AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ
ರಫೇಲ್​ ಯುದ್ಧ ವಿಮಾನ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Jul 22, 2021 | 8:30 AM

Share

ಮತ್ತೆ ಮೂರು ರಫೇಲ್​ ಯುದ್ಧವಿಮಾನ (Rafale Jets)ಗಳು ಬುಧವಾರ ಭಾರತ ಸೇನೆಯನ್ನು ಸೇರ್ಪಡೆಗೊಂಡಿವೆ. ಫ್ರಾನ್ಸ್​ನಿಂದ ಹೊರಟಿದ್ದ ಈ ಜೆಟ್​​ಗಳು ಮಧ್ಯೆ ಎಲ್ಲಿಯೂ ನಿಲುಗಡೆ ಪಡೆಯದೆ, ನೇರವಾಗಿ ಭಾರತೀಯ ವಾಯುಸೇನೆ (Indian Air Force) ತಲುಪಿವೆ. ಇನ್ನು ರಫೇಲ್​ ಜೆಟ್​​ಗಳಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ (UAE)ನ ವಾಯುಪಡೆ ಮಾರ್ಗಮಧ್ಯೆ, ಹಾರಾಟದ ಸ್ಥಿತಿಯಲ್ಲಿ ಇದ್ದಾಗಲೇ ಇಂಧನ ತುಂಬಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್​ ಮಾಡಿ ತಿಳಿಸಿದೆ. ಹಾಗೇ, ಮಾರ್ಗ ಮಧ್ಯೆ ಇಂಧನ ತುಂಬಿಕೊಟ್ಟ UAE ವಾಯುಪಡೆಗೆ ಧನ್ಯವಾದವನ್ನೂ ಹೇಳಿದೆ.

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ. ಹಾಗೇ, ಮೊದಲನೇ ರಫೇಲ್​ ಸ್ಕ್ವಾಡ್ರನ್​ ಈಗಾಗಲೇ ಅಂಬಾಲಾದ ವಾಯುನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಪೂರ್ವ ಲಡಾಖ್​ನ ಚೀನಾ ಗಡಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಸ್ತು ತಿರುಗಲು ಶುರು ಮಾಡಿವೆ. ಹಶಿಮಾರಾ ವಾಯುನೆಲೆಯಿಂದ ಹಲವು ಚೀನಾ ವಾಯುನೆಲೆಗಳು ಸಮೀಪದಲ್ಲೇ ಇದ್ದು, ಇದೀಗ ರಫೇಲ್​ ಜೆಟ್​ನ ಎರಡನೇ ಸ್ಕ್ವಾಡ್ರನ್​​ನಿಂದ ಸಹಜವಾಗಿಯೇ ಇಲ್ಲಿನ ವಾಯುಪಡೆಗೆ ಉತ್ತೇಜನ ದೊರೆಯಲಿದೆ.

ಫ್ರಾನ್ಸ್​ನೊಂದಿಗೆ ಭಾರತ 2016ರಲ್ಲಿ ಮಾಡಿಕೊಂಡ ಅನ್ವಯ ಇಲ್ಲಿಗೆ ಒಟ್ಟು 36 ರಫೇಲ್​ ಜೆಟ್​ಗಳು ಬರಲಿವೆ. ಎರಡು ಇಂಜಿನ್​​ಗಳ ರಫೇಲ್​ ಜೆಟ್​​ಗಳು ನೆಲ ಮತ್ತು ಸಮುದ್ರ ದಾಳಿ, ನ್ಯೂಕ್ಲಿಯರ್​ ಅಟ್ಯಾಕ್​ನಂತಹ ಅಪಾಯಕಾರಿ ದಾಳಿ ವಿರುದ್ಧವೂ ನಿಲ್ಲಬಹುದಾದ ಸಾಮರ್ಥ್ಯಹೊಂದಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ, ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ

3 more Rafale jets arrived to India from France

Published On - 8:30 am, Thu, 22 July 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ