AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ‘ವಿಮಲ್ ಪಾನ್ ಮಸಾಲ’ದ ರಾಯಭಾರಿ ಆದ ಬಳಿಕ ಅವರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಕ್ಷಮೆ ಕೇಳಿದ್ದ ಅವರು ರಾಯಭಾರತ್ವ ತೊರೆದಿದ್ದರು. ಜೊತೆಗೆ ಒಪ್ಪಂದ ಮುಗಿಯುವವರೆಗೆ ಶೂಟ್ ಮಾಡಿಕೊಂಡಿದ್ದ ಜಾಹೀರಾತನ್ನು ಪ್ರಸಾರ ಆಗಲಿದೆ ಎಂದು ಹೇಳಿದ್ದರು.

ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
ರಾಜೇಶ್ ದುಗ್ಗುಮನೆ
|

Updated on: Oct 10, 2023 | 7:07 AM

Share

ನಟ ಅಕ್ಷಯ್ ಕುಮಾರ್ (Akshay Kumar) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಚಿತ್ರರಂಗದಲ್ಲಿ ಅವರಿಗೆ ಹೇಳಿಕೊಳ್ಳುವಂಥ ಗೆಲುವು ಸಿಗುತ್ತಿಲ್ಲ. ಸಾಲು ಸಾಲು ಸಿನಿಮಾಗಳು ರಿಲೀಸ್ ಆದರೂ ಅಲ್ಲೊಂದು ಇಲ್ಲೊಂದು ಚಿತ್ರಗಳು ಹಿಟ್ ಆಗುತ್ತವೆ. ಈಗ ಅಕ್ಷಯ್ ಕುಮಾರ್ ಅವರ ಹೊಸ ವಿಮಲ್ ಜಾಹೀರಾತು ಪ್ರಸಾರ ಕಂಡಿತ್ತು. ಅಕ್ಷಯ್ ಹೊಸ ಜಾಹೀರಾತಿನಲ್ಲಿ ಭಾಗಿ ಆಗಿದ್ದಾರೆ ಎಂದೇ ಎಲ್ಲ ಕಡೆಗಳಲ್ಲೂ ಸುದ್ದಿ ಆಯಿತು. ಈ ಕುರಿತು ಅಕ್ಷಯ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರು ‘ವಿಮಲ್ ಪಾನ್ ಮಸಾಲ’ದ ರಾಯಭಾರಿ ಆದ ಬಳಿಕ ಅವರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಕ್ಷಮೆ ಕೇಳಿದ್ದ ಅವರು ರಾಯಭಾರತ್ವ ತೊರೆದಿದ್ದರು. ಜೊತೆಗೆ ಒಪ್ಪಂದ ಮುಗಿಯುವವರೆಗೆ ಶೂಟ್ ಮಾಡಿಕೊಂಡಿದ್ದ ಜಾಹೀರಾತನ್ನು ಪ್ರಸಾರ ಆಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ವಿಮಲ್​ನ ಹೊಸ ಜಾಹೀರಾತು ಪ್ರಸಾರ ಕಂಡಿತ್ತು. ಇದರಲ್ಲಿ ಅಕ್ಷಯ್ ಕೂಡ ಕಾಣಿಸಿಕೊಂಡಿದ್ದರು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ಈ ಜಾಹೀರಾತು ಶೂಟ್ ಆಗಿದ್ದು 2021ರ ಅಕ್ಟೋಬರ್ 13ರಂದು. ನನಗೂ ಆ ಬ್ರ್ಯಾಂಡ್​ಗೂ ಯಾವುದೇ ಸಂಬಂಧ ಇಲ್ಲ. ಈಗಾಗಲೇ ಶೂಟ್ ಮಾಡಿಕೊಂಡಿರುವ ಜಾಹೀರಾತನ್ನು ಮುಂದಿನ ತಿಂಗಳ ಕೊನೆಯವರೆಗೆ ಪ್ರಸಾರ ಮಾಡುವ ಹಕ್ಕು ಅವರಿಗೆ ಇದೆ’ ಎಂದಿದ್ದಾರೆ. ಈ ಮೂಲಕ ಇದು ಹಳೆಯ ಜಾಹೀರಾತು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್

ವೈರಲ್ ಜಾಹೀರಾತನ್ನು ನೋಡಿದ ಅನೇಕರು ಇದು ಹಳೆಯ ಜಾಹೀರಾತಿರಬಹುದು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಶಾರುಖ್ ಖಾನ್ ಅವರು ಉದ್ದನೆಯ ಕೂದಲು ಬಿಟ್ಟು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಇಷ್ಟು ಉದ್ದನೆಯ ಕೂದಲು ಬಿಟ್ಟುಕೊಂಡಿದ್ದು ‘ಪಠಾಣ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ. ಹೀಗಾಗಿ, ಇದು ಅದೇ ಸಂದರ್ಭದಲ್ಲಿ ಚಿತ್ರೀಕರಿಸಿದ ಜಾಹೀರಾತು ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಡಿ.ಕೆ ಶಿವಕುಮಾರ್​ಗೆ ಒಳ್ಳೆಯದಾಗಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ
ಡಿ.ಕೆ ಶಿವಕುಮಾರ್​ಗೆ ಒಳ್ಳೆಯದಾಗಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ
CLP ಸಭೆ ಮುನ್ನವೇ ರಾಜ್ಯಪಾಲರ ಭೇಟಿಯಾಗಿದ್ದೇಕೆ ಡಿಕೆಶಿ?: ಕಾರಣ ಇಲ್ಲಿದೆ
CLP ಸಭೆ ಮುನ್ನವೇ ರಾಜ್ಯಪಾಲರ ಭೇಟಿಯಾಗಿದ್ದೇಕೆ ಡಿಕೆಶಿ?: ಕಾರಣ ಇಲ್ಲಿದೆ
ಮಳೆ ಅಬ್ಬರಕ್ಕೆ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!
ಮಳೆ ಅಬ್ಬರಕ್ಕೆ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!
ಈ ವ್ಯಕ್ತಿಯ ಡ್ಯಾನ್ಸ್​ಗೆ ಮನಸೋತ ಆನೆ ಮಾಡಿದ್ದೇನು ನೋಡಿ
ಈ ವ್ಯಕ್ತಿಯ ಡ್ಯಾನ್ಸ್​ಗೆ ಮನಸೋತ ಆನೆ ಮಾಡಿದ್ದೇನು ನೋಡಿ
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ!
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ!
ಅಂಕೋಲಾ-ಯಲ್ಲಾಪುರ ಹೈವೇಲಿ ಬಸ್ ಪಲ್ಟಿ, ಓರ್ವ ಸಾವು: 21 ಮಂದಿಗೆ ಗಾಯ
ಅಂಕೋಲಾ-ಯಲ್ಲಾಪುರ ಹೈವೇಲಿ ಬಸ್ ಪಲ್ಟಿ, ಓರ್ವ ಸಾವು: 21 ಮಂದಿಗೆ ಗಾಯ
ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಕ್ಷೌರ ಮಾಡದೆ ಹರಕೆ ಹೊತ್ತಿದ್ದ ಅಭಿಮಾನಿ
ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಕ್ಷೌರ ಮಾಡದೆ ಹರಕೆ ಹೊತ್ತಿದ್ದ ಅಭಿಮಾನಿ
ತನ್ನ ಜೀವದ ಹಂಗು ತೊರೆದು ಪಕ್ಕದ ಮನೆಯ ಜಗಳ ರೆಕಾರ್ಡ್​ ಮಾಡಿದ ವ್ಯಕ್ತಿ
ತನ್ನ ಜೀವದ ಹಂಗು ತೊರೆದು ಪಕ್ಕದ ಮನೆಯ ಜಗಳ ರೆಕಾರ್ಡ್​ ಮಾಡಿದ ವ್ಯಕ್ತಿ
ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ
ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ
ಬೈಕ್​ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಬೈಕ್​ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು