AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಪಾತದಿಂದ ತನ್ನ ಮದುವೆಗೆ ಹೋಗಲಾಗದೆ ಪರದಾಡಿದ ಸೈನಿಕ; ಹೆಲಿಕಾಪ್ಟರ್​ನಲ್ಲಿ ಏರ್​ಲಿಫ್ಟ್ ಮಾಡಿಸಿದ​ ಬಿಎಸ್​ಎಫ್

ಎಲ್‌ಒಸಿ ಪೋಸ್ಟ್ ಹಿಮದಿಂದ ಆವೃತವಾಗಿರುವುದರಿಂದ ಮತ್ತು ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕ ಸರಿಯಾಗಿಲ್ಲ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಮಿಲಿಟರಿ ಹೆಲಿಕಾಪ್ಟರ್​ ಒಂದೇ ಲಭ್ಯವಿರುವ ಏಕೈಕ ಸಾರಿಗೆ ವ್ಯವಸ್ಥೆಯಾಗಿದೆ.

ಹಿಮಪಾತದಿಂದ ತನ್ನ ಮದುವೆಗೆ ಹೋಗಲಾಗದೆ ಪರದಾಡಿದ ಸೈನಿಕ; ಹೆಲಿಕಾಪ್ಟರ್​ನಲ್ಲಿ ಏರ್​ಲಿಫ್ಟ್ ಮಾಡಿಸಿದ​ ಬಿಎಸ್​ಎಫ್
ಹೆಲಿಕಾಪ್ಟರ್
TV9 Web
| Edited By: |

Updated on:Apr 30, 2022 | 8:07 PM

Share

ಅಂಗುಲ್: ಸೈನಿಕರು ತಮ್ಮ ವೈಯಕ್ತಿಕ ಖುಷಿ, ಪ್ರಾಣವನ್ನು ಕೂಡ ಲೆಕ್ಕಿಸದೆ ತನ್ನ ದೇಶದವರಿಗಾಗಿ ಹೋರಾಡುತ್ತಾರೆ. ಅಂತಹ ಸೈನಿಕನ ಸಂತೋಷದ ಕ್ಷಣಕ್ಕೆ ತನ್ನ ಕೈಲಾದ ಸಹಾಯ ಮಾಡಲು ನಿರ್ಧರಿಸಿದ BSF ಇಂದು ಸೈನಿಕರೊಬ್ಬರು ತಮ್ಮ ಮದುವೆಗೆ ಹೋಗಲು ಅನುಕೂಲವಾಗಲೆಂದು ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ರಿಮೋಟ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ತನ್ನ ಮದುವೆಯ ಸಮಯದೊಳಗೆ ಮನೆ ಸೇರಲು ಸುಮಾರು 2,500 ಕಿಮೀ ದೂರದಲ್ಲಿರುವ ಒಡಿಶಾಗೆ ಹೋಗಬೇಕಿತ್ತು. ಹೀಗಾಗಿ, ಆತ ಸಮಯಕ್ಕೆ ಸರಿಯಾಗಿ ತನ್ನ ಮದುವೆಗೆ ಹಾಜರಾಗಲು ಅನುಕೂಲವಾಗಲೆಂದು ವಿಶೇಷ ಹೆಲಿಕಾಪ್ಟರ್​ ವ್ಯವಸ್ಥೆ ಮಾಡಲಾಗಿತ್ತು.

ಎಲ್‌ಒಸಿಯ (ಗಡಿ ನಿಯಂತ್ರಣ ರೇಖೆ) ಉದ್ದಕ್ಕೂ ಮಚಿಲ್ ಸೆಕ್ಟರ್‌ನ ಎತ್ತರದ ಪೋಸ್ಟ್‌ನಲ್ಲಿ ಸೈನಿಕರನ್ನು ಸೇವೆಗೆ ನಿಯೋಜಿಸಲಾಗಿತ್ತು. 30 ವರ್ಷದ ಕಾನ್‌ಸ್ಟೆಬಲ್ ನಾರಾಯಣ ಬೆಹೆರಾ ಅವರ ವಿವಾಹವು ಮೇ 2ರಂದು ಒಡಿಶಾದಲ್ಲಿರುವ ತಮ್ಮ ಊರಿನಲ್ಲಿ ನಿಗದಿಯಾಗಿತ್ತು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಒಸಿ ಪೋಸ್ಟ್ ಹಿಮದಿಂದ ಆವೃತವಾಗಿರುವುದರಿಂದ ಮತ್ತು ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕವು ಸರಿಯಾಗಿಲ್ಲ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಮಿಲಿಟರಿ ಹೆಲಿಕಾಪ್ಟರ್​ ಒಂದೇ ಲಭ್ಯವಿರುವ ಏಕೈಕ ಸಾರಿಗೆ ವ್ಯವಸ್ಥೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ನಾರಾಯಣ ಬೆಹೆರಾ ಅವರ ಪೋಷಕರು ಅವರ ಘಟಕದ ಕಮಾಂಡರ್‌ಗಳನ್ನು ಸಂಪರ್ಕಿಸಿ, ಕಾಶ್ಮೀರದಲ್ಲಿ ಹಿಮಪಾತವಾಗಿರುವುದರಿಂದ ತಮ್ಮ ಮಗ ಮದುವೆಗೆ ಬರಲು ಸಾಧ್ಯವಾಗದಿರಬಹುದು, ಆತನ ಮದುವೆ ನಿಂತುಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಗಡಿಭಾಗ) ರಾಜಾ ಬಾಬು ಸಿಂಗ್ ಅವರ ಗಮನಕ್ಕೆ ತರಲಾಯಿತು.

ಶ್ರೀನಗರದಲ್ಲಿ ಬೀಡುಬಿಟ್ಟಿರುವ ಪಡೆಯ ಚೀತಾ ಹೆಲಿಕಾಪ್ಟರ್ ಅನ್ನು ತಕ್ಷಣವೇ ಕರೆಸಿ, ನಾರಾಯಣ ಬೆಹೆರಾ ಅವರನ್ನು ಏರ್‌ಲಿಫ್ಟ್ ಮಾಡಬೇಕು ಎಂದು ರಾಜಾ ಬಾಬು ಸಿಂಗ್ ಆದೇಶಿಸಿದರು. ಹೆಲಿಕಾಪ್ಟರ್ ಇಂದು ಮುಂಜಾನೆ ಬೆಹೆರಾ ಅವರನ್ನು ಶ್ರೀನಗರಕ್ಕೆ ಕರೆತಂದಿತು.

Published On - 8:06 pm, Sat, 30 April 22

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ