
[lazy-load-videos-and-sticky-control id=”AR3SCT8SbVA”]
ದೆಹಲಿ: ನಾಳೆ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಶ್ರೀ ಚಿನ್ನ ಜೀಯರ್ ಸ್ವಾಮೀಜಿ ಅವರು ಭಾಗಿಯಾಗುತ್ತಿಲ್ಲ.
ಸದಾ ಲೋಕ ಕಲ್ಯಾಣದ ಬಗ್ಗೆ ಯೋಚಿಸುವ ಹಾಗೂ ಜೀಯರ್ ಎಂದು ಕರೆಸಿಕೊಳ್ಳುವ ಅತ್ಯಂತ ಗೌರವಾನ್ವಿತ ಶ್ರೀ ರಾಮಾನುಜಾಚಾರ್ಯ ವಂಶಾವಳಿಗೆ ಸೇರಿರುವ ಶ್ರೀ ತ್ರಿಂದಾನಿ ಚಿನ್ನ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರನ್ನು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಆದರೆ, ಚಿನ್ನ ಜೀಯರ್ ಸ್ವಾಮೀಜಿಯವರು ಚಾರ್ತುರ್ಮಾಸ್ಯ ದೀಕ್ಷೆಯನ್ನು ಪಾಲಿಸುತ್ತಿರುವ ಹಿನ್ನೆಲೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.
Published On - 2:55 pm, Tue, 4 August 20