AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ
ರಫೇಲ್​ ಯುದ್ಧ ವಿಮಾನ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Jul 22, 2021 | 8:30 AM

Share

ಮತ್ತೆ ಮೂರು ರಫೇಲ್​ ಯುದ್ಧವಿಮಾನ (Rafale Jets)ಗಳು ಬುಧವಾರ ಭಾರತ ಸೇನೆಯನ್ನು ಸೇರ್ಪಡೆಗೊಂಡಿವೆ. ಫ್ರಾನ್ಸ್​ನಿಂದ ಹೊರಟಿದ್ದ ಈ ಜೆಟ್​​ಗಳು ಮಧ್ಯೆ ಎಲ್ಲಿಯೂ ನಿಲುಗಡೆ ಪಡೆಯದೆ, ನೇರವಾಗಿ ಭಾರತೀಯ ವಾಯುಸೇನೆ (Indian Air Force) ತಲುಪಿವೆ. ಇನ್ನು ರಫೇಲ್​ ಜೆಟ್​​ಗಳಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ (UAE)ನ ವಾಯುಪಡೆ ಮಾರ್ಗಮಧ್ಯೆ, ಹಾರಾಟದ ಸ್ಥಿತಿಯಲ್ಲಿ ಇದ್ದಾಗಲೇ ಇಂಧನ ತುಂಬಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್​ ಮಾಡಿ ತಿಳಿಸಿದೆ. ಹಾಗೇ, ಮಾರ್ಗ ಮಧ್ಯೆ ಇಂಧನ ತುಂಬಿಕೊಟ್ಟ UAE ವಾಯುಪಡೆಗೆ ಧನ್ಯವಾದವನ್ನೂ ಹೇಳಿದೆ.

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ. ಹಾಗೇ, ಮೊದಲನೇ ರಫೇಲ್​ ಸ್ಕ್ವಾಡ್ರನ್​ ಈಗಾಗಲೇ ಅಂಬಾಲಾದ ವಾಯುನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಪೂರ್ವ ಲಡಾಖ್​ನ ಚೀನಾ ಗಡಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಸ್ತು ತಿರುಗಲು ಶುರು ಮಾಡಿವೆ. ಹಶಿಮಾರಾ ವಾಯುನೆಲೆಯಿಂದ ಹಲವು ಚೀನಾ ವಾಯುನೆಲೆಗಳು ಸಮೀಪದಲ್ಲೇ ಇದ್ದು, ಇದೀಗ ರಫೇಲ್​ ಜೆಟ್​ನ ಎರಡನೇ ಸ್ಕ್ವಾಡ್ರನ್​​ನಿಂದ ಸಹಜವಾಗಿಯೇ ಇಲ್ಲಿನ ವಾಯುಪಡೆಗೆ ಉತ್ತೇಜನ ದೊರೆಯಲಿದೆ.

ಫ್ರಾನ್ಸ್​ನೊಂದಿಗೆ ಭಾರತ 2016ರಲ್ಲಿ ಮಾಡಿಕೊಂಡ ಅನ್ವಯ ಇಲ್ಲಿಗೆ ಒಟ್ಟು 36 ರಫೇಲ್​ ಜೆಟ್​ಗಳು ಬರಲಿವೆ. ಎರಡು ಇಂಜಿನ್​​ಗಳ ರಫೇಲ್​ ಜೆಟ್​​ಗಳು ನೆಲ ಮತ್ತು ಸಮುದ್ರ ದಾಳಿ, ನ್ಯೂಕ್ಲಿಯರ್​ ಅಟ್ಯಾಕ್​ನಂತಹ ಅಪಾಯಕಾರಿ ದಾಳಿ ವಿರುದ್ಧವೂ ನಿಲ್ಲಬಹುದಾದ ಸಾಮರ್ಥ್ಯಹೊಂದಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ, ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ

3 more Rafale jets arrived to India from France

Published On - 8:30 am, Thu, 22 July 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ