AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಗೆದ್ದ ಆಮ್​ ಆದ್ಮಿ ಪಾರ್ಟಿಗೆ ಹರ್ಯಾಣದ ಹಲವು ಬಿಜೆಪಿ, ಕಾಂಗ್ರೆಸ್​ ನಾಯಕರ ಸೇರ್ಪಡೆ; ಕೇಜ್ರಿವಾಲ್​​ಗೆ ಜಾಕ್​ಪಾಟ್​

ಗುರುಗ್ರಾಮದ ಬಿಜೆಪಿ ಮಾಜಿ ಶಾಸಕ ಉಮೇಶ್​ ಅಗರ್​ವಾಲ್​, ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್​, ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ, ಹರ್ಯಾಣದ ಮಾಜಿ ಸಚಿವ ಬಲಬೀರ್ ಸೈನಿ ಮತ್ತಿತರ ಪ್ರಮುಖ ನಾಯಕರು ಇದೀಗ ಆಪ್​ ಪಕ್ಷ ಸೇರಿದ್ದಾರೆ.

ಪಂಜಾಬ್​​ನಲ್ಲಿ ಗೆದ್ದ ಆಮ್​ ಆದ್ಮಿ ಪಾರ್ಟಿಗೆ ಹರ್ಯಾಣದ ಹಲವು ಬಿಜೆಪಿ, ಕಾಂಗ್ರೆಸ್​ ನಾಯಕರ ಸೇರ್ಪಡೆ; ಕೇಜ್ರಿವಾಲ್​​ಗೆ ಜಾಕ್​ಪಾಟ್​
ಆಪ್​ ವಿಜಯಯಾತ್ರೆ ಚಿತ್ರ
TV9 Web
| Edited By: |

Updated on:Mar 17, 2022 | 2:40 PM

Share

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಗೆದ್ದಿದ್ದೇ ಗೆದ್ದಿದ್ದು, ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹರ್ಯಾಣದ ಹಲವು ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಗುರುಗಾಂವ್​ ಶಾಸಕ  ಉಮೇಶ್ ಅಗರ್​ವಾಲ್​, ಮಾಜಿ ಸಚಿವ ಮತ್ತು ಕಾಂಗ್ರೆಸ್​ ನಾಯಕ ಬಿಜೇಂದ್ರ ಸಿಂಗ್​ ಸೇರಿ ಹಲವು ನಾಯಕರು ಆಪ್​​ಗೆ ಸೇರ್ಪಡೆಗೊಂಡಿದ್ದಾರೆ.

ಗುರುಗ್ರಾಮದ ಬಿಜೆಪಿ ಮಾಜಿ ಶಾಸಕ ಉಮೇಶ್​ ಅಗರ್​ವಾಲ್​, ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್​, ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ, ಹರ್ಯಾಣದ ಮಾಜಿ ಸಚಿವ ಬಲಬೀರ್ ಸೈನಿ ಮತ್ತಿತರ ಪ್ರಮುಖ ನಾಯಕರು ಇದೀಗ ಆಪ್​ ಪಕ್ಷ ಸೇರಿದ್ದಾರೆ. ಇನ್ನು, ಸಮಲ್ಖಾದ ಮಾಜಿ ಶಾಸಕ (ಸ್ವತಂತ್ರ) ರವೀಂದ್ರ ಕುಮಾರ್​, ಕಾಂಗ್ರೆಸ್​ ನಾಯಕ ಜಗತ್​ ಸಿಂಗ್​, ಬಿಎಸ್​​ಪಿಯ ಅಶೋಕ್​ ಮಿತ್ತಲ್​, ಬಿಜೆಪಿಯ ಅಮಂದೀಪ್​ ಸಿಂಗ್​ ವಾರಾಯಿಚ್, ಬಿಜೆಪಿಯ ಬಹ್ಮ ಸಿಂಗ್ ಗುರ್ಜಾರ್​, ಹರ್ಯಾಣದ ಸರ್​ಪಂಚ್​ ಆಗಿದ್ದ ಸರ್ದಾರ್ ಗುರ್ಲಾಲ್​ ಸಿಂಗ್​ ಕೂಡ ಕೈಯಲ್ಲಿ ಪೊರಕೆ ಹಿಡಿದಿದ್ದಾರೆ. ಅರ್ಥಾತ್​ ಆಮ್​ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

ಈ ಬಗ್ಗೆ ಆಪ್​ ಶಾಸಕ ಸುಶೀಲ್​ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ, ಕಾಂಗ್ರೆಸ್​ ಮತ್ತು ಇತರ ಪಕ್ಷಗಳಿಂದ ಹಲವು ಶಾಸಕರು, ಪ್ರಮುಖ ನಾಯಕರು ಆಪ್​ ಸೇರಿದ್ದಾರೆ. ಇವರೆಲ್ಲ ದೆಹಲಿಯಲ್ಲಿ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದೂ ತಿಳಿಸಿದ್ದಾರೆ. ಪಂಜಾಬ್​ ಮತ್ತು ದೆಹಲಿಯ ನಂತರ ಹರ್ಯಾಣದ ಜನರು ಆಪ್​​ನತ್ತ ಒಲವು ತೋರಿಸುತ್ತಿದ್ದಾರೆ. ಅಲ್ಲಿಯೂ ಕೂಡ ಮುಂದಿನ ಚುನಾವಣೆ ನಂತರ ಆಪ್​ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಳ್ಳೆಯ ಆಡಳಿತ, ಬೊಮ್ಮಾಯಿ ನೇತೃತ್ವದಲ್ಲಿ ಕೆಲಸಗಳು ಉತ್ತಮವಾಗಿ ಆಗುತ್ತಿವೆ, ಶಹಬಾಸ್! ಬೆಂಗಳೂರಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

Published On - 9:23 am, Tue, 15 March 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ