AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಪುರುಷರೂ ಸುರಕ್ಷಿತರಲ್ಲ! ನಾಲ್ವರು ಯುವತಿಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಪಂಜಾಬ್ ಕಾರ್ಮಿಕನ ಅರೋಪ!

ಕೇವಲ ಕಾಮತೃಷೆ ತೀರಿಸಿಕೊಳ್ಳುವ ಉದ್ದೇಶದಿಂದ ತನ್ನನ್ನು ಅಪಹರಿಸಲಾಗಿತ್ತು ಎಂದು ಕಾರ್ಮಿಕ ಹೇಳಿದ್ದಾನೆ. ಚರ್ಮದ ಫ್ಯಾಕ್ಟರಿಯೊಂದರಲ್ಲಿ ತಾನು ಕಾರ್ಮಿಕನಾಗಿ ಕೆಲಸ ಮಾಡುತ್ತಿರುವೆನೆಂದು ಅವನು ಮಾಧ್ಯಮಕ್ಕೆ ತಿಳಿಸಿದ್ದಾನೆ.

ಭಾರತದಲ್ಲಿ ಪುರುಷರೂ ಸುರಕ್ಷಿತರಲ್ಲ! ನಾಲ್ವರು ಯುವತಿಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಪಂಜಾಬ್ ಕಾರ್ಮಿಕನ ಅರೋಪ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 23, 2022 | 11:55 AM

Share

ಜಲಂಧರ್: ಹೀಗೂ ಉಂಟೇ? ಹೌದು ಮಾರಾಯ್ರೇ ಹೀಗೂ ಉಂಟು. ಭಾರತದಲ್ಲಿ ಇದು ಕೇಳರಿಯದ ಸುದ್ದಿ ಅಂದರೆ ಅತಿಶಯೋಕ್ತಿ ಎನಿಸದು. ವಿಷಯ ಏನು ಗೊತ್ತಾ? ಜಲಂಧರ್ ನ (Jallandhar) ಕೂಲಿ ಕಾರ್ಮಿಕನೊಬ್ಬ (Labourer) ನಾಲ್ವರು ಮಹಿಳೆಯರು ತನ್ನನ್ನು ಬಿಳಿ ಕಾರೊಂದರಲ್ಲಿ ಅಪಹರಿಸಿದ ಬಳಿಕ ಕಣ್ಣುಗಳಿಗೆ ಯಾವುದೋ ಕೆಮಿಕಲ್ ಸಿಂಪಡಿಸಿ, ಬಲವಂತದಿಂದ ಡ್ರಗ್ಸ್ ಸೇವಿಸುವಂತೆ ಮಾಡಿ ಅರಣ್ಯ ಪ್ರದೇಶವೊಂದಕ್ಕೆ ಕರೆದೊಯ್ದ್ದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಸಾಮೂಹಿಕ ಅತ್ಯಾಚಾರ (gang rape) ನಡೆಸಿದ ನಂತರ ರಾತ್ರಿ ಸಮಯದಲ್ಲಿ ತನ್ನನ್ನು ನಿರ್ಜನ ಪ್ರದೇಶವೊಂದರಲ್ಲಿ ಕಾರಿನಿಂದ ಇಳಿಸಿ ಹೋದರೆಂದು ಅವನು ಹೇಳಿದ್ದಾನೆ. ಗಮನಿಸಬೇಕಾದ ಅಂಶವೇನೆಂದರೆ ಅವನು ಪೊಲೀಸರಿಗೆ ದೂರು ಸಲ್ಲಿಸದೆ, ಸ್ಥಳೀಯ ಮಾಧ್ಯಮವೊಂದರ ಮುಂದೆ ಗೋಳು ತೋಡಿಕೊಂಡಿದ್ದಾನೆ. ಅವನಿಗೆ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ.

ಮಾಧ್ಯಮದ ವರದಿಯ ಪ್ರಕಾರ ‘ಸಂತ್ರಸ್ತ’ ನ ಪತ್ನಿಯೇ ದೂರು ಸಲ್ಲಿಸುವಂತೆ ಒತ್ತಾಯಸಿದ್ದಾಳೆ. ಅವನ ಜೀವಕ್ಕೇನಾದರೂ ಅಪಾಯವಾಗಿದ್ದರೆ ಕುಟುಂಬದ ಗತಿ ಏನಾಗುತಿತ್ತು ಅಂತ ಯೋಚಿಸು ಆಕೆ ಗಂಡನಿಗೆ ಹೇಳಿದ್ದಾಳೆ.

ಕೇವಲ ಕಾಮತೃಷೆ ತೀರಿಸಿಕೊಳ್ಳಲು ಅಪಹರಣ!

ಕೇವಲ ಕಾಮತೃಷೆ ತೀರಿಸಿಕೊಳ್ಳುವ ಉದ್ದೇಶದಿಂದ ತನ್ನನ್ನು ಅಪಹರಿಸಲಾಗಿತ್ತು ಎಂದು ಕಾರ್ಮಿಕ ಹೇಳಿದ್ದಾನೆ. ಚರ್ಮದ ಫ್ಯಾಕ್ಟರಿಯೊಂದರಲ್ಲಿ ತಾನು ಕಾರ್ಮಿಕನಾಗಿ ಕೆಲಸ ಮಾಡುತ್ತಿರುವೆನೆಂದು ಅವನು ಮಾಧ್ಯಮಕ್ಕೆ ತಿಳಿಸಿದ್ದಾನೆ.

ಸೋಮವಾರ ಸಾಯಂಕಾಲದ ಅವನು ಕೆಲಸ ಮುಗಿಸಿಕೊಂಡು ಕಪೂರ್ತಲ ರಸ್ತೆಯ ಮುಖಾಂತರ ಮನೆಗೆ ಹೋಗುವಾಗ ನಾಲ್ವರು ಯುವತಿಯರು (ಎಲ್ಲ 20-25ರ ಪ್ರಾಯದವರು ಅಂತ ಅವನು ಹೇಳಿದ್ದಾನೆ) ಬಿಳಿ ಕಾರಲ್ಲಿ ಅವನನ್ನು ಸಮೀಪಿಸಿದ್ದಾರೆ. ಕಾರು ಓಡಿಸುತ್ತಿದ್ದ ಯುವತಿ ಅಡ್ರೆಸ್ ಬರೆದಿದ್ದ ಚೀಟಿಯೊಂದನ್ನು ಅವನಿಗೆ ತೋರಿಸಿ ಆ ಸ್ಥಳ ಎಲ್ಲಿ ಬರುತ್ತೆ ಅಂತ ಕೇಳಿದ್ದಾಳೆ. ಅವನು ಚೀಟಿಯಲ್ಲಿ ಬರೆದಿರುವುದನ್ನು ನೋಡುತ್ತಿರುವಾಲೇ ಆ ಯುವತಿ ಅವನ ಕಣ್ಣಿಗೆ ಕೆಮಿಕಲ್ಲೊಂದನ್ನು ಎರಚಿದ್ದಾಳೆ. ಅವನಿಗೆ ಕಣ್ಣು ಕಾಣದಂತಾಗಿ ಪ್ರಜ್ಞೆ ತಪ್ಪಿದ್ದಾನೆ.

ಯುವತಿಯರು ಮದ್ಯ ಸೇವಿಸುತ್ತಿದ್ದರು!

ಪ್ರಜ್ಞೆ ಮರುಕಳಿಸಿದಾಗ ಅವನು ಅದೇ ಯುವತಿಯರ ಜೊತೆ ಕಾರಿನಲ್ಲಿ ಕುಳಿತ್ತಿದ್ದ. ಅವನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು ಮತ್ತು ಎರಡೂ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು. ಆದಾದ ಮೇಲೆ ಯುವತಿಯರು ಅವನನ್ನು ಅಜ್ಞಾತ ಪ್ರದೇಶವೊಂದಕ್ಕೆ ಒಯ್ದು ಬಲವಂತದಿಂದ ಡ್ರಗ್ಸ್ ನೀಡಿದ್ದಾರೆ. ಅವರೆಲ್ಲ ಮದ್ಯ ಸೇವಿಸುತ್ತಿದ್ದರು ಮತ್ತು ತನಗೂ ಬಲವಂತದಿಂದ ಕುಡಿಸಿದರು ಅಂತ ಅವನು ಮಾಧ್ಯಮದವರಿಗೆ ಹೇಳಿದ್ದಾನೆ.

ನಂತರ ಅವರ ಸರದಿಯ ಮೇಲೆ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ‘ಸಂತ್ರಸ್ತ’ ಹೇಳಿದ್ದಾನೆ.

ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಯುವತಿಯರು ಪುನಃ ಅವನ ಕೈ ಮತ್ತು ಕಣ್ಣುಗಳನ್ನು ಕಟ್ಟಿ ಅವನೊಂದಿಗೆ ಅಲ್ಲಿಂದ ಹೊರಟಿದ್ದಾರೆ.

ಯುವತಿಯರೆಲ್ಲ ಕುಲೀನ ಮನೆತನದವರು ಮತ್ತು ಇಂಗ್ಲಿಷ್ ಭಾಷೆಯಲ್ಲೇ ಮಾತಾಡುತ್ತಿದ್ದರು, ಆದರೆ ತನ್ನೊಂದಿಗೆ ಮಾತ್ರ ಪಂಜಾಬಿ ಭಾಷೆಯಲ್ಲಿ ಮಾತಾಡಿದರು ಎಂದು ಅವನು ಮಾಧ್ಯಮಕ್ಕೆ ಹೇಳಿದ್ದಾನೆ. ಕಾರ್ಮಿಕ ಯುವತಿಯರಿಂದ ಅತ್ಯಾಚಾರಕ್ಕೊಳಗಾದ ಸುದ್ದಿ ಹರಡುತ್ತಿದ್ದಂತೆಯೇ ಪಂಜಾಬ್ ಗುಪ್ತಚರ ಇಲಾಖೆ ಸುವೊ ಮೋಟು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 11:55 am, Wed, 23 November 22

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ