AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ; ಇನ್ನೊಂದು ವರ್ಷದಲ್ಲಿ ಸಹಜಸ್ಥಿತಿಗೆ ಮರಳುವ ಭರವಸೆ

ಮಗುವಿನಲ್ಲಿ ಬೇರೆ ಕೆಲವು ಅಸಹಜತೆಗಳೂ ಇದ್ದವು. ಅದನ್ನೆಲ್ಲವನ್ನೂ ಮೀರಿ ಸರ್ಜರಿ ಮಾಡಲಾಗಿದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಬಾಲಕಿಗೆ ವಿಶೇಷವಾಗಿ, ಕಟ್ಟುನಿಟ್ಟಾಗಿ ಡಯಟ್​ ಮಾಡಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ; ಇನ್ನೊಂದು ವರ್ಷದಲ್ಲಿ ಸಹಜಸ್ಥಿತಿಗೆ ಮರಳುವ ಭರವಸೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Aug 03, 2021 | 6:25 PM

Share

ದೆಹಲಿ: ಸುಮಾರು 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ದೆಹಲಿ (Delhi)ಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಬ್ಯಾರಿಯಾಟ್ರಿಕ್​ ಸರ್ಜರಿ (Bariatric Surgery)  ಮಾಡಲಾಗಿದೆ. ಇದು ತೀರ ಅಸಹಜ ಪ್ರಕರಣವಾಗಿದೆ. ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣ ವೀಲ್​ಚೇರ್​​ ಬಿಟ್ಟು ಕೆಳಗೆ ಇಳಿಯುತ್ತಿರಲಿಲ್ಲ. ಆಕೆಗೀಗ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯ ಭಾಗವನ್ನು ತೆಗೆಯಲಾಗಿದೆ ಮತ್ತು ಕಳೆದ ಒಂದು ದಶಕದಲ್ಲಿ ಬ್ಯಾರಿಯಾಟ್ರಿಕ್​ ಸರ್ಜರಿಗೆ ಒಳಗಾದ ದೇಶದ ಅತ್ಯಂತ ಕಿರಿಯ ರೋಗಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಅಂದಹಾಗೆ ಈ ಸರ್ಜರಿ ಮಾಡಿದ್ದು, ದೆಹಲಿಯ ಮ್ಯಾಕ್ಸ್ ಸೂಪರ್​ಸ್ಪೆಶಾಲಿಟಿ ಆಸ್ಪತ್ರೆ.

ತೂಕ ಇಳಿಸಲು ಈ ಬ್ಯಾರಿಯಾಟ್ರಿಕ್​ ಸರ್ಜರಿ ಮಾಡಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆ ಮಕ್ಕಳಲ್ಲಿ ತೀರ ಕಡಿಮೆ. ಈ ಸರ್ಜರಿ ಮೂಲಕ ಹಸಿವು ಕಡಿಮೆ ಆಗುವಂತೆ ಮಾಡಲಾಗುತ್ತದೆ. ಇದರಿಂದ ತೂಕ ನಷ್ಟ ಆಗುವ ಜತೆ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ. ಸರ್ಜರಿಯ ಮೂಲಕ ಮಾಡುವ ಬದಲಾವಣೆಗಳಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣವೂ ಕಡಿಮೆ ಆಗುತ್ತದೆ.

ಬಾಲಕಿ ಹುಟ್ಟುವಾಗ ತೀರ ಸಾಮಾನ್ಯವಾದ ತೂಕ ಹೊಂದಿದ್ದಳು. ಅಂದರೆ ಜನಿಸುವಾಗ 2.5 ಕೆಜಿ ತೂಕವಿದ್ದಳು. ಆದರೆ ಕೆಲವೇ ದಿನಗಳಲ್ಲಿ ವಿಪರೀತ ಎನ್ನುವಷ್ಟು ತೂಕ ಜಾಸ್ತಿಯಾಯಿತು. ಆರು ತಿಂಗಳ ಹೊತ್ತಿಗೆ 14 ಕೆಜಿಯಾಗಿದ್ದಳು. ಬರುಬರುತ್ತ ತೂಕ ಅದೆಷ್ಟು ಜಾಸ್ತಿಯಾಯಿತೆಂದರೆ 2 ವರ್ಷ ತುಂಬುವ ಹೊತ್ತಿಗೆ 45 ಕೆಜಿ ಆಗಿದ್ದಳು. ಆದರೆ ಆಕೆಯ ಸಹೋದರನಿಗೆ 8ವರ್ಷ. ಆತ ತನ್ನ ವಯಸ್ಸಿಗೆ ತಕ್ಕಂತೆ ಬೆಳೆಯುತ್ತಿದ್ದೇನೆ. ತೂಕವೂ ಸಹಜವಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮನ್​ಪ್ರೀತ್​ ಸೇಥಿ ಹೇಳಿದ್ದಾರೆ.

ಮಗುವಿನಲ್ಲಿ ಬೇರೆ ಕೆಲವು ಅಸಹಜತೆಗಳೂ ಇದ್ದವು. ಅದನ್ನೆಲ್ಲವನ್ನೂ ಮೀರಿ ಸರ್ಜರಿ ಮಾಡಲಾಗಿದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಬಾಲಕಿಗೆ ವಿಶೇಷವಾಗಿ, ಕಟ್ಟುನಿಟ್ಟಾಗಿ ಡಯಟ್​ ಮಾಡಿಸಬೇಕು. ಅವಳಿಗೆ ನೀಡಲಾಗುವ ಪೋಷಕಾಂಶಗಳ ಅಳತೆಯ ಬಗ್ಗೆ ನಿಗಾ ಇರಬೇಕು. ಮುಂದಿನ ವರ್ಷದ ಹೊತ್ತಿಗೆ ಅವಳ ತೂಕ ಕಡಿಮೆಯಾಗುತ್ತದೆ ಮತ್ತು ಅಲ್ಲಿಂದ ಸಹಜವಾಗಿ ಬೆಳೆಯುತ್ತಾಳೆಂದು ನಿರೀಕ್ಷೆ ಇದೆ. ಆದರೆ ವೈದ್ಯಕೀಯ ತಂಡ ಅವಳ ಆರೋಗ್ಯದ ಬಗ್ಗೆ ಗಮನ ಇಟ್ಟೇ ಇಡುತ್ತದೆ. ಕಾಲಕಾಲಕ್ಕೆ ತಪಾಸಣೆ ಆಗಬೇಕಾಗುತ್ತದೆ. ದೇಹದಲ್ಲಿ ಶಕ್ತಿಯೂ ಬರಬೇಕಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ-ಮಂಗಳೂರು-ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಬಳಿ ಕುಸಿತ

Published On - 6:24 pm, Tue, 3 August 21

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ