AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solo Journey: ಸೋಲೋ ಜರ್ನಿ ಮಜಾನೇ ಬೇರೆ, ಎಷ್ಟೇಲ್ಲ ಲಾಭಗಳಿವೆ ಗೊತ್ತಾ!

ಏಕಾಂಗಿಯಾಗಿ ಪ್ರಯಾಣಿಸುವ ಅನೇಕ ಪ್ರಯೋಜನಗಳ ಹೊರತಾಗಿ, ಪ್ರಯಾಣ ಮಾಡುವಾಗ ಕಲಿತ ಕೌಶಲ್ಯಗಳು ಮತ್ತು ಅನುಭವಗಳು ಭವಿಷ್ಯದಲ್ಲಿ ಉಪಯುಕ್ತವೆಂದು ಹೇಳಲಾಗುತ್ತದೆ.

Solo Journey: ಸೋಲೋ ಜರ್ನಿ ಮಜಾನೇ ಬೇರೆ, ಎಷ್ಟೇಲ್ಲ ಲಾಭಗಳಿವೆ ಗೊತ್ತಾ!
ಪ್ರಾತಿನಿಧಿಕ ಚಿತ್ರ
TV9 Web
| Updated By: ನಯನಾ ರಾಜೀವ್|

Updated on: Sep 04, 2022 | 6:00 AM

Share

ಪ್ರತಿಯೊಬ್ಬರೂ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟ ಪಡುತ್ತಾರೆ. ಆದರೆ ಯಾವಾಗ ಏಕಾಂಗಿ ಪ್ರಯಾಣ (Solo Journey) ಮಾಡಬೇಕು. ಮತ್ತು ಹೇಗೆ ಮಾಡಬೇಕು ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಒಂದು ಹೆಜ್ಜೆ ಹಿಂದೆ ಸರಿಯುತ್ತವೆ. ಆದರೆ ಏಕಾಂಗಿ ಪ್ರಯಾಣವು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಏಕಾಂಗಿಯಾಗಿ ಪ್ರಯಾಣಿಸುವ ಅನೇಕ ಪ್ರಯೋಜನಗಳ ಹೊರತಾಗಿ, ಪ್ರಯಾಣ ಮಾಡುವಾಗ ಕಲಿತ ಕೌಶಲ್ಯಗಳು ಮತ್ತು ಅನುಭವಗಳು ಭವಿಷ್ಯದಲ್ಲಿ ಉಪಯುಕ್ತವೆಂದು ಹೇಳಲಾಗುತ್ತದೆ. ಏಕಾಂಗಿಯಾಗಿ ಪ್ರಯಾಣಿಸುವುದು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ. ನಾವು ಯಾವುದೇ ಸಮಯದಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದರ ಅರಿವು ನಮಗಾಗುತ್ತದೆ. ನಿಮ್ಮ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳುವಿರಿ. ಏನು ಮಾಡಬೇಕು, ಎಲ್ಲಿ ಉಳಿಯಬೇಕು ಮತ್ತು ಹತ್ತಿರದ ಪ್ರದೇಶಗಳಲ್ಲಿ ಎಷ್ಟು ಸಮಯ ಕಳೆಯಬೇಕು ಎಲ್ಲವೂ ನಿಮ್ಮ ಕೈಯಲ್ಲಿರುತ್ತದೆ.

ಆದ್ದರಿಂದ ನೀವು ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತೀರಿ. ಏಕಾಂಗಿಯಾಗಿ ಪ್ರಯಾಣಿಸುವುದು ಅಗ್ಗವಾಗಿದೆ. ಇದರಿಂದ ಹಣ ಉಳಿತಾಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಶಕ್ತಿ ಏನು ಎಂಬುದು ನಿಮಗೆ ಅರ್ಥವಾಗುತ್ತದೆ. ಇದಲ್ಲದೆ, ಸ್ವಯಂ ನಿರ್ಣಯವು ಸುಧಾರಿಸುತ್ತದೆ. ಆದ್ದರಿಂದ ಪ್ರಯಾಣದ ನಂತರವೂ ಇದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಏಕಾಂಗಿಯಾಗಿ ಪ್ರಯಾಣದಿಂದ ಇಷ್ಟೇಲ್ಲ ಪ್ರಯೋಜನಗಳಿವೆ.

ಇದನ್ನೂ ಓದಿ: ಮನೆಯಲ್ಲಿ ಗೆದ್ದಲು ಹುಳುಗಳ ಕಾಟವೇ?, ಈ ಮನೆಮದ್ದುಗಳಿಂದ ತಕ್ಷಣವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಸಾಮಾನ್ಯವಾಗಿ ನಾವು ಏಕಾಂಗಿ ಪ್ರಯಾಣವನ್ನು ಮಾಡಲು ಬಯಸಿದರೆ ಮುಂಚಿತವಾಗಿ ಯೋಜಿಸುತ್ತೇವೆ. ಎಲ್ಲಿಗೆ ಹೋಗಬೇಕು ಮತ್ತು ಎಷ್ಟು ದಿನ ಹೋಗಬೇಕು. ಮತ್ತು ಎಲ್ಲಿ ಉಳಿಯಬೇಕು ಎಂಬುದು ಸಂಪೂರ್ಣವಾಗಿ ನಮಗೆ ಬಿಟ್ಟದ್ದು. ಹಾಗಾಗಿ ಇದು  ನಾವು ಏನೆಂದು ಅರ್ಥ ಮಾಡಿಕೊಳ್ಳುವ ಒಂದು ಸುಂದರ ಜರ್ನಿ ಎಂದು ಹೇಳಬಹುದು. ಏಕಾಂಗಿಯಾಗಿ ಪ್ರಯಾಣಿಸುವಾಗ, ಬಸ್ಸುಗಳು ಮತ್ತು ರೈಲುಗಳಲ್ಲಿ ವಿಭಿನ್ನ ಜನರನ್ನು ಭೇಟಿಯಾಗುತ್ತೇವೆ. ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಮತ್ತು ನಮ್ಮ ಮಾತುಗಳನ್ನು ಹಂಚಿಕೊಳ್ಳುವುದು, ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಲು ನಮಗೆ ಸಹಾಯವಾಗುತ್ತದೆ. ಅದರ ಹೊರತಾಗಿ ಭಾಷೆ ಮತ್ತು ಸಂವಹನ ಸುಧಾರಿಸುತ್ತದೆ. ಏಕೆಂದರೆ ಪ್ರಯಾಣದಲ್ಲಿ ಭೇಟಿಯಾದವರು ಮೊದಲು ಸ್ನೇಹಿತರಾಗಿದ್ದವರು ನಂತರ ಗಂಡ ಹೆಂಡತಿಯಾದ ಘಟನೆಗಳು ಸಾಕಷ್ಟಿವೆ.

ಗೊತ್ತಿಲ್ಲದ ಜಾಗಕ್ಕೆ ಹೋದರೆ ಆಹಾರ ಪದ್ಧತಿಯಿಂದ ಹಿಡಿದು ಉಡುಗೆ-ತೊಡುಗೆ, ಭಾಷೆ ಎಲ್ಲವೂ ವಿಭಿನ್ನವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಂವಹನವು ಬಹಳ ಮುಖ್ಯವಾಗುತ್ತದೆ. ಇದು ಮೊದಲಿಗೆ ವಿಚಿತ್ರವಾಗಿ ಮತ್ತು ಆಶ್ಚರ್ಯಕರವಾಗಿ ಕಾಣಿಸಬಹುದು. ಆದರೆ ಇನ್ನೊಂದು ಸಂಸ್ಕೃತಿಯನ್ನು ತಿಳಿಯಲು ಸಹಾಯವಾಗುತ್ತದೆ. ಮತ್ತೊಂದೆಡೆ ಈ ಒಂದು ಪ್ರವಾಸವು ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಉಳಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಮತ್ತಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್