AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshmibai Enagi Death : ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೆ ಮುಕ್ತಿ ಸಿಕ್ತು ನೋಡವಾ’

Theatre Artist : ಲಕ್ಷ್ಮೀಬಾಯಿ ಕೇವಲ ನಟಿಯಾಗಿರಲಿಲ್ಲ. ಕಲಾವಿದರಿಗೆಲ್ಲ ತಾಯಿಯ ಮಮತೆ ತೋರುತ್ತ, ತನ್ನ ಮಕ್ಕಳ ಶಿಕ್ಷಣವನ್ನೂ ನಿಭಾಯಿಸುತ್ತ ಕಂಪನಿಯ ಆಡಳಿತ ವ್ಯವಸ್ಥೆಯನ್ನೂ ನಿಭಾಯಿಸಬಲ್ಲವರಾಗಿದ್ದರು.

Lakshmibai Enagi Death : ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೆ ಮುಕ್ತಿ ಸಿಕ್ತು ನೋಡವಾ’
ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ. ಫೋಟೋ ಸೌಜನ್ಯ : ರಾಮಚಂದ್ರ ಕುಲಕರ್ಣಿ
ಶ್ರೀದೇವಿ ಕಳಸದ
|

Updated on:May 04, 2022 | 2:50 PM

Share

Lakshmibai Enagi : ಏಣಗಿ ಬಾಳಪ್ಪನವರ ಎರಡನೇ ಪತ್ನಿ  ಲಕ್ಷ್ಮೀಬಾಯಿಯವರು. ಅವರ ಮಕ್ಕಳು ನಟರಾಜ್ ಮತ್ತು ಭಾಗ್ಯಶ್ರೀ. ನಟರಾಜ ಈಗಿಲ್ಲ. 1986ರಲ್ಲಿ ನಟರಾಜ, ನಾನು ನನ್ನ ಪತಿ ಬಸಲಿಂಗಯ್ಯ ಹಿರೇಮಠ ಎಲ್ಲರೂ ನೀನಾಸಂ ರಂಗಶಿಕ್ಷಣದಲ್ಲಿ ಪರಸ್ಪರ ಪರಿಚಿತರಾದೆವು. ಅಲ್ಲಿಂದ ಧಾರವಾಡಕ್ಕೆ ಬಂದು ನಮ್ಮ ರಂಗಚಟುವಟಿಕೆಗಳನ್ನು ಶುರು ಮಾಡಿದೆವು. ಅದೇ ಹೊತ್ತಿಗೆ ಲಕ್ಷ್ಮೀಬಾಯಿ ಮತ್ತು ಬಾಳಪ್ಪನವರು ತಮ್ಮ ಕಲಾವೈಭವ ನಾಟ್ಯಸಂಘದ ಬಾಗಿಲು ಮುಚ್ಚಿ 1991ರಲ್ಲಿ ಧಾರವಾಡದ ಹವ್ಯಾಸಿ ರಂಗಭೂಮಿಯ ನಂಟನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದರು. ಮಕ್ಕಳಾದ ನಟರಾಜ, ಭಾಗ್ಯಶ್ರೀ ಕಲಾಜೀವನಕ್ಕೊಂದು ಬುನಾದಿ ಹಾಕುವುದು ಅವರ ಉದ್ದೇಶವಾಗಿತ್ತು. ಆಗ ಬಂದಾಗೆಲ್ಲ ತಿಂಗಳುಗಟ್ಟಲೆ ನಮ್ಮ ಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಲಕ್ಷ್ಮೀಬಾಯಿಯವರನ್ನು ಇಡೀ ರಂಗಭೂಮಿ ಕುಟುಂಬ ಅವ್ವಾವ್ರು ಎಂದೇ ಕರೆಯುತ್ತಿತ್ತು. ಬಹಳ ಅಂತಃಕರಣದ ಜೀವ. ನಂತರ ಚಂಪಾ ಅವರೊಂದಿಗೆ ‘ಮ್ಯಾಳ’ ರಂಗತಂಡವನ್ನು ಕಟ್ಟಿದೆವು. ಗ್ರಾಮೀಣ, ಜಾನಪದ ರಂಗಭೂಮಿಯ ಬಗ್ಗೆ ಒಟ್ಟಾಗಿ ಸಾಕಷ್ಟು ಕೆಲಸವನ್ನು ಮಾಡಿದೆವು. ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಧಾರವಾಡ, ಜಾನಪದ-ರಂಗಭೂಮಿ ಕಲಾವಿದೆ

ಅವ್ವಾವ್ರು ಯಾವ ರಂಗತಾಲೀಮನ್ನೂ ತಪ್ಪಿಸುತ್ತಿರಲಿಲ್ಲ. ಒಂದೊಂದು ಸೂಕ್ಷ್ಮವನ್ನೂ ಗಮನಿಸುತ್ತಿದ್ದರು. ನಮ್ಮ ಓರೆಕೋರೆಗಳನ್ನು ಅತ್ಯಂತ ವಿನಯದಿಂದ ತಿದ್ದುತ್ತಿದ್ದರು. ಸ್ವತಃ ಅಭಿನಯಿಸಿ ಕಲಿಸುತ್ತಿದ್ದರು. ರಂಗಸಂಬಂಧಿ ಎಲ್ಲಾ ವಿಭಾಗಗಳಲ್ಲೂ ಅವರು ಒಳಗೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಸ್ತ್ರೀಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದುದರಿಂದ ಏಣಗಿ ಬಾಳಪ್ಪನವರು, ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೂ ಮುಕ್ತಿ ಸಿಕ್ತು ನೋಡವಾ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡು ನಗುತ್ತಿದ್ದರು. ಅಂದರೆ 1959ರ ತನಕವೂ ಏಣಗಿ ಬಾಳಪ್ಪನವರು ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದರು. ಹೆಣ್ಣುಮಕ್ಕಳಿಗೆ ರಂಗಭೂಮಿ ನಿಷಿದ್ಧ ಎನ್ನುವುದು ಅಂಥ ಕಠಿಣಾವಸ್ಥೆಯಲ್ಲಿ ಇದ್ದ ಸಂದರ್ಭ. ಲಕ್ಷ್ಮೀಬಾಯಿ ಕೇವಲ ನಟಿಯಾಗಿರಲಿಲ್ಲ. ಕಂಪನಿಯ ಕಲಾವಿದರಿಗೆಲ್ಲ ತಾಯಿಯ ಮಮತೆ ತೋರುವುದರೊಂದಿಗೆ, ತನ್ನ ಮಕ್ಕಳ ಶಿಕ್ಷಣ ಮೊಟಕಾಗದಂತೆ ನೋಡಿಕೊಳ್ಳುತ್ತ, ಕಂಪನಿಯ ಆಡಳಿತ ವ್ಯವಸ್ಥೆಯನ್ನೂ ನಿಭಾಯಿಸಬಲ್ಲವರಾಗಿದ್ದರು.

ಎಂಥಾ ಚೆಂದ ಹೆಣ್ಣಮಗಳು ಅಂತೇನು ಹೇಳುತ್ತೇವಲ್ಲ ಅದಕ್ಕೆ ಅನ್ವರ್ಥಕ ಲಕ್ಷ್ಮೀಬಾಯಿ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಮಗ್ನ. ಕೈಮೈಸೋತ ಮೇಲೂ ಕಸೂತಿ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದರು. ಮೊಣಕಾಲು ದಾಟಿ ಬರುವ ಅವರ ಕೂದಲು, ನೀಳ ಮೂಗು, ಆಕರ್ಷಕ ಕಣ್ಣುಗಳು.. ಬಹಳ ಅಪರೂಪದ ಅಂತರಂಗ ಮತ್ತು ವ್ಯಕ್ತಿತ್ವ. ಕೆಲ ತಿಂಗಳುಗಳ ಹಿಂದೆ ನನ್ನ ಗಂಡ ಬಸಲಿಂಗಯ್ಯನವರನ್ನು ಕಳೆದುಕೊಂಡೆ ಈಗ ಈ ಅವ್ವಾವ್ರು.

ಇದನ್ನೂ ಓದಿ : Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ

ಇದನ್ನೂ ಓದಿ : Lakshmibai Enagi death : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

Published On - 2:46 pm, Wed, 4 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ