AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’

Dr. Rajendra Chenni : ‘ರಾಜೂ, ಹೋಗಿ ಊಟ ಮಾಡಿಬಾ’ ಎಂದು ಅವ್ವನ ಮೃದು ಅಪ್ಪಣೆ. ಅವರ ಗುಡಿಸಿಲಲ್ಲಿ ನಡುವೆ ನೆಲದ ಮೇಲಿನ ಪುಟ್ಟ ಮೇಜು... ಅದರ ಮೇಲೊಂದು ಅನ್ನದ ಬೋಗುಣಿ. ಸುತ್ತಲೂ ಕೂಡ ನಾವು. ಸಹನೌಭುನಕ್ತು, ಸಹವೀರ್ಯ....’

Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’
ಡಾ. ರಾಜೇಂದ್ರ ಚೆನ್ನಿ
Follow us
ಶ್ರೀದೇವಿ ಕಳಸದ
|

Updated on:Apr 11, 2022 | 1:59 PM

Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಲೇಖಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಬರೆದ ಕವಿತೆ ನಿಮ್ಮ ಓದಿಗೆ. 

ಅವ್ವ, ಧಾರವಾಡ, ನುಗ್ಗಿಕೆರಿ ಆರನೇತ್ತಾ ಓದಿದ ನನ್ನ ಅವ್ವ. ಐದು ಮಕ್ಕಳ ಚಾಕರಿ ಮಾಡಿ ಮಲಗುವ ಮೊದಲು ದಿನಾ ಕನ್ನಡದ ಒಂದು ಪುಸ್ತಕ ಓದುತ್ತಿದ್ದಳು. ಐವರು ಮಕ್ಕಳ ಗೆಳೆಯರು ಮನೆಗೆ ಬಂದರೆ ಜಾತಿ ಕೇಳದೆ, ಎಲ್ಲರಿಗೂ ತಿಂಡಿ, ಊಟ ಸರಬರಾಜು ತಂಗಿದರೆ ರಾತ್ರಿ, ನಮ್ಮದೇ ಹಾಸಿಗೆ. ‘ಕಡೇಕ ಹುಟ್ಟಿದ ಕಟ್ಟಾಣಿ’ಯಾದ ನನಗೆ ಕೊಟ್ಟಿದ್ದು ಪ್ರೀತಿಯಲ್ಲ; ಹುಚ್ಚು ಪ್ರೀತಿಯ ಹೊಳೆ. ಮನೆಕೆಲಸಕ್ಕೆ ಮನೆ ಹಿಂದಿನ ಮುಸ್ಲಿಮ್ ಕುಟುಂಬ. ಅವರ ಹಬ್ಬದಂದು ಊಟಕ್ಕೆ ಆದರದ ಕರೆ- ‘ರಾಜೂ, ಹೋಗಿ ಊಟ ಮಾಡಿಬಾ’ ಎಂದು ಅವ್ವನ ಮೃದು ಅಪ್ಪಣೆ ಅವರ ಗುಡಿಸಿಲಲ್ಲಿ ನಡುವೆ ನೆಲದ ಮೇಲಿನ ಪುಟ್ಟ ಮೇಜು… ಅದರ ಮೇಲೊಂದು ಅನ್ನದ ಬೋಗುಣಿ. ಸುತ್ತಲೂ ಕೂಡ ನಾವು. ಸಹನೌಭುನಕ್ತು, ಸಹವೀರ್ಯ…. ನನ್ನ ಮೂರು ಅಕ್ಕಂದಿರ ಮಕ್ಕಳು ಕೋಲು ಹೆಗಲ ಮೇಲಿಟ್ಟುಕೊಂಡು ‘ಆಲಿ ಧೂಲಾ ಆಟ’ ಮೊದಲ ಕಲಿತದ್ದು ಕಾಮನಕಟ್ಟಿ ಚಿಗವ್ವನ ಮನೆಯ ಮುಂದೆ ಮುಸ್ಲಿಮ್ ದೇವರುಗಳು ಬಂದರೆ, ಸಂತರ್ಪಣೆ ಇಲ್ಲದೆ ಮುಂದೆ ಸಾಗುತ್ತಿರಲಿಲ್ಲ. ಹೀಗಾಗಿ ಈದಗಾ ಮೈದಾನ, ಬಾಬರಿ ಮಸೀದಿಯ ಮೊದಲು ನನ್ನ ನಿಘಂಟುವಿನಲ್ಲಿ ‘ಕೋಮು ಸೌಹಾರ್ದ’ ಪದವೇ ಇರಲಿಲ್ಲ. ಅವ್ವ ಹೇಳಿದ, ಬದುಕಿನ ಪಾಠ ಮಾತ್ರವಿತ್ತು. ಈಗ ಶಿವಮೊಗ್ಗ, ನುಗ್ಗಿಕೆರಿ…. ನಾನು ದೀರ್ಘ ಲೇಖನಗಳನ್ನು ಬರೆಯುತ್ತೇನೆ. ಮಧ್ಯರಾತ್ರಿಯ ನಂತರ ಮನೆ ಮುಂದೆ ಬಾಣಂತಿ ಅಕ್ಕನಿಗಾಗಿ ತರಿಸಿಟ್ಟಿದ್ದ ಹೊರಸಿನ ಮೇಲೆ ನಾನು ಮಲಗಿದಾಗ ಅವ್ವ ಬಂದು, ಕೌದಿ ಹೊಚ್ಚಿ ಹೋಗುತ್ತಿದ್ದ ನೆನಪಿನಲ್ಲಿ ಅಳುತ್ತೇನೆ. ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ.

*

ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಿಮ್ಮ ಜೈಶ್ರೀರಾಮ ಘೋಷಣೆಯ ಬರಿ ಹರಣ ಹರಣ ಹರಣ

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ 

Published On - 1:57 pm, Mon, 11 April 22

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ