Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಾಖಪಟ್ಟಣಂನ ಶಿಪ್ ಯಾರ್ಡ್​ನಲ್ಲಿ ಘೋರ ದುರಂತ, 11 ಮಂದಿ ಸಾವು!

ಹೈದರಾಬಾದ್: ವಿಶಾಖಪಟ್ಟಣಂ ಅಂದ್ರೆ ಸಾಕು ದುರಂತಗಳ ಸರಮಾಲೆಯೇ ಕಣ್ಮುಂದೆ ಬರುತ್ತೆ. ಅನಿಲ ಸೋರಿಕೆ , ಫ್ಯಾಕ್ಟರಿಗಳಲ್ಲಿ ಸ್ಫೋಟದ ಬಳಿಕ ಇದೀಗ ಕ್ರೇನ್ ದುರಂತವೊಂದು ನಡೆದಿದೆ. ಇದ್ರಲ್ಲಿ ಬರೋಬ್ಬರಿ 11 ಮಂದಿ ಕಾರ್ಮಿಕರು ನೋಡನೋಡತ್ತಲೇ ಎಲ್ಲರ ಮುಂದೆ ಪ್ರಾಣ ಬಿಟ್ಟಿದ್ದಾರೆ. ಎಲ್ಲರೂ ತಮ್ಮ ಪಾಡಿಗೆ ತಾವ್ ಕೆಲ್ಸ ಮಾಡ್ತಿದ್ರು… ಟ್ರಯಲ್ ರನ್ ಸರ್ಕಸ್ ನಡೆಸ್ತಿದ್ರು.. ದೊಡ್ಡ ಯಂತ್ರದೊಂದಿಗೆ ಹೆಣಗಾಡ್ತಿದ್ರು. ಜಸ್ಟ್ ಕಣ್ಮುಚ್ಚಿ ಕಣ್ ಬಿಡೋದ್ರೊಳಗೆ ಯಾರು ಊಹೆ ಮಾಡೋಕೆ ಆಗದಿರೋ ದುರಂತವೊಂದು ನಡೆದೇ ಹೋಯ್ತು. ಟ್ರಯಲ್ ರನ್ ವೇಳೆ […]

ವಿಶಾಖಪಟ್ಟಣಂನ ಶಿಪ್ ಯಾರ್ಡ್​ನಲ್ಲಿ ಘೋರ ದುರಂತ, 11 ಮಂದಿ ಸಾವು!
Follow us
ಆಯೇಷಾ ಬಾನು
|

Updated on: Aug 02, 2020 | 7:12 AM

ಹೈದರಾಬಾದ್: ವಿಶಾಖಪಟ್ಟಣಂ ಅಂದ್ರೆ ಸಾಕು ದುರಂತಗಳ ಸರಮಾಲೆಯೇ ಕಣ್ಮುಂದೆ ಬರುತ್ತೆ. ಅನಿಲ ಸೋರಿಕೆ , ಫ್ಯಾಕ್ಟರಿಗಳಲ್ಲಿ ಸ್ಫೋಟದ ಬಳಿಕ ಇದೀಗ ಕ್ರೇನ್ ದುರಂತವೊಂದು ನಡೆದಿದೆ. ಇದ್ರಲ್ಲಿ ಬರೋಬ್ಬರಿ 11 ಮಂದಿ ಕಾರ್ಮಿಕರು ನೋಡನೋಡತ್ತಲೇ ಎಲ್ಲರ ಮುಂದೆ ಪ್ರಾಣ ಬಿಟ್ಟಿದ್ದಾರೆ.

ಎಲ್ಲರೂ ತಮ್ಮ ಪಾಡಿಗೆ ತಾವ್ ಕೆಲ್ಸ ಮಾಡ್ತಿದ್ರು… ಟ್ರಯಲ್ ರನ್ ಸರ್ಕಸ್ ನಡೆಸ್ತಿದ್ರು.. ದೊಡ್ಡ ಯಂತ್ರದೊಂದಿಗೆ ಹೆಣಗಾಡ್ತಿದ್ರು. ಜಸ್ಟ್ ಕಣ್ಮುಚ್ಚಿ ಕಣ್ ಬಿಡೋದ್ರೊಳಗೆ ಯಾರು ಊಹೆ ಮಾಡೋಕೆ ಆಗದಿರೋ ದುರಂತವೊಂದು ನಡೆದೇ ಹೋಯ್ತು.

ಟ್ರಯಲ್ ರನ್ ವೇಳೆ ಕ್ರೇನ್ ಉರುಳಿ ಬಿದ್ದು 11 ಮಂದಿ ಸಾವು! ಹೌದು, ಈ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ. ಜೀವ ಬಾಯಿಗೆ ಬಂದಂಗೆ ಆಗುತ್ತೆ. ಎಂಥವರನ್ನೂ ಬೆಚ್ಚಿಬೀಳಿಸುತ್ತೆ. ಆದ್ರೆ ಕ್ಷಣಾರ್ಧದಲ್ಲಿ ಶಿಫ್ ಯಾರ್ಡ್​ನಲ್ಲಿ ರಕ್ತದ ಕೋಡಿಯೇ ಹರಿಯಿತು. ಕೆಲ್ಸ ಮಾಡ್ತಿದ್ದ ಕಾರ್ಮಿಕರ ಉಸಿರು ಚೆಲ್ಲಿ ಬಿದ್ದಿದ್ರು.

ಅಂದ್ಹಾಗೇ, ಈ ದುರಂತ ನಡೆದಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಹಿಂದೂಸ್ತಾನ ಶಿಪ್ ಯಾರ್ಡ್​ನಲ್ಲಿ. ನಿನ್ನೆ 40ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್​ನ ಟ್ರಯಲ್ ರನ್ ನಡೆಸ್ತಿದ್ರು. ಈ ವೇಳೆ ಕ್ರೇನ್ ಏಕಾಏಕಿ ಕಾರ್ಮಿಕರ ಮೇಲೆಯೇ ಉರುಳಿ ಬಿದ್ದಿದೆ. ಇದ್ರಿಂದ 11 ಮಂದಿ ಕಾರ್ಮಿಕರು ಸ್ಥಳದಲ್ಲೇ ಜೀವ ಬಿಟ್ಟು ಸಾವಿನ ಮನೆ ಸೇರಿದ್ರು. ಇನ್ನು ವಿಷ್ಯ ತಿಳಿದ ಕೂಡಲೇ ಡಿಸಿ, ಪೊಲೀಸ್ ಅಧಿಕಾರಿಗಳು, ಸಚಿವರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಘಟನೆ ಬಗ್ಗೆ ಮಲ್ಕಾಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನು ಶಿಪ್ ಯಾರ್ಡ್ ಡೈರೆಕ್ಟರ್ ನೇತೃತ್ವದಲ್ಲಿ ಒಂದು ಹಾಗೂ ಆಂಧ್ರ ಯೂನಿವರ್ಸಿಟಿ ಇಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲೊಂದು ಕಮಿಟಿ ರಚನೆ ಮಾಡಲಾಗಿದೆ. ಒಂದು ವಾರದೊಳಗೆ ಕಮಿಟಿ ವರದಿ ಒಪ್ಪಿಸಲಿದೆ.

ಒಟ್ನಲ್ಲಿ ಮೇಲ್ನೋಟಕ್ಕೆ ಸೂಕ್ತ ಮುಂಜಾಗ್ರತೆ ಇಲ್ಲದಿರೋದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಆದ್ರೆ ತನಿಖೆಯ ಬಳಿಕವಷ್ಟೇ ಅಸಲಿ ಕಾರಣ ಬೆಳಕಿಗೆ ಬರಲಿದೆ.

ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ