AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ
ರಫೇಲ್​ ಯುದ್ಧ ವಿಮಾನ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Jul 22, 2021 | 8:30 AM

Share

ಮತ್ತೆ ಮೂರು ರಫೇಲ್​ ಯುದ್ಧವಿಮಾನ (Rafale Jets)ಗಳು ಬುಧವಾರ ಭಾರತ ಸೇನೆಯನ್ನು ಸೇರ್ಪಡೆಗೊಂಡಿವೆ. ಫ್ರಾನ್ಸ್​ನಿಂದ ಹೊರಟಿದ್ದ ಈ ಜೆಟ್​​ಗಳು ಮಧ್ಯೆ ಎಲ್ಲಿಯೂ ನಿಲುಗಡೆ ಪಡೆಯದೆ, ನೇರವಾಗಿ ಭಾರತೀಯ ವಾಯುಸೇನೆ (Indian Air Force) ತಲುಪಿವೆ. ಇನ್ನು ರಫೇಲ್​ ಜೆಟ್​​ಗಳಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ (UAE)ನ ವಾಯುಪಡೆ ಮಾರ್ಗಮಧ್ಯೆ, ಹಾರಾಟದ ಸ್ಥಿತಿಯಲ್ಲಿ ಇದ್ದಾಗಲೇ ಇಂಧನ ತುಂಬಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್​ ಮಾಡಿ ತಿಳಿಸಿದೆ. ಹಾಗೇ, ಮಾರ್ಗ ಮಧ್ಯೆ ಇಂಧನ ತುಂಬಿಕೊಟ್ಟ UAE ವಾಯುಪಡೆಗೆ ಧನ್ಯವಾದವನ್ನೂ ಹೇಳಿದೆ.

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ. ಹಾಗೇ, ಮೊದಲನೇ ರಫೇಲ್​ ಸ್ಕ್ವಾಡ್ರನ್​ ಈಗಾಗಲೇ ಅಂಬಾಲಾದ ವಾಯುನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಪೂರ್ವ ಲಡಾಖ್​ನ ಚೀನಾ ಗಡಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಸ್ತು ತಿರುಗಲು ಶುರು ಮಾಡಿವೆ. ಹಶಿಮಾರಾ ವಾಯುನೆಲೆಯಿಂದ ಹಲವು ಚೀನಾ ವಾಯುನೆಲೆಗಳು ಸಮೀಪದಲ್ಲೇ ಇದ್ದು, ಇದೀಗ ರಫೇಲ್​ ಜೆಟ್​ನ ಎರಡನೇ ಸ್ಕ್ವಾಡ್ರನ್​​ನಿಂದ ಸಹಜವಾಗಿಯೇ ಇಲ್ಲಿನ ವಾಯುಪಡೆಗೆ ಉತ್ತೇಜನ ದೊರೆಯಲಿದೆ.

ಫ್ರಾನ್ಸ್​ನೊಂದಿಗೆ ಭಾರತ 2016ರಲ್ಲಿ ಮಾಡಿಕೊಂಡ ಅನ್ವಯ ಇಲ್ಲಿಗೆ ಒಟ್ಟು 36 ರಫೇಲ್​ ಜೆಟ್​ಗಳು ಬರಲಿವೆ. ಎರಡು ಇಂಜಿನ್​​ಗಳ ರಫೇಲ್​ ಜೆಟ್​​ಗಳು ನೆಲ ಮತ್ತು ಸಮುದ್ರ ದಾಳಿ, ನ್ಯೂಕ್ಲಿಯರ್​ ಅಟ್ಯಾಕ್​ನಂತಹ ಅಪಾಯಕಾರಿ ದಾಳಿ ವಿರುದ್ಧವೂ ನಿಲ್ಲಬಹುದಾದ ಸಾಮರ್ಥ್ಯಹೊಂದಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ, ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ

3 more Rafale jets arrived to India from France

Published On - 8:30 am, Thu, 22 July 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ