AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀದಿ ನಾಡಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲ್ಯಾನ್, ಮತ ಬೇಟೆಗೆ ಬೆಂಗಾಳಿ ಕಲೀತಿರೋ ಅಮಿತ್ ಶಾ

ದೆಹಲಿ: ಕೇಸರಿ ಪಾಳಯದ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತೊಂದು ಭರ್ಜರಿ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸೋಲುಗಳಿಂದ ಸೊರಗುತ್ತಿರುವ ಬಿಜೆಪಿಗೆ ಮತ್ತೆ ಶಕ್ತಿ ತುಂಬಲು ಅಣಿಯಾಗಿದ್ದಾರೆ. ದೆಹಲಿ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಳ ಚುನಾವಣೆಗಳು ಹತ್ತಿರದಲ್ಲೇ ಇರುವಾಗ, ಹೊಸ ಬ್ರಹ್ಮಾಸ್ತ್ರ ಸಿದ್ಧಗೊಳಿಸಿದ್ದಾರೆ. ಬಂಗಾಳವೇ ಇರಲಿ.. ಬಿಹಾರವೇ ಇರಲಿ.. ಅಮಿತ್ ಶಾ ಎಂಟ್ರಿಯಾದ್ರು ಅಂದ್ರೆ ಅಲ್ಲಿ ಬಿಜೆಪಿಯದ್ದೇ ಹವಾ. ದೇಶಾದ್ಯಂತ ಬಿಜೆಪಿ ದಿಗ್ವಿಜಯ ಸಾಧಿಸಲು, ಕಮಲ ಕೋಟೆ ಭದ್ರಪಡಿಸಲು ಅಮಿತ್ ಶಾ ಸಾಕಷ್ಟು ಶ್ರಮಪಟ್ಟಿದ್ದಾರೆ. […]

ದೀದಿ ನಾಡಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲ್ಯಾನ್, ಮತ ಬೇಟೆಗೆ ಬೆಂಗಾಳಿ ಕಲೀತಿರೋ ಅಮಿತ್ ಶಾ
ಸಾಧು ಶ್ರೀನಾಥ್​
|

Updated on: Jan 03, 2020 | 8:03 AM

Share

ದೆಹಲಿ: ಕೇಸರಿ ಪಾಳಯದ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತೊಂದು ಭರ್ಜರಿ ಗೆಲುವಿಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸೋಲುಗಳಿಂದ ಸೊರಗುತ್ತಿರುವ ಬಿಜೆಪಿಗೆ ಮತ್ತೆ ಶಕ್ತಿ ತುಂಬಲು ಅಣಿಯಾಗಿದ್ದಾರೆ. ದೆಹಲಿ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಳ ಚುನಾವಣೆಗಳು ಹತ್ತಿರದಲ್ಲೇ ಇರುವಾಗ, ಹೊಸ ಬ್ರಹ್ಮಾಸ್ತ್ರ ಸಿದ್ಧಗೊಳಿಸಿದ್ದಾರೆ.

ಬಂಗಾಳವೇ ಇರಲಿ.. ಬಿಹಾರವೇ ಇರಲಿ.. ಅಮಿತ್ ಶಾ ಎಂಟ್ರಿಯಾದ್ರು ಅಂದ್ರೆ ಅಲ್ಲಿ ಬಿಜೆಪಿಯದ್ದೇ ಹವಾ. ದೇಶಾದ್ಯಂತ ಬಿಜೆಪಿ ದಿಗ್ವಿಜಯ ಸಾಧಿಸಲು, ಕಮಲ ಕೋಟೆ ಭದ್ರಪಡಿಸಲು ಅಮಿತ್ ಶಾ ಸಾಕಷ್ಟು ಶ್ರಮಪಟ್ಟಿದ್ದಾರೆ. ಆದ್ರೆ ಇತ್ತೀಚೆಗೆ ಬಿಜೆಪಿಗೆ ಆಘಾತಗಳ ಮೇಲೆ ಆಘಾತ ಎದುರಾಗ್ತಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್​ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದರೆ, ಹರಿಯಾಣದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಮುಂದಿನ ಚುನಾವಣೆಗಳಿಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಶಾ, ಪಶ್ಚಿಮ ಬಂಗಾಳವನ್ನೇ ಟಾರ್ಗೆಟ್ ಮಾಡಿ ಬೆಂಗಾಳಿ ಭಾಷೆ ಕಲಿಯೋಕೆ ಮುಂದಾಗಿದ್ದಾರೆ. ಆ ಮೂಲಕ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆಯಲು ಸಿದ್ಧರಾಗ್ತಿದ್ದಾರೆ.

‘ಕಮಲ ಪಡೆ’ಗೆ ಗೆಲುವಿನ ಅನಿವಾರ್ಯತೆ..! ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಷ್ಟು ಬಲವಾಗಿಲ್ಲ. ಹೀಗಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ರಣತಂತ್ರ ಹೆಣೆದು ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಿಸುವಲ್ಲಿ ಯಶಸ್ಸು ಕಂಡಿದ್ರು. ಆದ್ರೆ, ಸದ್ಯದ ಸ್ಥಿತಿ ಹಾಗಿಲ್ಲ. ಪಶ್ಚಿಮ ಬಂಗಾಳ ವಿಧಾನಸಭೆಗೆ ಕೌಂಟ್​ಡೌನ್ ಶುರುವಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದೆಲ್ಲವನ್ನು ಚೆನ್ನಾಗಿ ಅರಿತಿರುವ ಅಮಿತ್ ಶಾ, ಬೆಂಗಾಳಿಗಳನ್ನ ಅವರ ಮಾತೃಭಾಷೆಯಿಂದಲೇ ಗೆಲ್ಲಲು ಮುಂದಾಗಿದ್ದಾರೆ. ದೀದಿಗೆ ಟಾಂಗ್ ಕೊಡಲು ಬೆಂಗಾಳಿ ಕಲಿಯುತ್ತಿರುವ ಶಾ, ಲೋಕಸಭಾ ಚುನಾವಣೆಯ ದಿಗ್ವಿಜಯವನ್ನ ಮರುಕಳಿಸುವಂತೆ ಮಾಡಲು ಸಾಕಷ್ಟು ಶ್ರಮಪಡ್ತಿದ್ದಾರೆ.

ಅಂದು ಹಿಂದಿ ಕಲಿತಿದ್ದರು.. ಇಂದು ಬೆಂಗಾಳಿ ಸರದಿ..! ಅಂದಹಾಗೆ ಶಾ ಗುಜರಾತ್ ಮೂಲದವರಾಗಿದ್ದು, ಗುಜರಾತಿ ಭಾಷೆ ಮೇಲೆ ಹಿಡಿತ ಇಟ್ಟುಕೊಂಡಿದ್ದರು. ಆದ್ರೆ 2010ಕ್ಕೂ ಮೊದಲು ಅವರು ಹಿಂದಿ ಭಾಷೆ ಮೇಲೆ ಹಿಡಿತ ಹೊಂದಿರಲಿಲ್ಲ. ನಂತರ ನಡೆದ ಘಟನೆಗಳಿಂದ ಅಮಿತ್ ಶಾ ಅನಿವಾರ್ಯವಾಗಿ ಹಿಂದಿ ಕಲಿತು, ಇಡೀ ಉತ್ತರಭಾರತದಲ್ಲಿ ಛಾಪು ಮೂಡಿಸಿರುವುದು ಎಲ್ಲರಿಗೂ ಗೊತ್ತಿದೆ. ಈ ಮಧ್ಯೆ ಬೆಂಗಾಳಿಯನ್ನ ಕಲಿತು ತಮಿಳು ಭಾಷೆ ಮೇಲೂ ಹಿಡಿತ ಸಾಧಿಸಲು ಶ್ರಮಪಡ್ತಿದ್ದಾರೆ. ತಮಿಳುನಾಡಿನಲ್ಲಿ ಹಿಂದಿ ನಡೆಯೋದಿಲ್ಲ ಅಂತಾ ಗೊತ್ತಾಗಿರೋದ್ರಿಂದ ಅಮಿತ್ ಶಾ ತಮಿಳು ಭಾಷೆಯನ್ನೂ ಕಲಿಯುತ್ತಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಇದು ಸಹಕಾರಿಯಾಗಲಿದೆ.

ಒಟ್ನಲ್ಲಿ ತಮ್ಮ ಚುನಾವಣಾ ರಣತಂತ್ರಗಳು ಹಾಗೂ ರಾಜಕೀಯ ನೈಪುಣ್ಯತೆಯಿಂದಲೇ ಛಾಪು ಮೂಡಿಸೋ ಅಮಿತ್ ಶಾ, ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಆ ಮೂಲಕ ಅಲ್ಲೆಲ್ಲಾ ಬಿಜೆಪಿಗೆ ಬಲ ತುಂಬಿ, ಪಕ್ಷ ಸಂಘಟನೆಗೆ ಒತ್ತು ನೀಡ್ತಿದ್ದಾರೆ. ಆದರೆ ಭಾಷಾ ಪ್ರೇಮ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಪಶ್ಚಿಮ ಬಂಗಾಳ ಚುನಾವಣೆ ಬಳಿಕವೇ ತಿಳಿಯಬೇಕು.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!