Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುಲ್ಲಿ ಡೀಲ್ಸ್’ ಆಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ನ್ಯಾಯಾಲಯದ ಪ್ರಕಾರ ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ನ್ಯಾಯಯುತ ತನಿಖೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ನ್ಯಾಯಾಲಯದ ಅಭಿಪ್ರಾಯದಲ್ಲಿ ಆರೋಪಿಯು ಈ ಹಂತದಲ್ಲಿ ಜಾಮೀನು ಪಡೆಯಲು ಅರ್ಹನಲ್ಲ ಎಂದು ನ್ಯಾಯಾಲಯ ಹೇಳಿದೆ.

'ಸುಲ್ಲಿ ಡೀಲ್ಸ್' ಆಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ
ಓಂಕಾರೇಶ್ವರ್ ಠಾಕೂರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 16, 2022 | 7:19 PM

ದೆಹಲಿ: ಸುಲ್ಲಿ ಡೀಲ್ಸ್ ಆ್ಯಪ್ (Sulli Deals) ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ (Aumkareshwar Thakur) ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ಭಾನುವಾರ ತಿರಸ್ಕರಿಸಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಸುಂಧರಾ ಚೌಂಕರ್ ಅವರು ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ದೆಹಲಿ ಪೊಲೀಸ್‌ನ ವಿಶೇಷ ಕೋಶದ ಐಎಫ್‌ಎಸ್‌ಒ ಘಟಕವು ತನಿಖೆಯ ಸಮಯದಲ್ಲಿ ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಮಾಸ್ಟರ್‌ಮೈಂಡ್ ನೀರಜ್ ಬಿಷ್ಣೋಯ್ ಅವರಿಂದ ಮಾಹಿತಿ ಪಡೆದ ನಂತರ ಇಂದೋರ್‌ನಿಂದ ಸುಲ್ಲಿ ಡೀಲ್ಸ್ ಅಪ್ಲಿಕೇಶನ್‌ನ ಮಾಸ್ಟರ್‌ಮೈಂಡ್‌ನನ್ನು ಕಳೆದ ವಾರ ಬಂಧಿಸಿದೆ. ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದೆ. ಎಂಎಲ್ಎಟಿ ಪ್ರಕ್ರಿಯೆಯ ನಂತರ ಹೆಚ್ಚಿನ ಮತ್ತು ಸಮಯ ತೆಗೆದುಕೊಳ್ಳುವ ಪ್ರಯತ್ನಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. “ಆರೋಪಿಯು ತನ್ನ ಗುರುತನ್ನು ಬಹಿರಂಗಪಡಿಸಲು ಪ್ರಜ್ಞಾಪೂರ್ವಕವಾಗಿ ಟಾಪ್ ಬ್ರೌಸರ್ ಅನ್ನು ಬಳಸಿದ್ದನು ಮತ್ತು ದೇಶಾದ್ಯಂತ ‘ಸುಲ್ಲಿ ಡೀಲ್ಸ್’ ಅಪ್ಲಿಕೇಶನ್ ವಿರುದ್ಧ ವಿವಿಧ ದೂರುಗಳನ್ನು ಸ್ವೀಕರಿಸಲಾಗಿದೆ. ತನಿಖೆಯು ಆರಂಭಿಕ ಹಂತದಲ್ಲಿದೆ, ನಿರ್ಣಾಯಕ ಸಾಕ್ಷ್ಯಗಳು ಮತ್ತು ಘಟನೆಗಳ ಮುಂದಿನ ಸರಣಿಯು ಇನ್ನೂ ನಿರ್ಣಾಯಕವಾಗಿ ಬೆಳಕಿಗೆ ಬರಬೇಕಿದೆ ಎಂದು ಕೋರ್ಟ್ ಗಮನಿಸಿದೆ.

ನ್ಯಾಯಾಲಯದ ಪ್ರಕಾರ ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ನ್ಯಾಯಯುತ ತನಿಖೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ನ್ಯಾಯಾಲಯದ ಅಭಿಪ್ರಾಯದಲ್ಲಿ ಆರೋಪಿಯು ಈ ಹಂತದಲ್ಲಿ ಜಾಮೀನು ಪಡೆಯಲು ಅರ್ಹನಲ್ಲ ಎಂದು ನ್ಯಾಯಾಲಯ ಹೇಳಿದೆ. “ಮೇಲಿನ ಅವಲೋಕನಗಳು ಮತ್ತು ಕಾರಣಗಳ ಆಧಾರದ ಮೇಲೆ, ಆರೋಪಿ ಓಂಕಾರೇಶ್ವರ್ ಠಾಕೂರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜುಲೈ 2021 ರಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಲು ಗಿಟ್ ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ‘ಸುಲ್ಲಿ ಡೀಲ್’ ಅಪ್ಲಿಕೇಶನ್ ಅನ್ನು ತಯಾರಿಸಲಾಯಿತು. ದೆಹಲಿ ಪೊಲೀಸರು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಾಗ ವಿಷಯ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಕಳೆದ ಆರು ತಿಂಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಬುಲ್ಲಿ ಬಾಯಿ ಆಪ್ ಪ್ರಕರಣದ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಅವರನ್ನು ಅಸ್ಸಾಂನ ಜೋರ್ಹತ್‌ನಿಂದ ಬಂಧಿಸಿದ ನಂತರ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.

ದೆಹಲಿ ಪೊಲೀಸರು ತನಿಖೆಯ ಸಮಯದಲ್ಲಿ ಬುಲ್ಲಿ ಬಾಯ್ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಮತ್ತು ಔಂಕಾರೇಶ್ವರ ಠಾಕೂರ್ ಚಾಟ್ ರೂಮ್‌ಗಳ ಮೂಲಕ ವರ್ಚುವಲ್ ಆಗಿ ಇಂಟರ್ನೆಟ್‌ನಲ್ಲಿ ಸಂಪರ್ಕ ಹೊಂದಿದ್ದರು ಎಂದು ಕಂಡುಹಿಡಿದಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವದ ಪರೇಡ್‌ನಿಂದ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಔಟ್; ತೀವ್ರ ಆಘಾತವಾಗಿದೆ ಎಂದು ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ