AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋದ ಮೇಲೆ ದಟ್ಟವಾದ ಹಸಿರು ಪೊದೆ; ಉಷ್ಣತೆಯಿಂದ ಪಾರಾಗಲು ಚಾಲಕನ ಐಡಿಯಾ !

ಹೀಗೆ ಆಟೋ ಮೇಲೆ ಮಹೇಂದ್ರ ಕುಮಾರ್ ಗಿಡಗಳನ್ನು ಬೆಳೆಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಎರಡು ವರ್ಷಗಳ ಹಿಂದೆ ಹೀಗೆ ಬಿಸಿಲಿನ ಮಟ್ಟ ತೀವ್ರವಾಗಿದ್ದಾಗ ಮೊದಲ ಬಾರಿಗೆ ಪ್ರಯೋಗ ಮಾಡಿದ್ದರು.

ಆಟೋದ ಮೇಲೆ ದಟ್ಟವಾದ ಹಸಿರು ಪೊದೆ; ಉಷ್ಣತೆಯಿಂದ ಪಾರಾಗಲು ಚಾಲಕನ ಐಡಿಯಾ !
ಆಟೋ ಮೇಲೆ ಸಸ್ಯಗಳನ್ನು ನೆಟ್ಟ ಡ್ರೈವರ್
TV9 Web
| Edited By: |

Updated on:May 03, 2022 | 7:49 PM

Share

ಈಗಂತೂ ದೇಶದೆಲ್ಲೆಡೆ ವಿಪರೀತ ಸೆಖೆ. ಉಷ್ಣತೆ ಗರಿಷ್ಠ ಮಟ್ಟ ತಲುಪಿ ಜನರು ಪರದಾಡುತ್ತಿದ್ದಾರೆ. ಹೀಗಿರುವಾಗ ಒಬ್ಬ ಆಟೋ ಡ್ರೈವರ್​ ಸೆಖೆಯಿಂದ ಪಾರಾಗಲು ಮಾಡಿಕೊಂಡಿರುವ ಐಡಿಯಾ ಈಗ ಸಖತ್ ಸುದ್ದಿಯಾಗಿದೆ. ಇವರು ದೆಹಲಿಯಲ್ಲಿ ರಿಕ್ಷಾ ಚಾಲಕನಾಗಿದ್ದು, ಹೆಸರು ಮಹೇಂದ್ರ ಕುಮಾರ್​.  ದಿನವಿಡೀ ಬಿರುಬಿಸಿಲಿಲ್ಲಿ ಆಟೋ ಓಡಿಸುವ ಇವರು ಸೆಖೆಯಿಂದ ಪಾರಾಗಲು ತಮ್ಮ ಆಟೋದ ಮೇಲೆ ಗಿಡಗಳನ್ನು ಬೆಳೆಸಿದ್ದಾರೆ. ಇವರ ಆಟೋದ ಮೇಲೆ ದೊಡ್ಡದಾದ, ಹಸಿರಾದ, ದಟ್ಟವಾದ ಪೊದೆಯೇ ಬೆಳೆದು ನಿಂತಿದೆ.  ಅಂದಹಾಗೇ, ಆಟೋದ ಮೇಲೆ ಸುಮಾರು 20 ವಿವಿಧ ಬಗೆಯ ಗಿಡಗಳಿದ್ದು, ಕೆಲವು ಹೂವು ಬಿಟ್ಟಿವೆ. ಆಟೋ ಮುಂದೆ ಸಾಗುತ್ತಿದ್ದರೆ, ಥೇಟ್​ ಒಂದು ಗಾರ್ಡನ್​ ಸಂಚರಿಸುದಂತೆ ಕಾಣುತ್ತದೆ. ಅನೇಕರು ಅದರ ಫೋಟೋ, ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 

ಹೀಗೆ ಆಟೋ ಮೇಲೆ ಮಹೇಂದ್ರ ಕುಮಾರ್ ಗಿಡಗಳನ್ನು ಬೆಳೆಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಎರಡು ವರ್ಷಗಳ ಹಿಂದೆ ಹೀಗೆ ಬಿಸಿಲಿನ ಮಟ್ಟ ತೀವ್ರವಾಗಿದ್ದಾಗ ಮೊದಲ ಬಾರಿಗೆ ಪ್ರಯೋಗ ಮಾಡಿದ್ದರು. ಇದರಿಂದ ನನ್ನ ಆಟೋ ಒಳಗೆ ತುಂಬ ತಂಪಾಗಿರುತ್ತದೆ. ಪ್ರಯಾಣಿಕರೂ ಸೆಖೆಯಿಂದ ಪಾರಾಗಬಹುದು ಎಂದು ಕುಮಾರ್​ ಹೇಳಿದ್ದಾಗಿ ಎಎಫ್​ಪಿ ವರದಿ ಮಾಡಿದೆ. ಕುಮಾರ್​ ತಮ್ಮ ರಿಕ್ಷಾದ ಒಳಗೆ ಎರಡು ಚಿಕ್ಕದಾದ ಕೂಲರ್​ ಮತ್ತು ಫ್ಯಾನ್​​ಗಳನ್ನೂ ಇಟ್ಟುಕೊಂಡಿದ್ದಾರೆ.  ಆಟೋ ಮೇಲೆ ಗಿಡಗಳನ್ನು ಇರುವುದನ್ನು ನೋಡಿ ಪ್ರಯಾಣಿಕರು ಖುಷಿಯಾಗುತ್ತಾರೆ. ಎಷ್ಟೋ ಜನ 10-20 ರೂಪಾಯಿ ಹೆಚ್ಚಿಗೆಯೂ ಕೊಡುತ್ತಾರೆ ಎಂದೂ ಕುಮಾರ್​ ತಿಳಿಸಿದ್ದಾರೆ.

ಆಟೋದ ಮೇಲ್ಭಾಗದಲ್ಲಿ ಮೊದಲು ಒಂದು ಮ್ಯಾಟ್​ ಹಾಕುತ್ತೇನೆ. ನಂತರ ಗೋಣಿಚೀಲ ಹಾಸಿ, ಅದರ ಮೇಲೆ ಮಣ್ಣು ಉದುರಿಸಿದ್ದೇನೆ. ಬಳಿಕ ರಸ್ತೆ ಬದಿಯಲ್ಲಿ ಬೆಳೆಯುವ ಹುಲ್ಲನ್ನೂ ಹಾಕಿದೆ. ಇನ್ನು ಸ್ನೇಹಿತರಿಂದ ಕೆಲವು ಸಸ್ಯಗಳ ಬೀಜವನ್ನು ಪಡೆದು ಅದನ್ನೂ ಹಾಕಿದ್ದೇನೆ. ಒಂದೆರಡು ದಿನದಲ್ಲೇ ಅವು ಸಸಿಯಾಗುತ್ತವೆ ಎಂದು ಆಟೋ ಚಾಲಕ ವಿವರಿಸಿದ್ದಾರೆ. ಇದಕ್ಕೆ ಹೆಚ್ಚಿನ ಶ್ರಮವೇನೂ ಬೇಡ. ನಾನು ದಿನದಲ್ಲಿ ಎರಡು ಬಾಟಲಿ ನೀರು ಹಾಕುತ್ತೇನೆ ಅಷ್ಟೇ ಎಂದೂ ಹೇಳಿದ್ದಾರೆ. (Source)

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:49 pm, Tue, 3 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ