AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಹೊರಗೆ ಬಿಸಿಲು ಸುಡುತ್ತಿದೆ ಎಂದು ಎಸಿಯ ತಂಪು ವಾತಾವರಣದಲ್ಲಿದ್ದ ಎಟಿಎಂಗೆ ನುಗ್ಗಿತ್ತು ನಾಗರ, ಅದ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ

ಎಟಿಎಂಗೆ ಹಣ ತೆಗೆಯಲು ಹೋದ ಗ್ರಾಹಕರು ಭಯದಿಂದ ಓಡಿ ವಾಪಸ್ ಬಂದಿದ್ದಾರೆ. ವಿಶಾಖಪಟ್ಟಣದ ಸಿಂಧಿಯಾ ಶಿಪ್‌ಯಾರ್ಡ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ನಲ್ಲಿ ನಾಗರ ಹಾವೊಂದು ಎಟಿಎಂಗೆ ನುಗ್ಗಿತ್ತು.

ವಿಡಿಯೋ: ಹೊರಗೆ ಬಿಸಿಲು ಸುಡುತ್ತಿದೆ ಎಂದು ಎಸಿಯ ತಂಪು ವಾತಾವರಣದಲ್ಲಿದ್ದ ಎಟಿಎಂಗೆ ನುಗ್ಗಿತ್ತು ನಾಗರ, ಅದ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ
ಹಣಕ್ಕಾಗಿ ಎಟಿಎಂಗೆ ಹೋದಾಗ ಅಲ್ಲಿ ಕಾಣಿಸಿಕೊಂಡ ದೃಶ್ಯ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ
ಸಾಧು ಶ್ರೀನಾಥ್​
|

Updated on:May 16, 2023 | 4:39 PM

Share

ಎಟಿಎಂಗೆ ಹಣ ಡ್ರಾ ಮಾಡಲು ಹೋಗುತ್ತಿದ್ದೀರಾ.. ಹುಷಾರಾಗಿರಿ.. ಒಳಹೋದ ನಂತರ ಯಾವ ರೀತಿಯ ದೃಶ್ಯಗಳನ್ನು ಅಲ್ಲಿ ನೋಡಬೇಕಾಗುತ್ತದೋ.. ಗುಂಡಿಗೆಯನ್ನು ಭದ್ರವಾಗಿಟ್ಟುಕೊಂಡು ಸಾಗಬೇಕು. ಬಾಗಿಲಿನ ಬದಿಯಲ್ಲಿ ಬಚ್ಚಿಟ್ಟುಕೊಂಡಿದ್ದು ನಿಮ್ಮ ಮೇಲೆ ಒಮ್ಮೆಲೆ ದಾಳಿ ಮಾಡಬಹುದು. ಅದೆಲ್ಲಾ ತಪ್ಪಿಸಸಿಕೊಂಡು ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ಮೆಷಿನ್‌ನಲ್ಲಿ ಕಾರ್ಡ್ ಹಾಕುವಾಗ ನಿಮ್ಮ ಕಾಲಿನ ಬಳಿಯೇ ಪ್ರತ್ಯಕ್ಷವಾಗಿ ಕಾಲಿಗೆ ಸುತ್ತುಕೊಂಡುಬಿಟ್ಟರೆ ಗತಿಯೇನು? ನಖಶಿಖಾಂತ ಥರಗುಟ್ಟುವುದು ಖಚಿತ. ಇನ್ನು ವಿಷಯಕ್ಕೆ ಬರುವುದಾದರೆ

ಎಟಿಎಂಗೆ ಹಣ ತೆಗೆಯಲು ಹೋದ ಗ್ರಾಹಕರು ಭಯದಿಂದ ಓಡಿ ವಾಪಸ್ ಬಂದಿದ್ದಾರೆ. ವಿಶಾಖಪಟ್ಟಣದ ಸಿಂಧಿಯಾ ಶಿಪ್‌ಯಾರ್ಡ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ನಲ್ಲಿ ನಾಗರ ಹಾವೊಂದು ಎಟಿಎಂಗೆ ನುಗ್ಗಿದೆ. ನಗದು ಹಿಂಪಡೆಯಲು ಒಳಗೆ ಹೋದ ಗ್ರಾಹಕ ಅಲ್ಲಿ ಬುಸುಗುಟ್ಟುತ್ತಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಯಾರಿಗೆ ದಮ್ಮಿದೆಯೋ ಬನ್ನೀ ನನ್ನ ಮುಂದೆ ಎಂದು ಸವಾಲೆಸೆಯುವಂತೆ ಐದು ಅಡಿಯ ನಾಗರ ಹಾವು ಅಲ್ಲಿ ಓಲಾಡುತ್ತಿತ್ತು. ಅದನ್ನು ಕಂಡು ಹೌಹಾರಿದ ಗ್ರಾಹಕ ತಕ್ಷಣವೇ ಸಾವರಿಸಿಕೊಂಡು ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅವರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಹಾವು ಹಿಡಿಯುವವರು ಜಾಣ್ಮೆಯಿಂದ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಇದರಿಂದ ಬ್ಯಾಂಕ್ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲು ಸುಡುತ್ತಿದ್ದರಿಂದ ಹಾವು ತಣ್ಣನೆಯ ಎಟಿಎಂಗೆ ನುಗ್ಗಿರಬಹುದು ಎಂದು ಭಾವಿಸಲಾಗಿದೆ. ಇದೀಗ ವಿಡಿಯೋ ವೈರಲ್ ಆಗಿದೆ. ಎಟಿಎಂನಲ್ಲಿ ಹಾವು ಕಂಡು ನೆಟ್ಟಿಗರು ಸಹ ಕೊಂಚ ಭಯಗೊಂಡಿದ್ದಾರೆ. ಎಟಿಎಂಗೆ ಹೋಗುವಾಗ ಒಮ್ಮೆ ಸುತ್ತರಮುತ್ತಲು ಪರೀಕ್ಷಿಸಿಕೊಂಡು ಹೋಗುವಂತೆ ಸೂಚಿಸಲಾಗಿದೆ.

Published On - 4:37 pm, Tue, 16 May 23

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ