ಮಧ್ಯಪ್ರದೇಶ: ನರ್ಮದಾಪುರಂನಲ್ಲಿ ಮಸೀದಿಗೆ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು

| Updated By: ರಶ್ಮಿ ಕಲ್ಲಕಟ್ಟ

Updated on: Mar 13, 2022 | 10:02 PM

ಐದು ದಶಕಗಳ ಹಳೆಯ ಮಸೀದಿಯನ್ನು ಭಾನುವಾರ ನಸುಕಿನಲ್ಲಿ ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ ಬೆಳಿಗ್ಗೆ 6 ಗಂಟೆಗೆ ಸ್ಥಳೀಯ ಯುವಕರು ಕೇಸರಿ ಬಣ್ಣ ಬಳಿದಿರುವ ಮಸೀದಿಯನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ:  ನರ್ಮದಾಪುರಂನಲ್ಲಿ ಮಸೀದಿಗೆ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು
ಕೇಸರಿ ಬಣ್ಣ ಬಳಿದಿರುವ ಮಸೀದಿ
Follow us on

ನರ್ಮದಾಪುರಂ: ಮಧ್ಯಪ್ರದೇಶದ (Madhya pradesh) ಹೆದ್ದಾರಿ-22 ರಲ್ಲಿ ನರ್ಮದಾಪುರಂ (ಹೊಶಂಗಾಬಾದ್) ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಐದು ದಶಕಗಳ ಹಳೆಯ ಮಸೀದಿಯನ್ನು ಭಾನುವಾರ ನಸುಕಿನಲ್ಲಿ ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ ಬೆಳಿಗ್ಗೆ 6 ಗಂಟೆಗೆ ಸ್ಥಳೀಯ ಯುವಕರು ಕೇಸರಿ ಬಣ್ಣ ಬಳಿದಿರುವ ಮಸೀದಿಯನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅದರ ಬಾಗಿಲು ಮುರಿದಿತ್ತು. ಮಸೀದಿಗೆ ಕೇಸರಿ ಬಣ್ಣ ಬಳಿದಿರುವ ಬಗ್ಗೆ ಗ್ರಾಮದ ಕೆಲ ಸ್ಥಳೀಯ ಯುವಕರು ಬೆಳಗ್ಗೆ 6 ಗಂಟೆ ಸುಮಾರಿಗೆ ಮಾಹಿತಿ ನೀಡಿದ್ದಾರೆ ಎಂದು ದೇಗುಲದ ಉಸ್ತುವಾರಿ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸತ್ತಾರ್, ದೇಗುಲದ ಮರದ ಬಾಗಿಲುಗಳನ್ನು ಒಡೆದು ಮಾರು ನದಿಯಲ್ಲಿ ಎಸೆಯಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಗುಮ್ಮಟ ಮಾತ್ರವಲ್ಲ, ಸಮಾಧಿ ಮತ್ತು ಪ್ರವೇಶದ್ವಾರಕ್ಕೂ ಕೇಸರಿ ಬಣ್ಣವನ್ನು ಲೇಪಿಸಲಾಗಿದೆ. ಇದಲ್ಲದೆ,  ಆವರಣದ ಒಳಗಿದ್ದ ಹ್ಯಾಂಡ್  ಪಂಪ್ ಕೂಡ ಕಿತ್ತು ಹಾಕಲಾಗಿದೆ. ಗ್ರಾಮಸ್ಥರ ಪ್ರಕಾರ ಪೊಲೀಸರು ತಮ್ಮ ಹಿಂದಿನ ದೂರು ಕೇಳಲಿಲ್ಲ. ನಂತರ ನಾವು ರಾಜ್ಯ ಹೆದ್ದಾರಿ-22 ಅನ್ನು ನಿರ್ಬಂಧಿಸಿದ ನಂತರ ಕ್ರಮಕ್ಕೆ ಮುಂದಾಗಿದ್ದಾರೆ. ಸಮೀಪದ ಪಟ್ಟಣವಾದ ಮಖನ್ ನಗರ, ಸೆಮ್ರಿಯಾದಿಂದ ಪೊಲೀಸರು ಮತ್ತು ಜಿಲ್ಲಾಡಳಿತದ ತಂಡವು ಸ್ಥಳಕ್ಕೆ ತಲುಪಿ ಕ್ರಮದ ಭರವಸೆ ನೀಡಿದ ನಂತರ ಅವರು ಪ್ರತಿಭಟನೆ ನಿಲ್ಲಿಸಿದರು.

ಐಪಿಸಿ ಸೆಕ್ಷನ್ 295 (A) (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗಾಗಿ, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಪಟ್ಟಣದಲ್ಲಿ ಉದ್ವಿಗ್ನತೆಯ ನಡುವೆ ಪೊಲೀಸರನ್ನು ನಿಯೋಜಿಸಿ ಮಸೀದಿಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ. ಇದಕ್ಕಾಗಿ ಗ್ರಾಮಸ್ಥರಿಗೆ ಸಹಾಯ ಮಾಡಲು ಅಗ್ನಿಶಾಮಕ ದಳದ ಎರಡು ವಾಹನಗಳನ್ನು ಸಹ ಸೇವೆಗೆ ಒತ್ತಾಯಿಸಲಾಗಿದೆ.

“ನಾವು ಎಫ್‌ಐಆರ್ ದಾಖಲಿಸಿದ್ದೇವೆ ಆದರೆ ಮೊದಲಿನಂತೆ ಮಸೀದಿಯನ್ನು ಪುನಃಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ, ಅದನ್ನು ಮಾಡಲಾಗುತ್ತಿದೆ. ಇದಾದ ಬಳಿಕ ಆರೋಪಿಗಳನ್ನೂ ಬಂಧಿಸಲಾಗುವುದು. ಆದರೆ ಇಲ್ಲಿ ಎರಡು ಸಮುದಾಯದ ಜನರು ಶಾಂತಿಯುತವಾಗಿ ವಾಸಿಸುತ್ತಿದ್ದು, ಈ ಹಿಂದೆ ಯಾವುದೇ ಕೋಮು ಉದ್ವಿಗ್ನತೆ ಇರಲಿಲ್ಲವಾದ್ದರಿಂದ ಸ್ಥಳೀಯ ಯುವಕರು ಈ ಕೃತ್ಯ ಎಸಗಿರುವಂತೆ ತೋರುತ್ತಿಲ್ಲ ಎಂದು ಮಖಾನ್ ನಗರ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ಹೇಮಂತ್ ಶ್ರೀವಾಸ್ತವ್ ಹೇಳಿದ್ದಾರೆ.

ಇದನ್ನೂ ಓದಿಮಧ್ಯಪ್ರದೇಶ: ಬುಡಕಟ್ಟು ಜನರ ಹಬ್ಬದ ವೇಳೆ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಪುರುಷರ ಗುಂಪು; ವಿಡಿಯೊ ವೈರಲ್