ಒಡಿಶಾ: ಮಾರ್ಗ ಮಧ್ಯೆ ಬಸ್​ ಚಾಲಕನಿಗೆ ಕಾಣಿಸಿಕೊಂಡ ಎದೆನೋವು, ಸಾವಿಗೂ ಮುನ್ನ 48 ಪ್ರಯಾಣಿಕರ ರಕ್ಷಣೆ

|

Updated on: Oct 29, 2023 | 8:26 AM

ಬಸ್​ ಚಾಲಕರೊಬ್ಬರಿಗೆ ಹಠಾತ್​ ಎದೆನೋವು ಕಾಣಿಸಿಕೊಂಡಿತ್ತು. ನಿಯಂತ್ರಣ ತಪ್ಪಿತ್ತು, ಆದರೂ ಸಾವಿಗೂ ಮುನ್ನ ಅವರು 48 ಪ್ರಯಾಣಿಕರನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಖಾಸಗಿ ಬಸ್​ವೊಂದು ಭುವನೇಶ್ವರಕ್ಕೆ ಹೊರಟಿತ್ತು, ಮಾರ್ಗಮಧ್ಯೆ ಬಸ್ ಚಾಲಕರಿಗೆ ಎದೆನೋವು ಕಾಣಿಸಿಕೊಂಡಿತ್ತು, ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದರು, ಹಾಗಾಗಿ ಪ್ರಯಾಣಿಕರಿಗೆ ಏನು ಆಗಬಾರದೆಂದು ರಸ್ತೆಯ ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್​ ಅನ್ನು ನಿಲ್ಲಿಸಿದ್ದಾರೆ.

ಒಡಿಶಾ: ಮಾರ್ಗ ಮಧ್ಯೆ ಬಸ್​ ಚಾಲಕನಿಗೆ ಕಾಣಿಸಿಕೊಂಡ ಎದೆನೋವು, ಸಾವಿಗೂ ಮುನ್ನ 48 ಪ್ರಯಾಣಿಕರ ರಕ್ಷಣೆ
ಹೃದಯಸ್ತಂಭನ
Follow us on

ಬಸ್​ ಚಾಲಕರೊಬ್ಬರಿಗೆ ಹಠಾತ್​ ಎದೆನೋವು ಕಾಣಿಸಿಕೊಂಡಿತ್ತು. ನಿಯಂತ್ರಣ ತಪ್ಪಿತ್ತು, ಆದರೂ ಸಾವಿಗೂ ಮುನ್ನ ಅವರು 48 ಪ್ರಯಾಣಿಕರನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಖಾಸಗಿ ಬಸ್​ವೊಂದು ಭುವನೇಶ್ವರಕ್ಕೆ ಹೊರಟಿತ್ತು, ಮಾರ್ಗಮಧ್ಯೆ ಬಸ್ ಚಾಲಕರಿಗೆ ಎದೆನೋವು ಕಾಣಿಸಿಕೊಂಡಿತ್ತು, ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದರು, ಹಾಗಾಗಿ ಪ್ರಯಾಣಿಕರಿಗೆ ಏನು ಆಗಬಾರದೆಂದು ರಸ್ತೆಯ ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್​ ಅನ್ನು ನಿಲ್ಲಿಸಿದ್ದಾರೆ.

ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್‌ನ ಚಾಲಕ ಸನಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಚಾಲನೆ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಅವರು ಗೋಡೆಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ ಅಲ್ಲಿಯೇ ನಿಂತಿದೆ, 48 ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ.

ಖಾಸಗಿ ಬಸ್, ಮಾ ಲಕ್ಷ್ಮಿ ಸಾಮಾನ್ಯವಾಗಿ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಚಲಿಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?

ಘಟನೆಯ ನಂತರ, ಚಾಲಕರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಲ್ಲಿನ ವೈದ್ಯರು ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಮತ್ತೋರ್ವ ಚಾಲಕರ ಸಹಾಯದಿಂದ ಬಸ್​ ತಲುಪಬೇಕಾದ ಸ್ಥಳವನ್ನು ತಲುಪಿತು. ಮರಣೋತ್ತರ ಪರೀಕ್ಷೆಯ ನಂತರ ಪ್ರಧಾನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ತನಿಖೆಯನ್ನೂ ಆರಂಭಿಸಲಾಗಿದೆ ಎಂದು ಇನ್​ಸ್ಪೆಕ್ಟರ್ ಸೆಂಧಾ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ