Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾನೀಯ-ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ ವರದಿ

Gutka stains on train: ರೈಲ್ವೆ ಪ್ಲಾಟ್‌ಫಾರ್ಮ್​​ಗಳಲ್ಲಿ ಹಾಗೂ ರೈಲಿನ ಒಳಗೆ ಕೂತು ಕೆಲವರು ಉಗುಳುತ್ತಾರೆ. ಇಂತಹ ಕಲೆಗಳನ್ನು ತೆಗೆಯಲು ರೈಲ್ವೆ ಇಲಾಖೆ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಗ್ಯಾಲನ್ ಮತ್ತು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಪಾನೀಯ-ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ ವರದಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 21, 2023 | 7:07 PM

ಭಾರತದಲ್ಲಿ ಗುಟ್ಕಾ (Gutka) ತಿನ್ನುವವರ ಸಂಖ್ಯೆ ಹೆಚ್ಚು. ತಿಂದರೆ ಪರವಾಗಿಲ್ಲ ಆದರೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಉಗುಳಬಾರದು. ಮೊದಲಾಗಿ ಗುಟ್ಕಾ ತಿನ್ನುವುದೇ ದೊಡ್ಡ ತಪ್ಪು. ಅದರೂ ಕೆಲವರಿಗೆ ಅದು ಅಭ್ಯಾಸವಾಗಿರುತ್ತದೆ. ಗುಟ್ಕಾ ತಿಂದು ಹೆಚ್ಚಾಗಿ ಎಲ್ಲೆಂದರಲ್ಲಿ ಉಗಿಯುವುದು ಕಂಡು ಬರುವುದು ಒಂದು ಬಸ್​​​ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ. ಈ ರೈಲು ನಿಲ್ದಾಣಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡು ಬರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್​​ಗಳಲ್ಲಿ ಹಾಗೂ ರೈಲಿನ ಒಳಗೆ ಕೂತು ಕೆಲವರು ಉಗುಳುತ್ತಾರೆ. ಇಂತಹ ಕಲೆಗಳನ್ನು ತೆಗೆಯಲು ರೈಲ್ವೆ ಇಲಾಖೆ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಗ್ಯಾಲನ್ ಮತ್ತು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಇಂತಹ ಅಜ್ಞಾನಿ ಜನರಿಂದ ರೈಲ್ವೆ ಇಲಾಖೆಗೆ 1200 ಕೋಟಿ ರೂ. ಹೊರೆ ಬೀಳುತ್ತಾದೆ. ರೈಲು ನಿಲ್ದಾಣವಾಗಲಿ, ರೈಲಿನಾಗಲಿ ಗುಟ್ಕಾ-ಪಾನ್ ಕಲೆಗಳು ರೈಲಿನ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಪರಿಸರವನ್ನು ಕೊಳಕು ಮಾಡುತ್ತವೆ. ಇದನ್ನು ನಿರ್ವಹಿಸಲು, ರೈಲ್ವೆ ಇಲಾಖೆ ಈ ಬಗ್ಗೆ ಹೆಚ್ಚು ಗಮನ ನೀಡುತ್ತದೆ ಹಾಗೂ ಅದಕ್ಕಾಗಿ ರೈಲ್ವೇ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತದೆ.

ಇದನ್ನೂ ಓದಿ:ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

ಭಾರತದ ಅಂಗಡಿಗಳಲ್ಲಿ ಹಾಗೂ ಸಾವರ್ಜನಿಕ ಪ್ರದೇಶಗಳಲ್ಲಿ ಗುಟ್ಕಾ -ಪಾನ್​​ ಅಂಗಡಿಗಳನ್ನು ತೆಗೆಯುವುದು ಕಾನೂನು ಪ್ರಕಾರ ಅಪರಾಧ, ಆದರೆ ಇಂತಹ ವಿಚಾರಗಳ ಮೇಲೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನು ಗುಟ್ಕಾ -ಪಾನ್ ಪ್ಯಾಕ್​​ಗಳಲ್ಲೂ ಕೂಡ ಸೂಚನೆ ನೀಡಲಾಗಿದೆ. ಪ್ರತಿ ಸಾರ್ವಜನಿಕ ಪ್ರದೇಶಗಳಲ್ಲಿ ಗುಟ್ಕಾ -ಪಾನ್​ಗಳನ್ನು ಉಗುಳಬಾರದು ಎಂದು ಸೂಚನ ಫಲಕಗಳನ್ನು ಕೂಡ ಹಾಕಲಾಗಿದೆ. ಅದರೂ ಜನ ಈ ಬಗ್ಗೆ ಗಮನ ನೀಡದಿರುವುದು ದುರದೃಷ್ಟಕರ. ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಇದಕ್ಕೆ ಒಂದು ಉದಾಹರಣೆ ಸಿಂಗಾಪುರ, ಅಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಗುಟ್ಕಾ -ಪಾನ್ ಉಗುಳುವವರಿಗೆ 80 ಸಾವಿರ ರೂ. ದಂಡ ಹಾಕಲಾಗುತ್ತದೆ. ಇಂತಹ ಕ್ರಮ ಭಾರತದಲ್ಲೂ ಬರಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!