂವಹನ ನಡೆಸುವುದು : ಯಾವುದೇ ಸಂಬಂಧವಿರಲಿ, ಜಗಳ ಹಾಗೂ ಮನಸ್ತಾಪಗಳು ಬಂದಾಗ ಸಂವಹನದಿಂದ ನಡೆಸುವುದು ಬಹಳ ಮುಖ್ಯ. ಮನಸ್ಸಿನಲ್ಲಿ ಯಾವುದೇ ಕಲ್ಮಶವನ್ನು ಇಟ್ಟುಕೊಳ್ಳದೆ ಮುಕ್ತವಾಗಿ ಮಾತನಾಡಿದರೆ ಎಲ್ಲಾ ಸಮಸ್ಯೆಗೂ ಪರಿಹಾರವು ಸಿಗುತ್ತದೆ. ಹೀಗಾಗಿ ಯಾವುದೇ ಯೋಚನೆಯಿಲ್ಲದೇ ಮನಸ್ಸು ಶಾಂತವಾಗಿದ್ದಾಗ ಈ ಬಗ್ಗೆ ಮಾತನಾಡಿದರೆ ಅತ್ತೆ ಸೊಸೆಯ ಬಾಂಧವ್ಯವು ಗಟ್ಟಿಯಾಗುತ್ತದೆ.
  • ಹೊಂದಿಕೊಳ್ಳಲು ಸಮಯಾವಕಾಶ ನೀಡಿ : ಮಗನಿಗೆ ಮದುವೆಯಾಯಿತು ಎಂದರೆ ತನ್ನ ಮಗ ನನ್ನಿಂದ ದೂರವಾಗುತ್ತಾನೆ ಎನ್ನುವ ಭಯವು ಕಾಡುತ್ತದೆ. ಹೀಗಾಗಿ ಮಗನನ್ನು ಕಳೆದುಕೊಳ್ಳಲು ತಾಯಿಯು ಇಷ್ಟಪಡುವುದಿಲ್ಲ. ಈ ವೇಳೆಯಲ್ಲಿ ಸೊಸೆಯು ಮಗನೊಂದಿಗೆ ಚೆನ್ನಾಗಿದ್ದರೆ ಆಕೆಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಅತ್ತೆಯ ಜೊತೆಯೂ ನೀವಿಬ್ಬರು ಸಮಯ ಕಳೆಯಿರಿ, ಸಲಹೆಗಳನ್ನು ಪಡೆಯುವುದನ್ನು ಮರೆಯದಿರಿ. ಈ ಮೂಲಕ ಅತ್ತೆಗೂ ಹೊಂದಿಕೊಂಡು ಹೋಗಲು ಕಾಲಾವಕಾಶವನ್ನು ನೀಡುವುದು ಒಳ್ಳೆಯದು.
  • ಸಹಾನುಭೂತಿಯಿರಲಿ : ದಾಂಪತ್ಯದಲ್ಲಿ ಪದೇ ಪದೇ ಸಮಸ್ಯೆಗಳು ಬರುತ್ತಿದ್ದರೆ ಅದಕ್ಕೆ ಕಾರಣ ಅತ್ತೆಯಾಗಿರಬಹುದು. ಹೀಗಾಗಿ ಪತಿಯ ತಾಯಿ ಯಾವ ಕಾರಣಕ್ಕಾಗಿ ಹೀಗೆ ವರ್ತಿಸುತ್ತಾರೆ ಎಂದು ಯೋಚಿಸಿ, ಆದರೆ ಅವಳ ಬಗ್ಗೆಯು ಸಹಾನುಭೂತಿ ಬೆಳೆಸಿಕೊಳ್ಳಿ. ಅದಲ್ಲದೇ ಅತ್ತೆ ಸ್ಥಾನದಲ್ಲಿ ನಿಂತು ಯೋಚಿಸಿದರೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅತ್ತೆಯನ್ನು ನಿಭಾಯಿಸುವುದು ಸುಲಭವಾಗುತ್ತದೆ.
  • ಮನೆಕೆಲಸದಲ್ಲಿ ಸಹಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ : ಅಸೂಯೆ ಪಡುವ ಅತ್ತೆಯ ಮನಸ್ಸನ್ನು ಗೆಲ್ಲುವ ಅಸ್ತ್ರವೆಂದರೆ ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದು. ಮನೆಯ ಕೆಲಸಗಳಿಗೆ ಅವರ ಜೊತೆಗೆ ಕೈ ಜೋಡಿಸುವುದು, ಹಾಗೂ ಕೆಲಸಕ್ಕೆ ಸುಲಭವಾಗುವಂತಹ ವಸ್ತುಗಳನ್ನು ಅವರಿಗಾಗಿ ತಂದರೆ ಅತ್ತೆ ಸೊಸೆ ಸಂಬಂಧವು ಗಟ್ಟಿಯಾಗುತ್ತದೆ.
  • ಜಗಳವಾಗುವುದನ್ನು ತಪ್ಪಿಸಿ : ಸಾಮಾನ್ಯವಾಗಿ ಅತ್ತೆಯು ಸೊಸೆಯನ್ನು ಕಂಡರೆ ಮೈ ಮೇಲೆ ಬೀಳುವುದು ಹಾಗೂ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಹೀಗಾಗಿ ಸೊಸೆಯಾದವಳು ತಾಳ್ಮೆ ಮತ್ತು ಸಮಾಧಾನದಿಂದಲೇ ಜಗಳವಾಡುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ಎಷ್ಟೋ ಮನೆಗಳಲ್ಲಿ ಅತ್ತೆ ಸೊಸೆ ಸಂಬಂಧಗಳು ಉಳಿಯುತ್ತದೆ.
  • ವಿಶೇಷ ಉಡುಗೊರೆಯನ್ನು ನೀಡಿ : ಅಭದ್ರತೆಯ ಭಾವ, ತನ್ನ ಮಗನನ್ನು ಕಳೇದುಕೊಳ್ಳುವ ಭಯದಿಂದಲೇ ಅತ್ತೆಯು ಅಸೂಯೆ ಅಥವಾ ಹೊಟ್ಟೆಕಿಚ್ಚು ಪಟ್ಟುಕೊಳ್ಳಬಹುದು. ಹೀಗಾಗಿ ಆ ಭಯವನ್ನು ದೂರವಾಗಿಸುವ ಮೂಲಕ ಅತ್ತೆಗೆ ನೀವು ಮಗಳಾಗಿ. ಸಣ್ಣ ಪುಟ್ಟ ಉಡುಗೊರೆಗಳನ್ನು ನೀಡಿ, ಅವರ ಮೇಲೆ ನಿಮಗಿರುವ ಒಳ್ಳೆಯ ಅಭಿಪ್ರಾಯಗಳನ್ನು ತಿಳಿಸಿ.
  • ಕೆಟ್ಟ ನಡವಳಿಕೆಯನ್ನು ಸಾಧ್ಯವಾದಷ್ಟು ನಿರ್ಲಕ್ಷಿಸಿ : ದಾಂಪತ್ಯ ಜೀವನಕ್ಕೆ ಕೆಲವೊಮ್ಮೆ ಅತ್ತೆಯೇ ಮುಳ್ಳಾಗಬಹುದು. ತನ್ನ ಕುತಂತ್ರ ಬುದ್ಧಿಯಿಂದ ಮಗನಿಗೆ ಏನಾದರೂ ಹೇಳಿ ಗಂಡ ಹೆಂಡಿರ ನಡುವೆ ಜಗಳವಾಗುವಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಅಂತಹ ನಡವಳಿಕೆಗಳು ಕಂಡು ಬಂದರೆ ಅದನ್ನು ನಿರ್ಲಕ್ಷ್ಯ ಮಾಡುವುದನ್ನು ಮೊದಲು ಕಲಿಯಿರಿ.
  • ಸಂಗಾತಿಯೊಂದಿಗೆ ಮಾತನಾಡಿ : ಸಂಗಾತಿಯೊಂದಿಗೆ ಈ ಬಗ್ಗೆ ಹೇಳಿದರೆ ಅತ್ತೆಯ ಬಗ್ಗೆ ದೂರು ಹೇಳಿದ್ದಂತೆ ಆಗುತ್ತದೆ. ಆದರೆ ಅತ್ತೆ ಸೊಸೆಯ ಸಂಬಂಧ ಚೆನ್ನಾಗಿರಬೇಕೆಂದರೆ ಸಂಗಾತಿಯೊಂದಿಗೆ ಈ ವಿಚಾರದ ಬಗ್ಗೆ ಮಾತನಾಡುವುದು ಅಗತ್ಯ. ಅತ್ತೆಯ ಬಗ್ಗೆ ನಿಮಗಿರುವ ಒಳ್ಳೆಯ ಅಭಿಪ್ರಾಯವನ್ನು ತಿಳಿಸಿ. ಅವರೊಂದಿಗೆ ಹೇಗೆ ಹೊಂದಿಕೊಂಡು ಹೋಗಬಹುದು ಎಂದು ಚರ್ಚಿಸಿ, ಇದರಿಂದ ಅತ್ತೆಯನ್ನು ನಿಭಾಯಿಸುವುದು ಸುಲಭವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ