ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹೇಳಿಕೆ ಖಂಡಿಸಿ ಮಾಜಿ ನ್ಯಾಯಾಧೀಶರು, ಅಧಿಕಾರಿಗಳಿಂದ ಬಹಿರಂಗ ಹೇಳಿಕೆ

ಇಬ್ಬರು ನ್ಯಾಯಮೂರ್ತಿಗಳು ನೂಪುರ್ ಶರ್ಮಾ ಪ್ರಕರಣದ ಬಗ್ಗೆ ನೀಡಿರುವ ಹೇಳಿಕೆ ದುರದೃಷ್ಟಕರ. ಅವರ ಹೇಳಿಕೆಗಳನ್ನು ಮಾಧ್ಯಮಗಳು ಭಾರೀ ಸುದ್ದಿ ಮಾಡಿದ್ದು, ಅವರ ಅವಲೋಕನಗಳು ನ್ಯಾಯಾಂಗದ ರೀತಿಯೊಂದಿಗೆ ಸರಿ ಹೊಂದುತ್ತಿಲ್ಲ

ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹೇಳಿಕೆ ಖಂಡಿಸಿ ಮಾಜಿ ನ್ಯಾಯಾಧೀಶರು, ಅಧಿಕಾರಿಗಳಿಂದ ಬಹಿರಂಗ ಹೇಳಿಕೆ
ನೂಪುರ್ ಶರ್ಮ
Image Credit source: Newsroom Post
Updated By: ರಶ್ಮಿ ಕಲ್ಲಕಟ್ಟ

Updated on: Jul 05, 2022 | 1:50 PM

ದೆಹಲಿ: ನೂಪುರ್ ಶರ್ಮಾ (Nupur Sharma) ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ (Justice Surya Kant)  ಮತ್ತು ಪರ್ದಿವಾಲಾ (Justice Pardiwala) ಅವರ ಹೇಳಿಕೆ ಬಗ್ಗೆ 15 ನಿವೃತ್ತ ನ್ಯಾಯಮೂರ್ತಿಗಳು , 77 ಅಧಿಕಾರಿಗಳು ಮತ್ತು 25 ನಿವೃತ್ತ ಸಶಸ್ತ್ರ ಸೇನಾ ಅಧಿಕಾರಿಗಳು ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಪ್ರೀಂಕೋರ್ಟ್ ನೂಪುರ್ ಶರ್ಮಾ ವಿವಾದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮಾ ಒಬ್ಬರೇ ಕಾರಣ. ಅವರು ದೇಶದ ಕ್ಷಮೆ ಕೇಳಬೇಕು ಎಂದಿದ್ದರು.

ಬಹಿರಂಗ ಹೇಳಿಕೆಯಲ್ಲಿ ಏನಿದೆ?

ಇದನ್ನೂ ಓದಿ
ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷ್ಮಣ ರೇಖೆ ದಾಟುವುದು ಅಪಾಯಕಾರಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ
ನೂಪುರ್ ಶರ್ಮಾ ವಿರುದ್ಧದ ಪ್ರತಿಕೂಲ ಅಭಿಪ್ರಾಯವನ್ನು ಹಿಂಪಡೆಯುವಂತೆ ಸುಪ್ರೀಂಕೋರ್ಟ್​ಗೆ ಮನವಿ
ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ನೂಪುರ್ ಶರ್ಮ ಇಡೀ ದೇಶದ ಕ್ಷಮೆ ಕೇಳಬೇಕು ಎಂದ ಸುಪ್ರೀಂ ಕೋರ್ಟ್​

ಜವಾಬ್ದಾರಿಯುತ ನಾಗರಿಕರಾಗಿ ನಾವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸುಸ್ಥಿತಿಯಲ್ಲಿದ್ದು ಎಲ್ಲ ಸಂಸ್ಥೆಗಳು ಸಂವಿಧಾನದ ಪ್ರಕಾರ ಕಾರ್ಯವೆಸಗುತ್ತವೆ ಎಂದು ನಾವು ಭಾವಿಸುತ್ತೇನೆ. ಸುಪ್ರೀಂಕೋರ್ಟ್​​ನ ಇಬ್ಬರು ನ್ಯಾಯಾಧೀಶರ ಇತ್ತೀಚಿಗಿನ ಹೇಳಿಕೆಗಳು ಲಕ್ಷ್ಮಣ ರೇಖೆ ದಾಟಿದ್ದು, ನಾವು  ಈ ಬಹಿರಂಗ ಹೇಳಿಕೆ ನೀಡುವಂತೆ ಮಾಡಿದೆ. ಇಬ್ಬರು ನ್ಯಾಯಮೂರ್ತಿಗಳು ನೂಪುರ್ ಶರ್ಮಾ ಪ್ರಕರಣದ ಬಗ್ಗೆ ನೀಡಿರುವ ಹೇಳಿಕೆ ದುರದೃಷ್ಟಕರ. ಅವರ ಹೇಳಿಕೆಗಳನ್ನು ಮಾಧ್ಯಮಗಳು ಭಾರೀ ಸುದ್ದಿ ಮಾಡಿದ್ದು, ಅವರ ಅವಲೋಕನಗಳು ನ್ಯಾಯಾಂಗದ ರೀತಿಯೊಂದಿಗೆ ಸರಿ ಹೊಂದುತ್ತಿಲ್ಲ. ನ್ಯಾಯಾಂಗ ಆದೇಶದ ಭಾಗವಾಗಿರದ ಈ ಅವಲೋಕನಗಳನ್ನು ನ್ಯಾಯಾಂಗ ಔಚಿತ್ಯ ಮತ್ತು ನ್ಯಾಯಸಮ್ಮತತೆ ಎಂದು ಹೇಳಲಾಗುವುದಿಲ್ಲ. ಇಂತಹ ಅತಿರೇಕದ ಉಲ್ಲಂಘನೆಗಳು ನ್ಯಾಯಾಂಗದ ಇತಿಹಾಸದಲ್ಲಿ ಸಮಾನಾಂತರವಾಗಿಲ್ಲ ಎಂದಿವೆ.


ನೂಪುರ್ ಶರ್ಮಾ ಅವರು ನ್ಯಾಯಾಂಗದ ಮುಂದೆ ಬಂದಿದ್ದಾರೆ. ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯದೊಂದಿಗೆ ನ್ಯಾಯಶಾಸ್ತ್ರದ ಸಂಬಂಧವಿಲ್ಲದ ಅವಲೋಕನಗಳು ಅಭೂತಪೂರ್ವ ರೀತಿಯಲ್ಲಿ ನ್ಯಾಯ ದಾನದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿವೆ. ಆಕೆಗೆ ನ್ಯಾಯಾಂಗದ ಪ್ರವೇಶವನ್ನು ನಿರಾಕರಿಸಲಾಯಿತು. ಈ ಪ್ರಕ್ರಿಯೆಯಲ್ಲಿ, ಭಾರತದ ಸಂವಿಧಾನದ ಪೀಠಿಕೆ, ಆತ್ಮ ಮತ್ತು ಸಾರದ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ನೂಪುರ್ ಶರ್ಮಾ ಅವರು ಒಂದು ಪ್ರಕ್ರಿಯೆಯಲ್ಲಿ ತೀವ್ರವಾಗಿ ತಪ್ಪಿತಸ್ಥರೆಂದು ನಿರ್ಣಯಿಸಲಾಗುತ್ತದೆ, ಅಲ್ಲಿ ಇದು ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಆಕೆ ಏಕಾಂಗಿಯಾಗಿ ಜವಾಬ್ದಾರಳು ಎಂಬುದಕ್ಕೆ ಯಾವುದೇ ತರ್ಕವಿಲ್ಲ. ಅಂದಹಾಗೆ ಈ ಅವಲೋಕನಗಳು ಸಮರ್ಥನೀಯವಲ್ಲಎಂದು ಬಹಿರಂಗ ಹೇಳಿಕೆಯಲ್ಲಿ  ಹೇಳಲಾಗಿದೆ.

Published On - 1:12 pm, Tue, 5 July 22