ಮುಂದಿನ ರಾಷ್ಟ್ರಪತಿ ಯಾರು? ನಾಲ್ಕು ರಾಜ್ಯಗಳ ಚುನಾವಣೆ ಗೆದ್ದ ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅನಾಯಾಸ

| Updated By: ರಶ್ಮಿ ಕಲ್ಲಕಟ್ಟ

Updated on: Mar 11, 2022 | 10:56 PM

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 270 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ಆಡಳಿತ ಪಕ್ಷವು ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಸುಗಮವಾಗಲಿದೆ.

ಮುಂದಿನ ರಾಷ್ಟ್ರಪತಿ ಯಾರು? ನಾಲ್ಕು ರಾಜ್ಯಗಳ ಚುನಾವಣೆ ಗೆದ್ದ ಬಿಜೆಪಿಗೆ ರಾಷ್ಟ್ರಪತಿ ಚುನಾವಣೆ ಅನಾಯಾಸ
ರಾಷ್ಟ್ರಪತಿ ಭವನ
Image Credit source: https://rashtrapatisachivalaya.gov.in/
Follow us on

ದೆಹಲಿ: ಇತ್ತೀಚಿನ ರಾಜ್ಯ ಚುನಾವಣಾ ಫಲಿತಾಂಶಗಳು ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ(BJP) ಹಿಡಿತವನ್ನು ಬಲಪಡಿಸಿದ್ದು ಈ ವರ್ಷ ಭಾರತದ ನೂತನ ರಾಷ್ಟ್ರಪತಿಯ ಆಯ್ಕೆ ಮಾಡುವ ಹೊಣೆಯನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ(Uttar Pradesh Assembly Election)  ಬಿಜೆಪಿಯ ದಾಖಲೆಯ ಗೆಲುವು ಮಾರ್ಚ್ 31 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಮತ್ತು ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. 776 ಸಂಸದರು ಮತ್ತು 4,120 ಶಾಸಕರ ಎಲೆಕ್ಟೋರಲ್ ಕಾಲೇಜ್ ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್ ಒಟ್ಟು ಸಂಖ್ಯಾಬಲ 10,98,903 ಮತಗಳಾಗಿದ್ದು, ಬಿಜೆಪಿಯ ಬಲವು ಇದರ ಅರ್ಧದಷ್ಟಿದೆ.  ಸಂಸದರ ಪ್ರತಿ ಮತದ ಮೌಲ್ಯ 708. ಶಾಸಕರ ಸಂದರ್ಭದಲ್ಲಿ ಮತದ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಉತ್ತರ ಪ್ರದೇಶದ ಶಾಸಕರ ಮತಗಳು ಅತ್ಯಧಿಕ ಮೌಲ್ಯವನ್ನು ಹೊಂದಿವೆ .ಅಂದರೆ ಈ ಶಾಸಕರ ಮತದ ಮೌಲ್ಯ 208. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 270 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ಆಡಳಿತ ಪಕ್ಷವು ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಸುಗಮವಾಗಲಿದೆ. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಆದರೆ ಪ್ರಸ್ತುತ ರಾಮನಾಥ್ ಕೋವಿಂದ್ ಅವರನ್ನು ಎರಡನೇ ಅವಧಿಗೆ ನೀಡಬೇಕೇ ಎಂಬ ಬಗ್ಗೆ ಬಿಜೆಪಿ ನಾಯಕತ್ವವು ಇನ್ನೂ ತೀರ್ಮಾನಿಸಿಲ್ಲ.

ಇಲ್ಲಿಯವರೆಗೆ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮಾತ್ರ ಎರಡು ಬಾರಿ ಆಯ್ಕೆಯಾಗಿದ್ದರು.
“ಸಾಕಷ್ಟು ಪರಿಶೀಲನೆಯ ಅಗತ್ಯವಿದೆ”. ಅಂತಿಮವಾಗಿ, ರಾಷ್ಟ್ರಪತಿ ಭವನಕ್ಕೆ ಅತ್ಯಂತ ಸೂಕ್ತ ಅಭ್ಯರ್ಥಿಯ ಸಂಪೂರ್ಣ ಮೌಲ್ಯಮಾಪನದ ನಂತರ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವೈಎಸ್ಆರ್ ಕಾಂಗ್ರೆಸ್ ಮತ್ತು ನವೀನ್ ಪಟ್ನಾಯಕ್ ಅವರ ಬಿಜೆಡಿಯಂತಹ ಬೆಂಬಲಿತ ಪಕ್ಷಗಳು ಸೇರಿದಂತೆ ತನ್ನ ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸಿ ಒಮ್ಮತವನ್ನು ಸಾಧಿಸಲು ಸರ್ಕಾರ ಪ್ರಯತ್ನಿಸುತ್ತದೆ.

ಇತ್ತ  ಪ್ರತಿಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿವೆ. ಆದರೆ ಅದರ ಕಳಪೆ ಚುನಾವಣಾ ಫಲಿತಾಂಶದ ನಂತರ ಈ ಕಸರತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವುದು ಕಷ್ಟ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಎಂಕೆ ಸ್ಟಾಲಿನ್ ಅವರ ಡಿಎಂಕೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿಯಂತಹ ಪ್ರಾದೇಶಿಕ ಪಕ್ಷಗಳು ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಹಾಕಬೇಕೆ ಎಂದು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: UP election results: ಮುಸ್ಲಿಂ ಪ್ರಾಬಲ್ಯದ ದೇವಬಂದ್​​ನಲ್ಲಿ ಬಿಜೆಪಿ ವಿಜಯಗಳಿಸಿದ್ದು ಹೇಗೆ?